ಸೋಮವಾರಪೇಟೆ, ಅ. ೧: ನಮ್ಮ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಕಾಫಿ ಕೇವಲ ಪಾನೀಯವಲ್ಲ; ಅದು ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅಭಿಮತ ವ್ಯಕ್ತಪಡಿಸಿದರು.
ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘ ಹಾಗೂ ತಾಲೂಕು ಹೋಂ ಸ್ಟೇ ಅಸೋಸಿಯೇಷನ್ ವತಿಯಿಂದ ಪಟ್ಟಣದ ವಿವೇಕಾನಂದ ಸರ್ಕಲ್ ಬಳಿ, ಅಂತರರಾಷ್ಟಿçÃಯ ಕಾಫಿ ದಿನದÀ ಅಂಗವಾಗಿ ‘ಕಾಫಿ ಕುಡಿಯಿರಿ, ಕಾಫಿ ಕುಡಿಸಿರಿ, ಕಾಫಿಯೊಂದಿಗೆ ದೈನಂದಿನ ಜೀವನ ಪ್ರಾರಂಭಿಸಿ’ ಎಂಬ ಹೆಸರಿನಲ್ಲಿ ಆಯೋಜಿಸಿದ್ದ ಕಾಫಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಫಿಯ ಡಿಕಾಕ್ಷನ್ಗೆ ಹಾಲು ಬೆರೆಸಿ ಅತಿಥಿಗಳಿಗೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕರು, ಕಾಫಿ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬೆಳೆಗಾರರ ಶ್ರಮ ಶ್ಲಾಘನೀಯ. ಹವಾಮಾನ ವೈಪರೀತ್ಯ, ಕಾರ್ಮಿಕರ ಸಮಸ್ಯೆ, ಕಾನೂನಿನ ಚೌಕಟ್ಟು, ಮಾರುಕಟ್ಟೆ ಸಮಸ್ಯೆಗಳ ನಡುವೆಯೂ ಬೆಳೆಗಾರರು ಕಾಫಿ ಗಿಡ, ತೋಟ, ಮಣ್ಣನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಈ ಶ್ರಮಕ್ಕೆ ನಾವೆಲ್ಲರೂ ಚಿರಋಣಿಯಾಗಿರಬೇಕು ಎಂದರು.
ನಮ್ಮ ರಾಜ್ಯ, ದೇಶದಲ್ಲಿ ಕಾಫಿಯು ಶೇ. ೩೦ರಷ್ಟು ಮಾತ್ರ ಬಳಕೆಯಾಗುತ್ತಿದೆ. ಉಳಿದ ಶೇ. ೭೦ರಷ್ಟು ಅಂತರರಾಷ್ಟಿçÃಯ ಮಾರುಕಟ್ಟೆಗೆ ಹೋಗುತ್ತಿದೆ. ಉತ್ತರ ಭಾರತದಲ್ಲಿ ಟೀ ಹೆಚ್ಚಾಗಿ ಬಳಕೆಯಾಗುತ್ತಿದೆ. ಕಾಫಿಯನ್ನು ಕುಡಿಯುವವರ ಸಂಖ್ಯೆ ಹೆಚ್ಚಿಸಬೇಕು. ಇದಕ್ಕೆ ನಾವೇ ಪ್ರೋತ್ಸಾಹ ನೀಡಬೇಕು. ಈ ಬಾರಿ ದರ ಅನುಕೂಲಕರವಾಗಿದ್ದರೂ ಮಳೆಯಿಂದಾಗಿ ಉತ್ಪಾದನೆ ಕಡಿಮೆಯಾಗಿದೆ. ಕಾಫಿಯನ್ನು ಸರ್ಕಾರ ಅಥವಾ ಅಧಿಕಾರಿಗಳು ಉಳಿಸುತ್ತಿಲ್ಲ; ಬದಲಿಗೆ ಬೆಳೆಗಾರರೇ ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ಹಿರಿಯರು ಒದಗಿಸಿರುವ ಭೂಮಿಯನ್ನು ಉಳಿಸಿಕೊಳ್ಳಬೇಕು ಎಂದು ಕಿವಿಮಾತು ನುಡಿದರು.
