ಮಡಿಕೇರಿ, ಸೆ. ೨: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ವತಿಯಿಂದ ೩೧ನೇ ವಾರ್ಷಿಕ ಸಾರ್ವಜನಿಕ ಕೈಲ್ಪೊಳ್ದ್ ಆಚರಣೆ ಮಡಿಕೇರಿ ಹೊರವಲಯದ ಕ್ಯಾಪಿಟಲ್ ವಿಲೇಜ್ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಸಂವಿಧಾನದ ಅಡಿಯಲ್ಲಿ ವಿಶೇಷ ಸ್ಥಾನಮಾನಕ್ಕಾಗಿ ಕೊಡವರು ಮುಂದಿಟ್ಟಿರುವ ಹಕ್ಕೊತ್ತಾಯವು ಸ್ಥಳೀಯ ಕೊಡವರ ಸ್ವಾಭಾವಿಕ ಹಾಗೂ ನ್ಯಾಯಸಮ್ಮತ ಹಕ್ಕಾಗಿದೆ. ಈ ಗುರಿ ತಾರ್ಕಿಕ ಅಂತ್ಯ ತಲುಪುವವರೆಗೂ ಸಿಎನ್ಸಿ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.
ಕೊಡವ ಸಂಸ್ಕೃತಿಯಲ್ಲಿ ಬಂದೂಕು, ಭೂತಾಯಿ, ಯೋಧತ್ವ, ಮಂದ್, ದೇವಕಾಡ್, ಪಿತ್ರಾರ್ಜಿತ ಭೂಮಿ ಹಾಗೂ ಕೊಡವ ವಂಶಾವಳಿಗಳು ಅವಿಭಾಜ್ಯ ಅಂಗಗಳಾಗಿವೆ. ಪೂರ್ವಜರ ಪರಂಪರೆ ಹಾಗೂ ಯೋಧ ಸಂಸ್ಕೃತಿಯ ಸಂಕೇತವಾಗಿ ಕೈಲ್ಪೊಳ್ದ್ ಸಂದರ್ಭದಲ್ಲಿ ಆಯುಧ ಪೂಜೆಯನ್ನು ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಸಂವಿಧಾನದ ೫೧ಂ(ಜಿ) ಅಡಿಯಲ್ಲಿ ಪ್ರಾಚೀನ ಹಾಗೂ ಅತಿ ಸಣ್ಣ ಜನಾಂಗೀಯ ಸಮುದಾಯದ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸುವುದು ರಾಜ್ಯ ಹಾಗೂ ಜನರ ಕರ್ತವ್ಯವಾಗಿದೆ. ಸಂವಿಧಾನದ ೩೨ನೇ ವಿಧಿಯಡಿ ಕೊಡವರ ಕುಂದುಕೊರತೆಗಳಿಗೆ ಸಾಂವಿಧಾನಿಕ ಪರಿಹಾರ ಕಲ್ಪಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕೊಡವಲ್ಯಾಂಡ್ಗೆ ಭೂ-ರಾಜಕೀಯ ಸ್ವಾಯತ್ತತೆ, ವಿಶೇಷ ಜನಾಂಗೀಯ ವರ್ಗೀಕರಣ, ಕೊಡವ ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರ್ಪಡೆ, ಬಂದೂಕು/ತೋಕ್ ಸಂಸ್ಕಾರಕ್ಕೆ ಧಾರ್ಮಿಕ ರಕ್ಷಣೆ, ಕೊಡವ ಪರಂಪರೆಗೆ ಯುನೆಸ್ಕೋ ಮಾನ್ಯತೆ ಸೇರಿದಂತೆ ೧೦ ಪ್ರಮುಖ ಬೇಡಿಕೆಗಳನ್ನು ಪುನರುಚ್ಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಉತ್ತರಾಂದ್ರ ಪ್ರತ್ಯೇಕ ರಾಜ್ಯ ಚಳವಳಿಯ ಅಧ್ಯಕ್ಷ ಹಾಗೂ ಫೆಡರೇಶನ್ ಆಫ್ ನ್ಯೂ ಸ್ಟೇಟ್ಸ್ನ ಉಪಾಧ್ಯಕ್ಷ ಮೆಟ್ಟಾ ರಾಮರಾವ್, ಐಆರ್ಎಸ್ (ನಿವೃತ್ತ), ಕೊಡವಲ್ಯಾಂಡ್ ಬೇಡಿಕೆ ದೇಶದಲ್ಲೇ ಅತ್ಯಂತ ಹಳೆಯ ಬೇಡಿಕೆಗಳಲ್ಲಿ ಒಂದಾಗಿದ್ದು, ಅದನ್ನು ಆದ್ಯತೆಯ ಮೇರೆಗೆ ಪರಿಹರಿಸುವ ನಿಟ್ಟಿನಲ್ಲಿ ಫೆಡರೇಶನ್ ಸಹಕರಿಸಲಿದೆ ಎಂದರು. ಕೊಡವರು ತಮ್ಮದೇ ಆದ ಕೊಡವಲ್ಯಾಂಡ್ ಹೊಂದುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಹೇಳಿದರು.
