ಚೆಂಬು, ಆ. ೧೨: ಚೆಂಬು ಗ್ರಾಮದ ದಬ್ಬಡ್ಕ ಭಾಗದಲ್ಲಿ ಆನೆ ತುಳಿತದಿಂದ ರೈತ ಮೃತಪಟ್ಟ ಹಿನ್ನೆಲೆ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ಆಗಸ್ಟ್ ೧೧ ರಂದು ಚೆಂಬು ಸಾರ್ವಜನಿಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಬಳಿಕ ಶಾಸಕ ಪೊನ್ನಣ್ಣ ಅವರ ಸೂಚನೆ ಮೇರೆಗೆ ಆನೆ ಪತ್ತೆ ಮಾಡುವ ಮತ್ತು ಸೆರೆ ಹಿಡಿಯುವ ಕಾರ್ಯಾಚರಣೆ ಇಂದು ಚುರುಕುಗೊಂಡಿದೆ. ಮೂರು ವಿಭಾಗದ ತಂಡಗಳಾಗಿ ಒಟ್ಟು ೩೫ ಅರಣ್ಯ ಸಿಬ್ಬಂದಿಗಳು ಇ ಟಿ ಎಫ್ ಹಾಗೂ ಆರ್ ಆರ್ ಎಫ್ ತಂಡಗಳು ಕಾರ್ಯಾಚರಣೆಯಲ್ಲಿದ್ದು, ಆನೆ ಚಲನವಲನದ ಜಾಡನ್ನು ಪತ್ತೆ ಹಚ್ಚುವಲ್ಲಿ ನಿರತವಾಗಿವೆ. ಎಂ. ಚೆಂಬು, ದಬ್ಬಡ್ಕ, ಊರುಬೈಲು ಚೆಂಬು ಹಾಗೂ ಕಟ್ಟಿಪಳ್ಳಿ ಭಾಗದಲ್ಲಿ ೨-೩ ಆನೆಗಳು ಓಡಾಡುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅಧಿಕಾರಿಗಳು, ದಾಳಿ ಮಾಡಿದ ಆನೆಯ ಗುರುತು ಪತ್ತೆಗೆ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. -ಕೃಷ್ಣಬೆಟ್ಟ ಸುದ್ದಿಬಿಡುಗಡೆ, ಸುಳ್ಯ