ಸೋಮವಾರಪೇಟೆ, ನ. ೧೩: ಜೇಸಿಐ ಪುಷ್ಪಗಿರಿ ಸೋಮವಾರಪೇಟೆ ಘಟಕದ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಮಕ್ಕಳ ಮ್ಯಾರಥಾನ್ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ಮ್ಯಾರಥಾನ್ ಕಾರ್ಯಕ್ರಮಗಳು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.

ಜೇಸಿ ಸಂಸ್ಥೆ ಸದಾ ಸಮಾಜಮುಖಿ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು, ಜೇಸಿ ಸಪ್ತಾಹದಂತಹ ಕಾರ್ಯಕ್ರಮಗಳ ಮೂಲಕ ಯುವ ಪೀಳಿಗೆಗೆ ಉತ್ತಮ ಪ್ರೇರಣೆ ನೀಡುತ್ತಿದೆ ಎಂದರು.

ಜೇಸಿಐ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್, ಪದಾಧಿಕಾರಿಗಳಾದ ಮಾಯಾ ಗಿರೀಶ್, ವಿನುತ ಸುದೀಪ್, ಜ್ಯೋತಿ ರಾಜೇಶ್, ರಾಜೇಶ್, ವಿನೋದ್ ಜಯರಾಮ್ ಸೇರಿದಂತೆ ಇತರರು ಇದ್ದರು.

ನಂತರ ಮಕ್ಕಳು ಹಾಗೂ ಸಾರ್ವಜನಿಕ ವಿಭಾಗದಲ್ಲಿ ನಿಧಾನವಾಗಿ ಸೈಕಲ್, ಬೈಕ್ ಚಾಲನೆ ಸ್ಪರ್ಧೆ, ಹಿಂದಕ್ಕೆ ವಾಹನ ಚಾಲಿಸುವ ಸ್ಪರ್ಧೆ ನಡೆಯಿತು. ಸಂಜೆ ಸೋಮವಾರಪೇಟೆಯ ಕಲಾವಿದ, ಜೇಸೀ ಮಾಜಿ ಅಧ್ಯಕ್ಷ ಮನೋಹರ್ ನೇತೃತ್ವದ ಪೂರ್ವಿಕ ರಸಮಂಜರಿ ತಂಡದಿAದ ಸಂಗೀತ ರಸಸಂಜೆ ನಡೆಯಿತು.

ಮಹಿಳಾ ಸಮಾಜದಲ್ಲಿ ಮೈಸೂರು ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರುಗಳಿಂದ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.