ನಾಪೋಕ್ಲು, ನ. ೨೯: ದುಬೈಯಲ್ಲಿ ನೆಲೆಸಿರುವ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜಗಳ ಸ್ನೇಹ ಸಮ್ಮಿಲನ ೨೦೨೫ ಕಾರ್ಯಕ್ರಮವು ದುಬೈಯ ಆಶಿಯಾನ ಫಾರ್ಮ್ ಹೌಸ್ ಸಭಾಂಗಣದಲ್ಲಿ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಹೊದ್ದೆಟ್ಟಿ ರಾಮಚಂದ್ರ ಅವರು ವಹಿಸಿಕೊಂಡಿದ್ದು, ಮುಖ್ಯ ಅತಿಥಿಯಾಗಿ ಮುಕ್ಕಾಟಿ ಕಿಶೋರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ದೇಶ ಹಾಗೂ ವಿದೇಶದಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಹಾಗೂ ಉದ್ಯಮಿಗಳನ್ನು ಸನ್ಮಾನ ಮಾಡಿ ಗೌರವಿಸಲಾಯಿತು. ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಮ್ಮೇಳನದ ಮುಖ್ಯ ಆಯೋಜಕರಾಗಿ ಮೋಹನ್ ಕಡಂಬಳ, ಹರೀಶ್ ಕೋಡಿ, ಸುನಿಲ್ ಮೊಟ್ಟೆಮನೆ, ಸುರೇಶ್ ಕುಂಪಲ, ತೇಜ್ ಕುಮಾರ್ ಕೊರಂಬಡ್ಕ, ದಿಲೀಪ್ ಉಳುವಾರ, ಶರತ್ ಚೊಕ್ಕಾಡಿ, ರೋಶನ್ ಕಂಪ, ಸುಪ್ರೀತ್ ಕುಂಡಡ್ಕ, ಜೀವನ್ ಗೌಡ ಕುಂಜತ್ತಾಡಿ, ಯತೀಶ್ ಗೌಡ ಕಾಡಮನೆ, ರತೀಶ್ ಬಗ್ಗನಮನೆ, ಆಶಿಶ್ ಹರೀಶ್ ಕೋಡಿ, ಮೀನಾ ಹರೀಶ್ ಕೋಡಿ, ಪುಲೋಮ ಮಹೇಂದ್ರ ಕೊಳಂಬೆ, ಹಾಗೂ ಇತರ ಸದಸ್ಯರು ಶ್ರಮಿಸಿದ್ದರು.
ನಿರ್ವಹಣೆಯನ್ನು ನಿತಿನ್ ದೋರ್ತೋಡಿ ಸಾರಥ್ಯದೊಂದಿಗೆ ನಿರೂಪಕಿ ಶ್ರಾವ್ಯ ಗೌಡ ಹಾಗೂ ರಕ್ಷಿತಾ ಸುಪ್ರೀತ್ ನೆರವೇರಿಸಿಕೊಟ್ಟರು.