ವೀರಾಜಪೇಟೆ, ಜೂ. ೨೫: ಎರಡು ದಿನಗಳ ಹಿಂದೆ ಮಡಿಕೇರಿ - ಕುಶಾಲನಗರ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಬೈಕ್ ಚಾಲಕ ಶಿಕ್ಷಕ ಹೆಂಡ್ರಿ ಲೋಬೋ (೪೧) ಅವರು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಂತ್ಯಕ್ರಿಯೆ ತಾ.೨೬ ರಂದು (ಇಂದು) ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಸ್ಮಶಾನದಲ್ಲಿ ನಡೆಯಲಿದೆ.