ಮಡಿಕೇರಿ, ಆ. 22: ಮಡಿಕೇರಿ ನಗರದ ನೆಹರೂ ಮಂಟಪದ ಬಳಿ ಬಿಜೆಪಿ ವತಿಯಿಂದ ಸಸಿಗಳನ್ನು ನೆಡಲಾಯಿತು. ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಸುನೀಲ್ ಸುಬ್ರಮಣಿ, ನಗರ ಅಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಎಸ್.ಸಿ. ಸತೀಶ್, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾ ಖಜಾಂಚಿ ಮೋಹನ್ ಮೊಣ್ಣಪ್ಪ, ಐ.ಜಿ. ಶಿವಕುಮಾರ್, ಅರುಣ್ ಶೆಟ್ಟಿ, ಮೀನಾಜ್ ಪ್ರವೀಣ್ ಹಾಗೂ ಇನ್ನಿತರರು ಇದ್ದರು.