ವೀರಾಜಪೇಟೆ, ಜೂ. ೨೫: ವೀರಾಜಪೇಟೆ ಸಮೀಪದ ಕದನೂರು ಗ್ರಾಮದ ಅರಮೇರಿಯಲ್ಲಿನ ಎಸ್.ಎಂ.ಎಸ್. ಅಕಾಡೆಮಿ ಆಫ್ ಸೆಂಟ್ರಲ್ ಸಿಲೆಬಸ್ ಶಾಲೆಯಲ್ಲಿ ೨೦೨೫-೨೬ರ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಅತ್ಯಧಿಕ ಮತ ಗಳಿಸುವ ಮೂಲಕ ಶಾಲಾ ನಾಯಕಿಯಾಗಿ ಕಟ್ಟೇರ ತನಿಶ್ ಪೂಣಚ್ಚ ಹಾಗೂ ಉಪನಾಯಕಿಯಾಗಿ ದೇಷ್ಣ ದೇಚಮ್ಮ. ಎಂ.ಯು. ಆಯ್ಕೆಯಾದರು. ಶಾಲಾ ಪ್ರಾಂಶುಪಾಲೆ ಕುಸುಮ್ ಟಿಟೋ ಹಾಗೂ ಚುನಾವಣಾ ಸಾಕ್ಷಾರತ ಕ್ಲಬ್‌ನ ಪದಾಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ನಡೆಸಲಾಯಿತು. ೩ನೇ ತರಗತಿಯಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳು ಮತವನ್ನು ಚಲಾಯಿಸಿದರು.