ಸೋಮವಾರಪೇಟೆ, ಜೂ. ೨೫: ರೂ. ೧.೬೦ ಕೋಟಿ ವೆಚ್ಚದಲ್ಲಿ ಆರಂಭಗೊAಡ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ನವೀಕರಣ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರುಗಳು ಮಾಹಿತಿ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಕ್ಷಾ ಸಮಿತಿಯ ಸದಸ್ಯೆ ಮಂಜುಳಾ ಹರೀಶ್, ಪ್ರಸ್ತುತ ೧೭ ಲಕ್ಷ ರೂ. ನಷ್ಟು ಔಷಧಿ, ಮಾತ್ರೆಗಳು ಹಾಗೂ ಹೈಟೆಕ್ ರಕ್ತ ಪರೀಕ್ಷಾ ಘಟಕಕ್ಕೆ ಬೇಕಾದ ರಾಸಾಯನಿಕಗಳನ್ನು ಖರೀದಿ ಮಾಡಲಾಗಿದೆ. ರೋಗಿಗಳಿಗೆ ಎಲ್ಲಾ ರೀತಿಯ ಪರೀಕ್ಷೆಗಳು ಆಸ್ಪತ್ರೆಯಲ್ಲೇ ನಡೆಸಲಾಗುತ್ತದೆ. ಎಲ್ಲಾ ಔಷಧಿ, ಮಾತ್ರೆಗಳು ಲಭ್ಯವಿದೆ ಎಂದರು.

ರೋಗಿಗಳಿಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಲು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಿದ್ದವಾಗಿದ್ದು, ರೋಗಿಗಳು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ಸೋಮವಾರ ೮ ರಿಂದ ೯ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿದ್ದು, ರೋಗಿಗಳಿಗೆ ಔಷಧಿ ಮಾತ್ರೆಗಳನ್ನು ಆಸ್ಪತ್ರೆಯಲ್ಲಿಯೇ ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶಾಸಕ ಡಾ.ಮಂತರ್‌ಗೌಡ ಅವರು ರಕ್ಷಾ ಸಮಿತಿ ಅಧ್ಯಕ್ಷರಾಗಿದ್ದು, ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಲು ಎಲ್ಲಾ ಪ್ರಯತ್ನ ಮುಂದುವರಿಸಿದ್ದಾರೆ. ಆಸ್ಪತ್ರೆಯಲ್ಲಿ ಒಟ್ಟು ೮ ಮಂದಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, ಒಂದು ವಾರದೊಳಗೆ ಮಕ್ಕಳ ತಜ್ಞರ ಸೇವೆ ಸಿಗಲಿದೆ. ಶಸ್ತç ಚಿಕಿತ್ಸಕರು, ಸ್ತಿçÃರೋಗ ಮತ್ತು ಪ್ರಸೂತಿ ತಜ್ಞರು, ಇಎನ್‌ಟಿ, ಫಿಜಿಷಿಯನ್, ದಂತ ವೈದ್ಯರು ಲಭ್ಯವಿರುತ್ತಾರೆ. ಕೀಲು ಮತ್ತು ಮೂಳೆ ತಜ್ಞರು ಸೋಮವಾರ, ಗುರುವಾರ, ಶನಿವಾರ, ಭಾನುವಾರ ಇರುತ್ತಾರೆ ಎಂದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಿAದ ಸೋಮವಾರದಂದು ನೇತ್ರ ತಜ್ಞ, ಶ್ವಾಸಕೋಶ ತಜ್ಞ, ಮಕ್ಕಳ ತಜ್ಞ ಲಭ್ಯವಿರುತ್ತಾರೆ. ವಾರದಲ್ಲಿ ಎರಡು ದಿನ ಅರವಳಿಕೆ ತಜ್ಞರು ಲಭ್ಯವಿದ್ದು, ಎಲ್ಲಾ ರೀತಿಯ ಶಸ್ತç ಚಿಕಿತ್ಸೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

ಸದಸ್ಯ ಕೆ.ಪಿ. ರವೀಶ್ ಮಾತನಾಡಿ, ಸೋಮವಾರದಂದು ೨೦೦ರಿಂದ ೩೦೦ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಡಯಾಲಿಸಿಸ್ ಘಟಕದಲ್ಲಿ ೬ ಯಂತ್ರಗಳು ಕೆಲಸ ಮಾಡುತ್ತಿವೆ. ತಿಂಗಳಿಗೆ ೪೦೦ ಡಯಾಲಿಸಿಸ್ ಸೈಕಲ್ ನಡೆಯುತ್ತದೆ. ೪೧ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಕೋವಿಡ್ ಸಾಂಕ್ರಾಮಿಕ ರೋಗಗಳಿಗೆ ಸಂಬAಧಪಟ್ಟAತೆ ಕೋವಿಡ್ ವಾರ್ಡ್ಗಳು, ವೆಂಟಿಲೇಟರ್ ಹಾಗೂ ಆಕ್ಷಿಜನ್ ಕಾನ್ಸ್ಟ್ರೇಟರ್‌ಗಳು ಲಭ್ಯವಿದೆ. ಸಿಬಿ ನ್ಯಾಟ್ ಹೊಸ ಯಂತೋಪಕರಣ ಲಭ್ಯವಿದ್ದು, ಟಿ.ಬಿ. ಕಾಯಿಲೆಯನ್ನು ಅತೀ ಜರೂರಾಗಿ ಕಂಡುಹಿಡಿಯಬಹುದಾಗಿದೆ. ಅನಸ್ತೇಶಿಯಾ ವರ್ಕ್ ಸ್ಟೇಷನ್ ಕೆಲಸ ನಿರ್ವಹಿಸುತ್ತಿದೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ೩ ಆಂಬ್ಯುಲೆನ್ಸ್ ವಾಹನ ಲಭ್ಯವಿದೆ. ಜೂನ್ ೨೭ರಂದು ಡಿಎಚ್‌ಒ ಕಚೇರಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ಆಯ್ಕೆ ಕೌನ್ಸಿಲಿಂಗ್ ನಡೆಯಲಿದ್ದು, ಸೋಮವಾರಪೇಟೆ ಆಸ್ಪತ್ರೆಯಲ್ಲಿನ ಖಾಲಿ ಹುದ್ದೆಗಳು ಭರ್ತಿಯಾಗುತ್ತವೆ ಎಂದು ಹೇಳಿದರು.

ಗೋಷ್ಠಿಯಲ್ಲಿ ರಕ್ಷಾ ಸಮಿತಿ ಸದಸ್ಯರುಗಳಾದ ಎನ್.ಎನ್. ರಮೇಶ್, ಎಚ್.ಕೆ. ಲೋಕೇಶ್, ಜೇಕಬ್ ಸೈಮನ್ ಇದ್ದರು.