ಹೆಬ್ಬಾಲೆ, ನ. ೨೨ : ಉತ್ತರ ಕೊಡಗಿನ ಹೆಬ್ಬಾಲೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವವು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಅಮ್ಮನವರ ಸನ್ನಿಧಿಯಲ್ಲಿ ಬೆಳಿಗ್ಗೆ ೭ ಗಂಟೆಯಿAದ ಗಣಪತಿ ಪೂಜೆ, ಪುಣಾಹಃ ರಕ್ಷಾಬಂಧನ, ಧ್ವಜಾರೋಹಣ ನವಗ್ರಹ ಸ್ಥಾಪನೆ, ನವಗ್ರಹ ಪೂಜೆ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ನೆರವೇರಿದವು.

ದೇವಿಯ ವಾರ್ಷಿಕ ಹಬ್ಬದ ಅಂಗವಾಗಿ ಪವಿತ್ರ ಬನದಲ್ಲಿ ಬನಶಂಕರಿ ದೇವಸ್ಥಾನದಲ್ಲಿ ಬೆಳಿಗ್ಗೆ ಕಳಶ ಸ್ಥಾಪಿಸುವುದರೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಟಿ.ರಮೇಶ್ ಹಾಗೂ ಕಾರ್ಯದರ್ಶಿ ಎಚ್.ಟಿ.ಸೋಮಣ್ಣ ಹಾಗೂ ಸಮಿತಿ ಸದಸ್ಯರ ನೇತೃತ್ವದಲ್ಲಿ ನಡೆದವು. ಜಾತ್ರೆಯ ಅಂಗವಾಗಿ ದೇವಸ್ಥಾನ ಸಮಿತಿ ವತಿಯಿಂದ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿಯಿಂದ ರಾತ್ರಿ ವಿದ್ಯುತ್ ಅಲಂಕೃತ ಮಂಟಪದಲ್ಲಿ ಬನಶಂಕರಿ ಅಮ್ಮನನ್ನು ಶೃಂಗರಿಸಿ ಉತ್ಸವ ಮಂಟಪದಲ್ಲಿ ಮೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯಲಾಯಿತು.

೯ ದಿವಸ ಉಪವಾಸ ವ್ರತ ಆಚರಿಸಿದ ಹರಕೆ ಹೊತ್ತ ಭಕ್ತಾದಿಗಳು ಮೆರವಣಿಗೆಯಲ್ಲಿ ತಾಯಿಯ ಬನಕ್ಕೆ ಬಂದು ದೇವಸ್ಥಾನದ ಮುಂದೆ ಹಾಕಿರುವ ಅಗ್ನಿಕುಂಡವನ್ನು ಹಾಯ್ದು ದೇವಿಯ ದರ್ಶನ ಪಡೆದು ಪುನೀತರಾದರು. ದೇವಿಯ ಉತ್ಸವದೊಂದಿಗೆ ಗ್ರಾಮದ ಇತರ ಭಾಗಗಳಿಂದ ಹೊರಟ ಉತ್ಸವ ಮಂಟಪಗಳ ಶೋಭಾಯಾತ್ರೆಯು ಹಬ್ಬಕ್ಕೆ ಮೆರಗು ನೀಡಿತ್ತು. ಹಬ್ಬದ ಅಂಗವಾಗಿ ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಹಾಗೂ ದೇವಸ್ಥಾನಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಮೆರವಣಿಗೆ ಸಂದರ್ಭ ಗ್ರಾಮದ ಬಸ್ ನಿಲ್ದಾಣದ ಬಳಿ ಬಣ್ಣ ಬಣ್ಣದ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸೆಳೆದವು.

ಈ ಹಬ್ಬಕ್ಕೆ ಮೈಸೂರು, ಹಾಸನ ಜಿಲ್ಲೆಗಳ ಗಡಿಭಾಗದ ಜನರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡು ದೇವಿ ದರ್ಶನ ಪಡೆದರು. ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಹಬ್ಬದ ಯಶಸ್ವಿಗೆ ಶ್ರಮಿಸಿದರು.

ನಲ್ವತ್ತು ವರ್ಷಗಳಿಂದ ಕೊಂಡೋತ್ಸವ ಸೇವೆ

ಇಲ್ಲಿನ ನಿವಾಸಿಗಳಾದ ದಿ. ಹುಚ್ಚಪ್ಪ ಹಾಗೂ ಅಮ್ಮಣ್ಣಮ್ಮ ಅವರ ಪುತ್ರ ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ ವಿಜಯ ಹಾಗೂ ಶೈಲಜಾ ವಿಜಯ್ ಅವರು ಕಳೆದ ನಲ್ವತ್ತು ವರ್ಷಗಳಿಂದ ೪ ನಾಲ್ಕನೇ ಪುಟಕ್ಕೆ

ದಲ ಪುಟದಿಂದ) ಕೊಂಡೋತ್ಸವದ ಸೇವಾರ್ಥದಾರರಾಗಿ ಶ್ರೀ ಬನಶಂಕರಿ ದೇವಿ ಕೃಪೆಗೆ ಪಾತ್ರರಾಗಿದ್ದಾರೆ.

