ಗೋಣಿಕೊಪ್ಪಲು, ಫೆ.೧೬: ಜಂಗಲಾಡಿ ನಿವಾಸಿ ಆದಿತ್ಯ (೧೯) ಎಂಬವರು ತನ್ನ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಚನ್ನಂಗೊಲ್ಲಿ ಬಳಿಯ ಇಳಿಜಾರಿನ ರಸ್ತೆಯಲ್ಲಿ ಸ್ಕೂಟಿ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾದ ಘಟನೆ ನಡೆದಿದ್ದು, ರಸ್ತೆ ಬದಿಯಲ್ಲೇ ಬಿದ್ದಿದ್ದ ಗಾಯಾಳುವನ್ನು ಗಮನಿಸಿದ ಶಾಸಕ ಪೊನ್ನಣ್ಣ ತಮ್ಮ ವಾಹನದಿಂದ ಇಳಿದು ತಮ್ಮ ಎಸ್ಕಾರ್ಟ್ ವಾಹನದಲ್ಲಿ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದರು.
ವೀರಾಜಪೇಟೆಯಲ್ಲಿ ನಡೆದ ಕಾಂಗ್ರೆಸ್ ಪಾದಯಾತ್ರೆ ಕಾರ್ಯಕ್ರಮ ಮುಗಿಸಿ ಶಾಸಕ ಪೊನ್ನಣ್ಣ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ಗೋಣಿಕೊಪ್ಪ - ತಿತಿಮತಿ ಮುಖ್ಯ ರಸ್ತೆಯ ಚನ್ನಂಗೊಲ್ಲಿ ಬಳಿ ರಸ್ತೆ ಬದಿಯಲ್ಲೇ ಅಪಘಾತಕ್ಕಿಡಾದ ವ್ಯಕ್ತಿ ಬಿದ್ದಿರುವುದನ್ನು ಗಮನಿಸಿ ಖುದ್ದಾಗಿ ತೆರಳಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು.
- ಹೆಚ್.ಕೆ.ಜಗದೀಶ್