ಸೋಮವಾರಪೇಟೆ, ಜೂ. 1: ಇಲ್ಲಿನ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ಜಿಲ್ಲೆಯ ತಲಕಾಡು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿರುವ ಪಿಎಸ್ಐ ನಂದೀಶ್ಕುಮಾರ್ ಅವರಿಗೆ ಠಾಣಾ ಸಿಬ್ಬಂದಿಗಳು ಆತ್ಮೀಯವಾಗಿ ಬೀಳ್ಕೊಟ್ಟರು.
ಈ ಸಂದರ್ಭ ಎಎಸ್ಐ ರವೀಂದ್ರ, ಮುಖ್ಯಪೇದೆ ಚಲುವರಾಜು, ಪೇದೆಗಳಾದ ಶಿವಕುಮಾರ್, ಜಗದೀಶ್ ಮತ್ತಿತರರು ಠಾಣಾಧಿಕಾರಿಯವರೊಂದಿಗಿನ ಎರಡು ವರ್ಷಗಳ ಒಡನಾಟದ ಕುರಿತು ಮಾತನಾಡಿದರು. ಅಪರಾಧ ವಿಭಾಗದ ಪಿಎಸ್ಐ ಮಂಚಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಶ್ಮಿ ನಂದೀಶ್ಕುಮಾರ್ ಉಪಸ್ಥಿತರಿದ್ದರು. ಎಎಸ್ಐ ರವೀಂದ್ರ ಸ್ವಾಗತಿಸಿ, ಮುಖ್ಯಪೇದೆ ಶಿವಣ್ಣ ವಂದಿಸಿದರು.