ಮಡಿಕೇರಿ, ನ. ೧: ವಿಶ್ವ ರೇಬೀಸ್ ದಿನಾಚರಣೆಯ ಅಂಗವಾಗಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ವೈದ್ಯಶಾಸ್ತç ವಿಭಾಗದ ವತಿಯಿಂದ “ಒನ್ ಹೆಲ್ತ್ ಪರಿಕಲ್ಪನೆಯಡಿಯಲ್ಲಿ ರೇಬೀಸ್ ಮುಕ್ತ ಸಮಾಜ ಎಂಬ ವಿಷಯದ ಮೇಲೆ ಕಾರ್ಯಾಗಾರವು ನಗರದ ಹೊರ ವಲಯದಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವರ್ಲ್ಡ್ ಆರ್ಗನೈಸೇಶನ್ ಫಾರ್ ಅನಿಮಲ್ ಹೆಲ್ತ್ ರೆಫರೆನ್ಸ್ ಲ್ಯಾಬೊರೇಟರಿ ಫಾರ್ ರೇಬೀಸ್, ಪಶುವೈದ್ಯಕೀಯ ಮಹಾ ವಿದ್ಯಾಲಯ, ಕೆ.ವಿ.ಎ.ಎಫ್.ಎಸ್.ಯು., ಬೆಂಗಳೂರು, ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಕೊಡಗು ಘಟಕ ಮತ್ತು ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಕೊಡಗು ಘಟಕದ ಸಹಯೋಗದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಪಶು ವೈದ್ಯಕೀಯ ಆರೋಗ್ಯ ಕ್ಷೇತ್ರದ ತಜ್ಞ ಡಾ. ಶ್ರೀಕೃಷ್ಣ ಇಶ್ಲೂರ್ ಉದ್ಘಾಟಿಸಿದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಡಾ. ಲೋಕೇಶ್ ಎ.ಜೆ. ಮತ್ತು ಡಿ.ಹೆಚ್.ಓ. ಡಾ. ಸತೀಶ್ ಕುಮಾರ್ ಕೆ.ಎಂ. ಉಪಸ್ಥಿತರಿದ್ದರು. ಸಮುದಾಯ ವೈದ್ಯಶಾಸ್ತç ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥ ಡಾ. ರಾಮಚಂದ್ರ ಕಾಮತ್, ಡಾ. ನರಸಿಂಹ ರೈ, ಡಾ. ಶಿವಣ್ಣ, ಡಾ. ಶಾಮಪ್ಪಣ್ಣ ಮತ್ತು ರೆಡ್ಕ್ರಾಸ್ನ ರವೀಂದ್ರ ರೈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪಶು ವೈದ್ಯಕೀಯ ಆರೋಗ್ಯ ಕ್ಷೇತ್ರದ ತಜ್ಞ ಡಾ. ಶ್ರೀಕೃಷ್ಣ ಇಶ್ಲೂರ್ ಮತ್ತು ಡಾ. ನಿತಿನ್ ಪ್ರಭು ಹಾಗೂ ರೇಬೀಸ್ ನಿಯಂತ್ರಣ ತಜ್ಞರಾದ ಡಾ. ಡಿ.ಎಚ್. ಅಶ್ವತ್ಥ್ ನಾರಾಯಣ ಅವರು ರೇಬೀಸ್ ಸಾಂಕ್ರಾಮಿಕ ರೋಗಶಾಸ್ತç ತಡೆಗಟ್ಟುವಿಕೆ ತಂತ್ರಗಳು, ನಂತರದ-ಸಾAದರ್ಭಿಕ ರೋಗ ನಿರೋಧಕ ಮತ್ತು ಇಂಟರ್ಸೆಕ್ಟರ್ಒರಲ್ ಸಮನ್ವಯದ ಕುರಿತು ಒಳನೋಟವುಳ್ಳ ಮಾಹಿತಿ ನೀಡಿದರು.
ಪದವಿಪೂರ್ವ ವಿದ್ಯಾರ್ಥಿಗಳಿಗೆ ರೇಬೀಸ್ ಕುರಿತು ರಾಜ್ಯಮಟ್ಟದ ರಸಪ್ರಶ್ನೆ ನಡೆಸಲಾಯಿತು ಮತ್ತು ನಗದು ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನವನ್ನು ಬಿ.ಜಿ.ಎಸ್. ಗ್ಲೋಬಲ್ ಇನ್ಸ್ಟ್ಟಿಟ್ಯುಟ್ ಆಫ್ ಮೆಡಿಕಲ್ ಸೈನ್ಸಸ್, ದ್ವಿತೀಯ ಬಹುಮಾನ ಪಶು ವೈದ್ಯಕೀಯ ಕಾಲೇಜು ಹಾಸನ ಹಾಗೂ ತೃತಿಯ ಬಹುಮಾನ ಕೆಎಮ್ಸಿ ಮಣಿಪಾಲ್ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮನುಷ್ಯ ಮತ್ತು ಪಶು ಆರೋಗ್ಯ ತಜ್ಞರು “ಒನ್ ಹೆಲ್ತ್” ಪರಿಕಲ್ಪನೆಯ ಮಹತ್ವ, ರೇಬೀಸ್ನ ತಡೆಗಟ್ಟುವ ಕ್ರಮಗಳು, ಲಸಿಕಾ ವಿಧಾನಗಳು ಹಾಗೂ ಮಾನವ-ಪಶು ಆರೋಗ್ಯ ಕ್ಷೇತ್ರಗಳ ಸಂಯುಕ್ತ ಕಾರ್ಯಪದ್ಧತಿ ಕುರಿತು ಉಪನ್ಯಾಸ ನೀಡಿದರು.
ವೈದ್ಯಕೀಯ ಮತ್ತು ಪಶು ವೈದ್ಯಕೀಯ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದರು. “ಜೀರೋ ಬೈ ೨೦೩೦” ಎಂಬ ಜಾಗತಿಕ ಗುರಿಯನ್ನು ಸಾಧಿಸಲು ಮಾನವ ಮತ್ತು ಪಶು ಆರೋಗ್ಯ ವಿಭಾಗಗಳ ಸಮನ್ವಯ ಅಗತ್ಯವೆಂಬ ವಿಷಯವನ್ನು ಎಲ್ಲರೂ ಒಮ್ಮತದಿಂದ ಹೇಳಿದರು.