ಮಡಿಕೇರಿ, ಆ. 13: ಬದುಕಿನ ಮೂಲಾಧಾರವಾದ ಆಹಾರ ಅಕ್ಕಿಯನ್ನು ನಮ್ಮ ಮಣ್ಣಿನಲ್ಲಿಯೇ ಉತ್ಪಾದಿಸುವದರಿಂದ ಆರೋಗ್ಯಕ್ಕೂ ಉತ್ತಮವಾಗಲಿದೆ. ಈ ನಿಟ್ಟಿನಲ್ಲಿ ಭತ್ತದ ಬೆಳೆಗೆ ಸರಕಾರದಿಂದ ರೈತಾಪಿ ವರ್ಗಕ್ಕೆ ಪ್ರೋತ್ಸಾಹ ಸಿಗಬೇಕೆನ್ನುವ ಬೇಡಿಕೆ ವ್ಯಕ್ತಗೊಳ್ಳುತ್ತಿದ್ದು, ಈ ಬಗ್ಗೆ ಸರಕಾರದ ಗಮನ ಸೆಳೆಯುವದಾಗಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಹೇಳಿದರು.