ಹೆಬ್ಬಾಲೆ, ನ. ೨೮: ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಪರಿಷತ್ತಿನ ಕುಶಾಲನಗರ ತಾಲೂಕು ಸಮಿತಿ ಹಾಗೂ ಪರಿಷತ್ತಿನ ಹೆಬ್ಬಾಲೆ ಹೋಬಳಿ ಘಟಕದ ವತಿಯಿಂದ ಹೆಬ್ಬಾಲೆ ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಹೆಬ್ಬಾಲೆ ಬನಶಂಕರಿ ವಾರ್ಷಿಕ ಜಾತ್ರೆ ಅಂಗವಾಗಿ ಏರ್ಪಡಿಸಲಾಗಿದ್ದ ಗ್ರಾಮೀಣ ಕವಿಗೋಷ್ಠಿ ಶೋತೃಗಳ ಗಮನ ಸೆಳೆಯಿತು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ೨೫ಕ್ಕೂ ಹೆಚ್ಚು ಮಂದಿ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಪ್ರೇಕ್ಷಕರ ಗಮನ ಸೆಳೆದರು.

ಕವಿಗೋಷ್ಠಿ ಕುರಿತು ಆಶಯ ಭಾಷಣ ಮಾಡಿದ ಕೊಡಗು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ಡಾ. ಜಮೀರ್ ಅಹ್ಮದ್, ಸುಂದರ ಹಸಿರು ಪರಿಸರದಲ್ಲಿ ಏರ್ಪಡಿಸಿರುವ ಗ್ರಾಮದ ಜಾತ್ರೆಯ ಅಂಗವಾಗಿ ಏರ್ಪಡಿಸಿರುವ ಇಂತಹ ಕವಿಗೋಷ್ಠಿಗಳು ಸ್ಥಳೀಯ ಗ್ರಾಮೀಣ ಯುವ ಹಾಗೂ ಉದಯೋನ್ಮುಖ ಕವಿಗಳಿಗೆ ಭವಿಷ್ಯತ್ತಿನಲ್ಲಿ ಉತ್ತಮ ಕವಿಗಳಾಗಿ ರೂಪುಗೊಳ್ಳಲು ಉತ್ತಮ ಅವಕಾಶವನ್ನು ಒದಗಿಸುತ್ತವೆ ಎಂದರು. ಕವಿಗೋಷ್ಠಿ ಉದ್ಘಾಟಿಸಿ ತಮ್ಮ ಸ್ವರಚಿತ ಕವನ ವಾಚಿಸಿ ಮಾತನಾಡಿದ ಹೆಬ್ಬಾಲೆ ಪಶು ಆಸ್ಪತ್ರೆಯ ವೈದ್ಯಾಧಿಕಾರಿಯೂ ಆದ ಯುವ ಕವಿಯಾದ ಡಾ. ಅಮೃತಾ, ಕವಿಗಳು ತಮ್ಮ ಕವನ ವಾಚಿಸುವುದರಿಂದ ನಮ್ಮ ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಿಕೊಂಡು ಬರವಣಿಗೆ ಕೌಶಲವನ್ನು ವೃದ್ಧಿಗೊಳಿಸುವ ಮೂಲಕ ಉತ್ತಮ ಸಾಹಿತ್ಯ ರಚನೆಗೆ ಸಹಕಾರಿಯಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಅವಕಾಶ ಒದಗಿಸುವ ದಿಸೆಯಲ್ಲಿ ಇಂತಹ ಕವಿಗೋಷ್ಠಿಯನ್ನು ಸಂಘಟಿಸಲಾಗಿದೆ.

ಗ್ರಾಮೀಣ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಜನಪದ ಕಲೆಗಳನ್ನು ಪುನರುಜ್ಜೀವನಗೊಳಿಸುವ ದಿಸೆಯಲ್ಲಿ ಕಸಾಪ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗನ್ನು ಸಂಘಟಿಸಲಾಗುತ್ತಿದೆ ಎಂದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್, ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಫ್ಯಾನ್ಸಿ ಮುತ್ತಣ್ಣ, ಮೆ.ನಾ. ವೆಂಕಟನಾಯಕ್, ಸಾಹಿತಿ ಭಾರದ್ವಾಜ ಕೆ. ಆನಂದತೀರ್ಥ, ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ನಾಗೇಶ್, ಕಾರ್ಯದರ್ಶಿಗಳಾದ ಟಿ.ವಿ. ಶೈಲಾ, ಕೋಶಾಧಿಕಾರಿ ಕೆ.ವಿ. ಉಮೇಶ್, ಪದಾಧಿಕಾರಿ ಎಂ.ಎನ್. ಕಾಳಪ್ಪ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಕಸಾಪ ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷ ನಾಗರಾಜ್, ಕಸಾಪ ಹೆಬ್ಬಾಲೆ ಘಟಕದ ಕಾರ್ಯದರ್ಶಿಗಳಾದ ಹೆಚ್.ಎನ್. ಸುಬ್ರಮಣ್ಯ, ಕವಿತ ಪುಟ್ಟೇಗೌಡ, ಸ್ಥಳೀಯ ಉದ್ಯಮಿಗಳಾದ

ಧರ್ಮರಾಮ್, ಹನುಮಾನ್ ರಮ್, ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಟಿ. ರಮೇಶ್, ಕಾರ್ಯದರ್ಶಿ ಸೋಮಣ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ರಘು, ನಿವೃತ್ತ ಯೋಧ ಪುಟ್ಟೇಗೌಡ (ತಾಂಡು), ಜಿಲ್ಲಾ ಆರೋಗ್ಯ ನಿವೃತ್ತ ಶಿಕ್ಷಣಾಧಿಕಾರಿ ಪುಟ್ಟಪ್ಪ, ನಿವೃತ್ತ ಶಿಕ್ಷಕ ಹೆಚ್.ಎಸ್. ಲೋಕೇಶ್, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಇದ್ದರು.ಕವಿಗೋಷ್ಠಿ ಸಂಘಟನೆ ಕುರಿತು ಡಾ. ಅಮೃತಾ ಅವರ ತಾಯಿ ಪ್ರೇಮ ಮೆಚ್ಚುಗೆ ವ್ಯಕ್ತಪಡಿಸಿದರು. ಕವಿಗೋಷ್ಠಿಯಲ್ಲಿ ಚುಟುಕು ಕವನಗಳು ವಾಚಿಸಿದ ಕವಿ ಹಾ.ತಿ. ಜಯಪ್ರಕಾಶ್ ಪ್ರೇಕ್ಷಕರನ್ನು ರಂಜಿಸಿದವು.

ಕವನ ವಾಚಿಸಿದ ಕವಿಗಳು: ಕವಿಗೋಷ್ಠಿಯಲ್ಲಿ ಸಂಪಾಜೆಯ ಸಹನಾ ಕಾಂತಬೈಲು, ಶಿವದೇವಿ ಅವನೀಶ್ಚಂದ್ರ, ಹರೀಶ್ ಸರಳಾಯ, ಹೇಮಂತ್ ಪಾರೇರಾ, ಹೆ.ಹು. ಸುಂದರ್, ವಿನಯ ರಾಜಶೇಖರ್, ಅಕ್ಷಯ್ ಕಾಂತಬೈಲು, ಸುಕುಮಾರ್ ತೊರೆನೂರು, ರೇಣುಕಾ ಮುಕ್ಕಾಟಿ, ಕೆ.ಎಸ್. ನಳಿನಿ, ಸೈಮನ್, ಎಂ.ಎಸ್. ಮಹೇಂದ್ರ, ಡಿ. ಕವಿತಾ, ನಾಗರಾಜ್, ವಿ. ಕೃಷ್ಣ, ಹಂಸವೇಣಿ, ಎ.ಆರ್. ಶೈಲಾ, ಕೆ.ಎನ್. ಅಕ್ಷತಾ, ಹೆಚ್.ಎಸ್.ಮಂಜುಳಾ ಸೇರಿದಂತೆ ಇತರರು ತಮ್ಮ ಸ್ವರಚಿತ ಕವನ ವಾಚಿಸಿ ಗಮನ ಸೆಳೆದರು.