ಕುಶಾಲನಗರ, ಜೂ. ೨೫: ಲೋಕಸಭೆ ವಿರೋಧ ಪಕ್ಷ ನಾಯಕÀ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬ ಅಂಗವಾಗಿ ಕುಶಾಲನಗರದಲ್ಲಿ ಕಾಂಗ್ರೆಸ್ ಯುವ ಘಟಕದ ಪದಾಧಿಕಾರಿಗಳು ಸ್ಥಳೀಯ ಸರಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಮತ್ತು ಸಿಹಿ ವಿತರಣೆ ಮಾಡಿದರು.
ಬ್ಲಾಕ್ ಯುವ ಘಟಕದ ಅಧ್ಯಕ್ಷ ಚಿರಂಜೀವಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಶಾಸಕರ ಆಪ್ತ ಸಹಾಯಕ ರಂಜು ಹೆಬ್ಬಾಲೆ, ರೋಷನ್, ಯುವ ಕಾಂಗ್ರೆಸ್ ಪ್ರಮುಖ ಪ್ರೇಮ್ಕುಮಾರ್, ಆದಮ್, ಪುರಸಭೆ ನಾಮ ನಿರ್ದೇಶಕ ಸದಸ್ಯ ಶಿವಶಂಕರ್, ಪ್ರಕಾಶ್, ಮತ್ತಿತರರು ಇದ್ದರು.