ಪೊನ್ನಂಪೇಟೆ, ನ. ೧೨: ಮಾನವೀಯ ಸ್ನೇಹಿತರ ಒಕ್ಕೂಟ ಕೊಡಗು ಇವರ ವತಿಯಿಂದ ಅಮ್ಮತ್ತಿ ಹೊಸಕೋಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಟ್ರಾö್ಯಕ್ಸೂಟ್, ಪಾದರಕ್ಷೆ ಹಾಗೂ ಕ್ರೀಡಾ ಪರಿಕರಗಳಾದ ಕೇರಂ ಬೋರ್ಡ್, ಶಟಲ್ ಬ್ಯಾಟ್, ಕಾಕ್, ಫುಟ್ಬಾಲ್ ನೀಡಲಾಯಿತು.
ಶಾಲೆಯ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿದ್ದು ಅವರಿಗೆ ಅಗತ್ಯವಾದ ಕ್ರೀಡಾ ಪರಿಕರಗಳನ್ನು ಒದಗಿಸಿ ಕೊಡುವಂತೆ ಶಾಲೆಯ ಶಿಕ್ಷಕರು ಒಕ್ಕೂಟಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ, ಮನವಿ ಪರಿಗಣಿಸಿ ಒಕ್ಕೂಟದ ವತಿಯಿಂದ ಸಹಾಯ ಮಾಡ ಲಾಯಿತು. ಈ ಸಂದರ್ಭ ಒಕ್ಕೂಟದ ವಕ್ತಾರ ಶಶಿಕುಮಾರ್ ಚೆಟ್ಟಳ್ಳಿ, ಪ್ರಮುಖರಾದ ಚೀರಂಡ ಚಂಗಪ್ಪ, ಅಗ್ನಿ ಚೆನ್ನನಾಯಕ, ಪ್ರತಿನಿಧಿಗಳಾದ ಆಲೆಮಾಡ ನವೀನ್ ದೇವಯ್ಯ, ಮುದ್ದಿಯಡ ರತೀಶ್ ಬಿದ್ದಪ್ಪ, ಐಮಣಿಯಂಡ ನವೀನ್, ಮುದ್ದಿಯಡ ನಿತಿನ್, ಶಾಲಾ ಶಿಕ್ಷಕಿ ಉಷಾ ದೇವರಾಜ್, ಅಂಗನವಾಡಿ ಶಿಕ್ಷಕಿ ಸುನಿತಾ, ಅಡುಗೆ ಸಿಬ್ಬಂದಿ ಭವ್ಯ ಮುಂತಾದವರು ಹಾಜರಿದ್ದರು.