ನಲ್ವತ್ತು ವರ್ಷಗಳ ಹಿಂದೆ ಸ್ಕೂಟರ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ವಿಜಯ ಅವರಿಗೆ ಕಾಲು ಮುರಿದು ಆಸ್ಪತ್ರೆ ಸೇರಿದರು.ಆಗ ವೈದ್ಯರು ಕಾಲಿಗೆ ಹಾನಿಯಾಗಿದೆ ಸರಿಯಾಗುವುದು ಕಷ್ಟಸಾಧ್ಯ ಎಂದು ತಿಳಿಸಿದರಂತೆ ಆಗ ವಿಜಯ್ ಅವರ ತಾಯಿ ಅಮ್ಮಣ್ಣಮ್ಮ ಗ್ರಾಮದ ಶಕ್ತಿ ದೇವತೆ ಶ್ರೀ ಬನಶಂಕರಿ ದೇವಿ ಮೊರೆ ಹೋಗಿ ನನ್ನ ಮಗನ ಕಾಲು ಎಂದಿನAತೆ ಸರಿಯಾಗುವಂತೆ ತಾಯಿ ಕರುಣಿಸು ಎಂದು ಪ್ರಾರ್ಥನೆ ಮಾಡಿ, ಕಾಲು ಸರಿಯಾದರೆ ಪ್ರತಿ ವರ್ಷ ನಡೆಯುವ ಹಬ್ಬದಲ್ಲಿ ಕೊಂಡೋತ್ಸವದ ಸೇವಾರ್ಥದಾರರಾಗಿ ನನ್ನ ಮಗ ಇರುವ ತನಕವೂ ಸೇವೆ ಮಾಡುತ್ತಾನೆ ಎಂದು ಹರಕೆ ಮಾಡಿಕೊಂಡರAತೆ. ನಂತರ ವೈದ್ಯರೇ ಆಶ್ಚರ್ಯಪಡುವ ರೀತಿಯಲ್ಲಿ ವಿಜಯ್ ಅವರ ಕಾಲು ಸರಿಯಾಗಿ ಗುಣಮುಖರಾಗಿ ಎಂದಿನAತೆ ನಡೆದಾಡುವಂತೆ ಆಗಿದ್ದು, ಆರೋಗ್ಯ ಸುಧಾರಣೆಗೆ ಶ್ರೀ ಬನಶಂಕರಿ ದೇವಿಯೆ ಕಾರಣೀಭೂತಳು ಎಂದು ದೃಢವಾಗಿ ನಂಬಿದ ಅಮ್ಮಣ್ಣಮ್ಮ ಅವರು ದೇವಸ್ಥಾನ ಸಮಿತಿಗೆ ತಮ್ಮ ಹರಕೆಯ ಕೋರಿಕೆ ಸಲ್ಲಿಸಿ ಅವರ ಒಪ್ಪಿಗೆ ಪಡೆದು ಅಂದಿನಿAದ ಶ್ರೀ ಬನಶಂಕರಿ ಹಬ್ಬದಲ್ಲಿ ವಿಜಯ್ ಅವರು ಕೊಂಡೋತ್ಸವ ಸೇವೆ ಮಾಡುತ್ತಿದ್ದಾರೆ. ನಲ್ವತ್ತು ವರ್ಷಗಳಿಂದ ಕೊಂಡೋತ್ಸವಕ್ಕೆ ಬೇಕಾಗುವ ಸೌದೆ, ಪೂಜಾ ಸಾಮಗ್ರಿಗಳು ಸೇರಿದಂತೆ ಎಲ್ಲಾ ಖರ್ಚು ಭರಿಸುವ ವಿಜಯ್ ಹಾಗೂ ಶೈಲಜಾ ವಿಜಯ್ ಅವರು ಹಬ್ಬದ ದಿನ ಗ್ರಾಮಕ್ಕೆ ಬಂದು ದೇವಿಗೆ ಹಾಗೂ ಕೊಂಡೋತ್ಸವಕ್ಕೆ ಪೂಜೆ ಸಲ್ಲಿಸಿ ಅಗ್ನಿಸ್ಪರ್ಶ ಮಾಡುತ್ತಿದ್ದಾರೆ. ಇದೇ ರೀತಿ ವಿವಿಧ ಬೇಡಿಕೆಗಳನ್ನು ಈಡೇರಿಸು ತಾಯಿ ಎಂದು ಹರಕೆ ಹೊತ್ತ ಭಕ್ತರು ಒಂಭತ್ತು ದಿನಗಳ ಕಾಲ ಉಪವಾಸ ವ್ರತ ಆಚರಿಸಿ ಅಗ್ನಿಕುಂಡ ತುಳಿದು ದೇವಿಗೆ ತುಪ್ಪ ಅಭಿಷೇಕ ಮಾಡಿ ಆಶೀರ್ವಾದವನ್ನು ಪಡೆದು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಇದು ಈ ಹಬ್ಬದ ವಿಶಿಷ್ಟವಾಗಿದೆ ಎಂದು ಉದ್ಯಮಿ ವಿಜಯ್ ಅವರು ಶಕ್ತಿಯೊಂದಿಗೆ ತಮ್ಮ ಅನುಭವವನ್ನು ಹಂಚಿಕೊAಡಿದ್ದಾರೆ.