ಕಾಫಿ ಸಂಸ್ಕೃತಿಯ ರಕ್ಷಣೆಯೊಂದಿಗೆ ಬೆಳೆಗಾರರ ಹಿತ ಕಾಪಾಡುವತ್ತಲೂ ಗಮನ ಹರಿಸಬೇಕು. ಮಡಿಕೇರಿ ೪ನಾಲ್ಕನೇ ಪುಟಕ್ಕೆ (ಮೊದಲ ಪುಟದಿಂದ) ದಸರಾದಲ್ಲಿಯೂ ಕಾಫಿ ದಸರಾ ಆಯೋಜಿಸಲಾಗಿದೆ. ಮುಂದೆ ಸೋಮವಾರಪೇಟೆ ಭಾಗದಲ್ಲೂ ಕಾಫಿ ಹಬ್ಬ ಆಚರಿಸುವಂತಾಗಬೇಕು. ಕಾಫಿ ಬೆಳೆಗಾರರ ಸಂಘದ ಕಚೇರಿ, ಪ್ರಯೋಗಾಲಯ ನಿರ್ಮಾಣಕ್ಕೆ ಜಾಗ ಒದಗಿಸಲು ಶ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾಫಿ ಬೆಳೆಗಾರ ಜಿ.ಎಸ್.ಪ್ರಭುದೇವ್ ಮಾತನಾಡಿ, ಗುಣಮಟ್ಟದ ಕಾಫಿ ಉತ್ಪಾದನೆಗೆ ಬೆಳೆಗಾರರು ಮುಂದಾಗಬೇಕು ಎಂದರು.
ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ನೆರೆಯ ಸಕಲೇಶಪುರ ತಾಲೂಕಿನಲ್ಲಿ ಬೆಳೆಗಾರರ ಸಂಘವು ಸ್ವಂತ ಕಟ್ಟಡ ಹೊಂದಿದ್ದು, ಸಂಘಟನೆ ಬಲಿಷ್ಠವಾಗಿದೆ. ಸಂಘಟನೆಯಿAದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಬೆಳೆಗಾರರಿಗೆ ಮಾಹಿತಿ ಒದಗಿಸಲಾಗುತ್ತಿದೆ. ಸೋಮವಾರಪೇಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರಿದ್ದು, ಸ್ವಂತ ಕಟ್ಟಡ ಹೊಂದಿಕೊAಡರೆ ಚರ್ಚೆ, ಸಂವಾದ, ಜಾಗೃತಿ ಕಾರ್ಯಾಗಾರಗಳನ್ನು ನಡೆಸಲು ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ. ಲವ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಕಾಫಿ ಬೆಳೆಗಾರರಾದ ಹಾನಗಲ್ಲು ಗ್ರಾಮದ ಬಿ.ಎಸ್.ಸೀತಾರಾಂ, ಸುಳಿಮಳ್ತೆ ಗ್ರಾಮದ ಎಸ್.ಎಲ್.ಪುಟ್ಟರಾಜು, ಕಿರಗಂದೂರು ಗ್ರಾಮದ ವಿಮಲ ಕೃಷ್ಣಕಾಂತ್, ಕರ್ಕಳ್ಳಿ ಗ್ರಾಮದ ನಿರ್ಮಲ ಪ್ರಕಾಶ್, ತಣ್ಣೀರುಹಳ್ಳ ಗ್ರಾಮದ ರಾಣಿ ನರೇಂದ್ರ ಉಪಸ್ಥಿತರಿದ್ದರು. ಇದೇ ಸಂದರ್ಭ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ, ಹಿರಿಯ ಕಾಫಿ ಬೆಳೆಗಾರ ಎ.ಆರ್. ಮುತ್ತಣ್ಣ ಅವರನ್ನು ಸನ್ಮಾನಿಸಲಾಯಿತು.
ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ. ರೋಹಿತ್, ಸಂಘದ ಉಪಾಧ್ಯಕ್ಷ ಗೌಡಳ್ಳಿ ಪ್ರಸಿ, ಕೆ.ಜಿ.ಎಫ್. ನಿರ್ದೇಶಕ ಸಿ.ಕೆ.ಮಲ್ಲಪ್ಪ, ಸಂಘದ ಕಾರ್ಯದರ್ಶಿ ಯಡೂರು ಮನೋಹರ್, ನಿರ್ದೇಶಕ ಎಸ್.ಎಂ. ಕೃಷ್ಣ, ತಿಲೋತ್ತಮೆ, ಆಶಾ ಯೋಗೇಂದ್ರ ಅವರುಗಳು ಕಾರ್ಯಕ್ರಮ ನಿರ್ವಹಿಸಿದ್ದರು.
ಅಂತರರಾಷ್ಟಿçÃಯ ಕಾಫಿ ದಿನಾಚರಣೆಯ ಕಾಫಿ ಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ ಕಾಫಿಯನ್ನು ವಿತರಿಸಿ, ದೈನಂದಿನ ಬದುಕಿನಲ್ಲಿ ಕಾಫಿ ಪಾನೀಯವನ್ನು ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಯಿತು.