ಕೂಡಿಗೆ, ನ. ೨೪: ಕೂಡಿಗೆಯ ಪವಿತ್ರ ಕಾವೇರಿ- ಹಾರಂಗಿ ನದಿ ಸಂಗಮ ಕ್ಷೇತ್ರವಾದ ಕೂಡಿಗೆಯ ಟಾಟಾ ಕಾಫಿ ನಿಯಮಿತ ಕುಶಾಲನಗರ ಕಾಫಿ ಸಂಸ್ಕರಣಾ ಕೇಂದ್ರದ ವ್ಯಾಪ್ತಿಯಲ್ಲಿರುವ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ ೫೭ನೇ ವಾರ್ಷಿಕ ಮಹಾ ರಥೋತ್ಸವವು ತಾ.೨೬ರಂದು ನಡೆಯಲಿದೆ.

ರಥೋತ್ಸವದ ಅಂಗವಾಗಿ ತಾ.೨೫ರಂದು (ಇಂದು) ಬೆಳಿಗ್ಗೆ ಧ್ವಜಾರೋಹಣ, ಗಣಹೋಮ ಹಾಗೂ ಸುಬ್ರಹ್ಮಣ್ಯ ಹೋಮ ನಡೆದು ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನೆರವೇರಲಿದೆ.

ರಾತ್ರಿ ೭ ಗಂಟೆಗೆ ಮಹಾಪೂಜೆ, ಅಷ್ಠಾವದಾನ ಸೇವೆ, ಮಹಾಮಂಗಳಾರತಿ, ರಾಜ ಬೀದಿಯಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದೆ .

ತಾ.೨೬ ರಂದು ಚಂಪಾ ಷಷ್ಠಿ ಅಂಗವಾಗಿ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಾನದಲ್ಲಿ ಬೆಳಿಗ್ಗೆ ೭ ಗಂಟೆಗೆ ಅಭಿಷೇಕ ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆದು ೧೧-೩೦ಕ್ಕೆ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಧಿಗ್ಬಲಿ, ರಥ ಬಲಿ, ರಥ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ಮಹಾ ರಥೋತ್ಸವ ನಡೆಯಲಿದೆ. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ಮದ್ದುಗುಂಡುಗಳ ಪ್ರದರ್ಶನವು ಹನುಮ ಸೇನಾ ಸೇವಾ ಸಮಿತಿ ವತಿಯಿಂದ ನಡೆಯಲಿದೆ.