*ಗೋಣಿಕೊಪ್ಪ, ಅ. ೩೧: ನಿಧಾನವಾಗಿ ಸಾಗುತ್ತಿರುವ ಗೋಣಿಕೊಪ್ಪ ಕೊಡವ ಸಮಾಜ ಕಟ್ಟಡದ ಮುಂದುವರಿದ ಕಾಮಗಾರಿಗೆ ಅನುದಾನ ಒದಗಿಸಿಕೊಡುವುದಾಗಿ ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ಭರವಸೆ ನೀಡಿದರು.
ಕೊಡವ ಸಮಾಜದ ಆಡಳಿತ ಮಂಡಳಿ ಮನವಿ ಮೇರೆಗೆ ಕಟ್ಟಡವನ್ನು ವೀಕ್ಷಿಸಿದ ಸಂಸದರು ಆನುದಾನದ ಕೊರತೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಕೊಡವ ಸಮಾಜದ ಕಾರ್ಯದರ್ಶಿ ಸಿ.ಡಿ. ಮಾದಪ್ಪ ಮನವಿ ಪತ್ರ ಸಲ್ಲಿಸಿ ಆರ್ಥಿಕ ಕೊರತೆಯ ಬಗ್ಗೆ ಮನವರಿಕೆ ಮಾಡಿದರು. ಸಂಸದರ ನಿಧಿಯಿಂದ ಅನುದಾನ ನೀಡುವಂತೆ ಮನವಿ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಸಂಸದರು ಈಗಾಗಲೇ ಅನುದಾನವನ್ನು ಸಾಕಷ್ಟು ಕಾಮಗಾರಿಗಳಿಗೆ ಬಳಸಲಾಗಿದೆ. ಮುಂದಿನ ಏಪ್ರಿಲ್ ತಿಂಗಳಲ್ಲಿ ಕಟ್ಟಡ ಕಾಮಗಾರಿಗೆ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ೧೨ ಗ್ರಾಮಸಡಕ್ ಯೋಜನೆ ಕಾರ್ಯಾರಂಭಗೊAಡಿದೆ. ಜಿಲ್ಲೆಗೆ ಅವಶ್ಯಕತೆ ಇರುವ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಗುರುತಿಸಲಾಗಿದ್ದು, ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನೀಡುವ ವರದಿ ಮೇರೆಗೆ ಒಂದು ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ಅದೇ ರೀತಿ ಪಿರಿಯಾಪಟ್ಟಣ ಕುಶಾಲನಗರ ರಸ್ತೆಯನ್ನು ಅಗಲೀಕರಿಸಲು ರಾಜ್ಯದ ಅರಣ್ಯ ಇಲಾಖೆಯ ಒಪ್ಪಿಗೆಯ ಅಗತ್ಯವಿದೆ. ಒಪ್ಪಿಗೆ ಸಿಕ್ಕಲ್ಲಿ ಶೀಘ್ರವಾಗಿ ಮೈಸೂರು ಕುಶಾಲನಗರ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಗೋಣಿಕೊಪ್ಪ ಕೊಡವ ಸಮಾಜದ ಅಧ್ಯಕ್ಷ ಅಜ್ಜಿಕುಟ್ಟಿರ ಪೂಣಚ್ಚ, ಉಪಾಧ್ಯಕ್ಷ ಚೆಪುö್ಪಡಿರ ಪೂಣಚ್ಚ, ಖಜಾಂಚಿ ಕೊಕ್ಕಂಡ ಬಿದ್ದಪ್ಪ, ಸಹಕಾರ್ಯದರ್ಶಿ ರೀಟಾ, ಹಾತೂರು ಗ್ರಾ.ಪಂ. ಅಧ್ಯಕ್ಷೆ ನಮಿತಾ ಬಿದ್ದಪ್ಪ, ಗೋಣಿಕೊಪ್ಪ ಗ್ರಾ.ಪಂ. ಸದಸ್ಯೆ ಕೊಣಿಯಂಡ ಬೋಜಮ್ಮ, ಕೈಕೇರಿ ಗ್ರಾಮಸ್ಥರುಗಳಾದ ಜಮ್ಮಡ ಮೋಹನ್, ಸಿ.ಡಿ. ಅರುಣ್, ಅಜ್ಜಿಕುಟ್ಟಿರ ದೇವಯ್ಯ, ಚೋನಿರ ಮಂಜು, ಕುಪ್ಪಂಡ ಗಿರಿ, ನಾಚಪ್ಪ ಹಾಗೂ ಇತರ ಗ್ರಾಮಸ್ಥರು ಹಾಜರಿದ್ದರು.