ಪೊನ್ನಂಪೇಟೆ, ಅ. ೩೧: ಕ್ರೀಡಾ ಚಟುವಟಿಕೆಗಳ ಆಯೋಜನೆ ಮತ್ತು ಕ್ರೀಡಾ ಪ್ರತಿಭೆಗಳ ಉತ್ತೇಜನಕ್ಕೆ ಸೀಮಿತವಾಗಿ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿಯನ್ನು (ಕೆ.ಎಂ.ಎಸ್.ಎ.) ಅಸ್ತಿತ್ವಕ್ಕೆ ತರಲಾಗಿದೆ. ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷ ಆಲೀರ ರಶೀದ್ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಸ್ಥಾಪನೆ ಕುರಿತು ವೀರಾಜಪೇಟೆಯಲ್ಲಿ ನಡೆದ ರಚನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಕ್ರೀಡಾಪಟು ಕೊಟ್ಟೋಳಿ ಗ್ರಾಮದ ಮೀತಲತಂಡ ಎಂ. ಇಸ್ಮಾಯಿಲ್ ಮತ್ತು ಕೋಶಾಧಿಕಾರಿ ಕಾಟ್ರಕೊಲ್ಲಿಯ ಆಲೀರ ಎ. ಅಬ್ದುಲ್ ಅಜೀಜ್ ಅವರನ್ನು ಆಯ್ಕೆ ಮಾಡಲಾಯಿತು.

ಅಕಾಡೆಮಿಯ ಉಪಾಧ್ಯಕ್ಷರುಗಳಾಗಿ ವೀರಾಜಪೇಟೆಯ ಕೇಂಗೋಟAಡ ಎಸ್. ಸೂಫಿ, ಕುಂಜಿಲದ ಕುಂಡAಡ ಎ. ರಜಾಕ್, ಜಂಟಿ ಕಾರ್ಯದರ್ಶಿಯಾಗಿ ಕೊಳಕೇರಿಯ ಕಣ್ಣಪ್ಪಣೆ ವೈ. ಅಶ್ರಫ್ ಹಾಗೂ ಕ್ರೀಡಾ ಸಂಚಾಲಕರಾಗಿ ಕೊಂಡAಗೇರಿಯ ಕತ್ತಣಿರ ಹೆಚ್. ಅಬ್ದುಲ್ ರಹಿಮಾನ್ (ಅಂದಾಯಿ), ನಿರ್ದೇಶಕರುಗಳಾಗಿ ಎಡಪಾಲದ ಕುಪ್ಪೋಡಂಡ ಎ. ಅಬ್ದುಲ್ ರಶೀದ್, ಕಾಟ್ರಕೊಲ್ಲಿಯ ಆಲೀರ ಹುಸೈನ್, ಐಮಂಗಲದ ಕೋಳುಮಂಡ ಎಸ್. ರಫೀಕ್, ಹುದೂರಿನ ಪುಂಜೆರ ಹೆಚ್. ಅಬ್ದುಲ್ಲ, ಹಳ್ಳಿಗಟ್ಟಿನ ಚಿಮ್ಮಿಚ್ಚಿರ ಕೆ. ಅಬ್ದುಲ್ಲ ಮತ್ತು ಕಾಟ್ರಕೊಲ್ಲಿಯ ಅಕ್ಕಳತಂಡ ಎ. ಶಫೀಕ್ ಅವರನ್ನು ನೇಮಕಗೊಳಿಸಲಾಯಿತು.