ಕೂಡಿಗೆ, ಜು. ೨೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರಿನ ಉತ್ತಯ್ಯ ಎಂಬವರ ಜಮೀನಿಗೆ ಕಾಡಾನೆ ದಾಳಿ ಮಾಡಿ ನಷ್ಟಪಡಿಸಿದೆ. ಸ್ಥಳಕ್ಕೆ ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅನಂತ, ಹೆಬ್ಬಾಲೆ ವಲಯ ಉಪ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.