ಗೌರವ ಅತಿಥಿಯಾಗಿ ಮಾತನಾಡಿದ ವೈದ್ಯ ಹಾಗೂ ಸಮಾಜ ಸೇವಕ ಡಾ. ಮಾತಂಡ ಅಯ್ಯಪ್ಪ, ಕೊಡವ ಸಮುದಾಯದ ಶಾಸ್ತಿçÃಯ ನಾಮಕರಣವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಸಿಎನ್ಸಿ ಮತ್ತು ಎನ್.ಯು. ನಾಚಪ್ಪ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು. ಕೊಡವರ ಶಿಸ್ತು, ದೃಢತೆ ಮತ್ತು ಪ್ರಾಮಾಣಿಕತೆಯನ್ನು ದೌರ್ಬಲ್ಯವೆಂದು ಪರಿಗಣಿಸಬಾರದು ಎಂದು ಅವರು ಹೇಳಿದರು. ಕೊಡವರ ಭೂಮಿ ಹಾಗೂ ಅಸ್ಮಿತೆಯ ರಕ್ಷಣೆಗೆ ಸಾಂವಿಧಾನಿಕ ಮಾರ್ಗದಲ್ಲಿ ಹೋರಾಟ ನಡೆಸುವುದು ಅಗತ್ಯವಾಗಿದೆ ಎಂದರು.
ವಿಶೇಷ ಅತಿಥಿ, ಚೋಪ್ರಾ ಫೌಂಡೇಶನ್ ಸಿಇಒ ಹಾಗೂ ಅಮೆರಿಕದ ಉದ್ಯಮಿ ಬಲ್ಯಾಟಂಡ ಕಾವೇರ್ ಪೂಣಚ್ಚ, ಶಾಸನಬದ್ಧ ಹಕ್ಕುಗಳಿಗಾಗಿ ಸಿಎನ್ಸಿ ನೇತೃತ್ವದಲ್ಲಿ ನಡೆಯುತ್ತಿರುವ ೩೬ ವರ್ಷಗಳ ಶಾಂತಿಯುತ ಹೋರಾಟವನ್ನು ಶ್ಲಾಘಿಸಿದರು. ಪ್ರತಿಯೊಬ್ಬ ಕೊಡವನೂ ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಧವಿ ಮೆಟ್ಟಾ ರಾಮರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೈಲ್ಪೊಳ್ದ್ ಅಂಗವಾಗಿ ಬಂದೂಕುಗಳನ್ನು ‘ತೋಕ್ ಪೂವ್’ ಹೂವಿನಿಂದ ಅಲಂಕರಿಸಲಾಯಿತು. ಆಯುಧ ಪೂಜೆ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಹಾಗೂ ಸಾಂಪ್ರದಾಯಿಕ ಕೊಡವ ಶೈಲಿಯ ಭೋಜನ, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಈ ಸಂದರ್ಭ ಅಪ್ಪಚೀರ ರೀನಾ ನಾಣಯ್ಯ, ನಂದೇಟಿರ ಕವಿತಾ ಸುಬ್ಬಯ್ಯ, ಅರೆಯಡ ಸವಿತಾ ಗಿರೀಶ್, ಚೋಳಪಂಡ ಜ್ಯೋತಿ ನಾಣಯ್ಯ, ಬೊಟ್ಟಂಗಡ ಸವಿತಾ ಗಿರೀಶ್, ಪಟ್ಟಮಾಡ ಲಲಿತಾ ಗಣಪತಿ, ನಂದಿನೆರವAಡ ರೇಖಾ ನಾಚಪ್ಪ, ನಂದಿನೆರವAಡ ಬೀನಾ ಅಯ್ಯಣ್ಣ, ನಂದಿನೆರವAಡ ಸೋನಿಯಾ ಅಪ್ಪಣ್ಣ, ಹೊಟ್ಟೆಯಂಡ ಫ್ಯಾನ್ಸಿ ಬೊಳ್ಳಿಯಪ್ಪ, ಬೊಟ್ಟೋಳಂಡ ತಾರಾ, ನಂದಿನೆರವAಡ ನಿಶಾ ಅಚ್ಚಯ್ಯ, ನಾಯಕಂಡ ನಿಶಿತಾ ಚಂಗಪ್ಪ, ಪ್ರಣೀತಾ ಗಣಪತಿ, ಕಲಿಯಂಡ ಪ್ರಕಾಶ್, ಅಪ್ಪಚೀರ ರಮ್ಮಿ ನಾಣಯ್ಯ, ನಂದೇಟಿರ ರವಿ ಸುಬ್ಬಯ್ಯ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಡಾ. ಚೌರೀರ ಜಗತ್ ತಿಮ್ಮಯ್ಯ, ಅಜ್ಜಿಕುಟ್ಟಿರ ಲೋಕೇಶ್, ಉದಿಯಂಡ ಚಂಗಪ್ಪ, ಬಾಚರಣಿಯಂಡ ಚಿಪ್ಪಣ್ಣ, ಪಟ್ಟಮಾಡ ಕುಶಾ, ಬ್ರಿಗೇಡಿಯರ್ ಚೇನಂಡ ಚೀಯಣ್ಣ, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶೆರಿನ್, ಮಂದಪAಡ ಮನೋಜ್ ಮಂದಣ್ಣ, ಅರೆಯಡ ಗಿರೀಶ್, ಕಾಟುಮಣಿಯಂಡ ಉಮೇಶ್, ಬೇಪಾಡಿಯಂಡ ದಿನು, ಪುಲ್ಲೇರ ಕಾಳಪ್ಪ , ಪೊರಿಮಂಡ ದಿನಮಣಿ ಪೂವಯ್ಯ, ಮಣವಟ್ಟಿರ ಚಿನ್ನಪ್ಪ, ಪಟ್ಟಮಾಡ ಅಶೋಕ್, ನಂದಿನೆರವAಡ ಅಚ್ಚಯ್ಯ, ಅಳಮಂಡ ನೆಹರು, ಅಪ್ಪಾರಂಡ ಪ್ರಸಾದ್, ಪುಲ್ಲೇರ ಬೋಪಯ್ಯ, ಐಲಪಂಡ ಮಿಟ್ಟು ಉತ್ತಪ್ಪ, ಮೀದೇರಿರ ತಿಮ್ಮಯ್ಯ, ಕೊಣಿಯಂಡ ಸಂಜು ಸೋಮಯ್ಯ, ಪಾಲೆಕಂಡ ಪ್ರಧಾನ್ ಪೂಣಚ್ಚ, ಐತಿಚಂಡ ಪೂವಣ್ಣ, ನೆಲ್ಲಿರ ಮಧು ತಿಮ್ಮಯ್ಯ, ನಾಗವಂಡ ಕೃಪಾ ಕಾವೇರಪ್ಪ, ಮೇದರ ಕಂಠಿ ನಾಣಿಯಪ್ಪ, ಕಾಂಡೇರ ಸುರೇಶ್, ಪಂದಿಯAಡ ವಾಸು ಮಾಚಯ್ಯ, ಪಟ್ರಪಂಡ ರಮೇಶ್ ಬೋಪಯ್ಯ, ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಚೋಳಪಂಡ ನಾಣಯ್ಯ, ಬಾಚಿನಾಡಂಡ ಗಿರೀಶ್ ಪೊನ್ನಪ್ಪ, ಅಪ್ಪೆಂಗಡ ಮಾಲೆ ಪೂಣಚ್ಚ, ನಂದಿನೆರವAಡ ಅಪ್ಪಯ್ಯ, ಚೀಯಬೇರ ಸತೀಶ್ ಸೋಮಣ್ಣ, ಬೆಲ್ಲತಂಡ ಕಿರಣ್ ಪೂವಯ್ಯ, ಬಲ್ಯಾಟಂಡ ಕೌಶಿಕ್ ಕುಟ್ಟಯ್ಯ, ಜಮ್ಮಡ ಮೋಹನ್, ಬಲ್ಲಚಂಡ ಸುನಿಲ್ ಬಿದ್ದಪ್ಪ, ಬಲ್ಲಟಿಕಾಳಂಡ ರಾಯ್ ಮಂದಣ್ಣ, ಬಡುವಂಡ ವಿಜಯ, ನಂದಿನೆರವAಡ ರವಿ ಕುಟ್ಟಪ್ಪ, ಕೊಟ್ಕತ್ತಿರ ಬಾಬಿ ಪಳಂಗಪ್ಪ, ಪೊರಿಮಂಡ ಧ್ಯಾನ್ ಪೊನ್ನಣ್ಣ, ಬದಲೇರ ಕೌಶಿಕ್ ಬೊಳ್ಳಿಯಪ್ಪ, ಮಣವಟ್ಟಿರ ಸ್ವರೂಪ್ ಪೂವಯ್ಯ, ಮಣವಟ್ಟಿರ ನಂದ ಭೀಮಯ್ಯ, ಮಂದಪAಡ ಸೂರಜ್ ಕಾವೇರಪ್ಪ, ಪಾರುವಂಗಡ ನವೀನ್, ಕೂತಂಡ ರೋಷನ್, ಅಪ್ಪಾರಂಡ ಪ್ರಕಾಶ್, ಅಪ್ಪಾರಂಡ ವಿಜು, ಪಾಲೆಕಂಡ ಪ್ರತಾಪ್, ಸಾದೇರ ರಮೇಶ್, ಮೇಕೇರಿರ ಬಬ್ಬು, ಬೊಳಕಾರಂಡ ವಿಠಲ್ ಹಾಗೂ ಅಪ್ಪನೆರವಂಡ ವಿನು ಮಾದಪ್ಪ ಹಾಜರಿದ್ದರು.