ಮಡಿಕೇರಿ, ಜೂ. ೨೪: ಜಿಲ್ಲೆಯಲ್ಲಿ ಮಳೆಯ ವಾತಾವರಣ ಮುಂದುವರಿಯುತ್ತಿದೆ. ಹಲವೆಡೆ ಗಳಲ್ಲಿ ಮಳೆಯ ತೀವ್ರತೆಯೂ ಹೆಚ್ಚಿದ್ದು, ಇದೀಗ ಕಳೆದ ರಾತ್ರಿಯಿಂದ ಒಂದಷ್ಟು ಗಾಳಿಯೂ ಕಂಡು ಬರುತ್ತಿದೆ. ಮಳೆಯಿಂದಾಗಿ ಕೆಲವೆಡೆಗಳಲ್ಲಿ ಮನೆ ಮತ್ತಿತರ ಆಸ್ತಿ - ಪಾಸ್ತಿಗಳಿಗೆ ಹಾನಿ ಸಂಭವಿಸಿರುವ ಕುರಿತೂ ವರದಿಯಾಗಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ೧.೨೬ ಇಂಚು ಮಳೆಯಾಗಿವೆ. ಮಡಿಕೇರಿ ತಾಲೂಕಿನಲ್ಲಿ ೧.೧೭, ವೀರಾಜಪೇಟೆ ೦.೪೨, ಪೊನ್ನಂಪೇಟೆ ೧.೨೮, ಸೋಮವಾರಪೇಟೆ ೩.೦೫ ಹಾಗೂ ಕುಶಾಲನಗರ ತಾಲೂಕಿನಲ್ಲಿ ೦.೩೫ ಇಂಚು ಮಳೆ ದಾಖಲಾಗಿದೆ.
ಶಾಂತಳ್ಳಿ ಹೋಬಳಿಗೆ ಹೆಚ್ಚಿನ ಮಳೆಯಾಗಿದೆ. ಇಲ್ಲಿ ಕಳೆದ
೨೪ ಗಂಟೆಗಳ
(ಮೊದಲ ಪುಟದಿಂದ) ಅವಧಿಯಲ್ಲಿ ೫ ಇಂಚು ಮಳೆ ಸುರಿದಿದೆ. ಸೋಮವಾರಪೇಟೆ ಹೋಬಳಿ ೩, ಶನಿವಾರಸಂತೆ ೩.೧೦, ಕೊಡ್ಲಿಪೇಟೆ ೩.೦೫, ಹುದಿಕೇರಿ ಹೋಬಳಿಯಲ್ಲಿ ೨.೩೮ ಇಂಚು, ಭಾಗಮಂಡಲ ೨.೨೪, ಶ್ರೀಮಂಗಲ ೧.೬೪, ನಾಪೋಕ್ಲು ೧.೧೪ ಇಂಚು ಮಳೆಯಾಗಿವೆ. ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಸುರಿದ ಧಾರಾಕಾರ ಮಳೆ ಹಾಗೂ ಗಾಳಿಗೆ ದೊಡ್ಡಕುಂದ ಗ್ರಾಮದಿಂದ ಕೊಡ್ಲಿಪೇಟೆ ಕಡೆಗೆ ಹೋಗುವ ಮುಖ್ಯರಸ್ತೆಗೆ ಒಣಗಿದ ಮಾವಿನ ಮರವೊಂದು ಅಡ್ಡಲಾಗಿ ಬಿದ್ದಿದ್ದು, ಒಂದು ಗಂಟೆಗೂ ಅಧಿಕ ಸಮಯ ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ಸ್ಥಳಕ್ಕೆ ಕೊಡ್ಲಿಪೇಟೆ ಉಪವಲಯ ಅರಣ್ಯಾಧಿಕಾರಿ ವಿಶ್ವನಾಥ್ ಸಾಬಣ್ಣನವರ್ ನೇತೃತ್ವದಲ್ಲಿ ಗಸ್ತು ವನಪಾಲಕರಾದ ಭೀಮಪ್ಪ ಸತ್ತಿ, ಆನಂದ್ ಮಠಪತಿ, ಸಿಬ್ಬಂದಿಗಳು ಭೇಟಿ ನೀಡಿ ಸಾರ್ವಜನಿಕರ ಸಹಕಾರದಿಂದ ಮರ ತೆರವುಗೊಳಿಸಿದರು. ನಂತರ ವಾಹನ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.ಪುರಸಭೆ ಕಚೇರಿಯ ಮೇಲ್ಛಾವಣಿ ಕುಸಿತ
ವೀರಾಜಪೇಟೆ: ಭಾರೀ ಮಳೆಗೆ ವೀರಾಜಪೇಟೆ ಪುರಸಭೆ ಕಚೇರಿಯ ಮೇಲ್ಛಾವಣಿ ಕುಸಿದು ಬಿದ್ದಿದೆ.
ಬೆಳಿಗ್ಗೆ ೧೦.೩೦ ಗಂಟೆಗೆ ಕಚೇರಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಪುರಸಭೆ ಕಚೇರಿ ಕಟ್ಟಡ ಹಳೆಯದಾಗಿದ್ದು, ಕಚೇರಿಯ ಮೇಲ್ಛಾವಣಿ ನಿರ್ವಹಣೆ ಇಲ್ಲದೆ ಮಳೆ - ಗಾಳಿಗೆ ನೀರಿನಿಂದ ಒದ್ದೆಯಾಗಿ ಮುರಿದು ಬಿದ್ದಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಟ್ಟಡದ ಮೇಲೆ ಪ್ಲಾಸ್ಟಿಕ್ ಹೊದಿಕೆ ಹೊದಿಸಲಾಗಿದ್ದು, ಕಚೇರಿ ಕಾರ್ಯ ನಿರ್ವಹಣೆಗೆ ಕಷ್ಟಸಾಧ್ಯವಾಗಿದೆ.
ಪರ್ಯಾಯ ವ್ಯವಸ್ಥೆ: ಮಳೆಗಾಲವಾದ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಪುರಸಭೆ ಕಚೇರಿಯಲ್ಲಿ ಕೆಲಸ ಕಾರ್ಯಗಳು ನಡೆಸಲು ಆಗದ ಕಾರಣ ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯಬೇಕಾಗಿರುವುದರಿಂದ ಮತ್ತು ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪಿಡ್ಲೂö್ಯಡಿ ಕಟ್ಟಡ ಪ್ರವಾಸಿ ಮಂದಿರದ ಬಳಿ ನಿರ್ಮಾಣಗೊಂಡಿರುವ ಹೊಸ ಕಟ್ಟಡಕ್ಕೆ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲು ಶಾಸಕರುಗಳು ಮತ್ತು ಅಧಿಕಾರಿಗಳು ಅನುವು ಮಾಡಿಕೊಡಬೇಕೆಂದು ಪುರಸಭೆ ಸದಸ್ಯೆ ಜೂನಾ ಆಗ್ರಹಿಸಿದ್ದಾರೆ.
ಮಡಿಕೇರಿ: ಮಡಿಕೇರಿ ನಗರದ ಐಟಿಐ ಹಿಂಭಾಗ ಕುಮಾರ್ ಎಂಬವರ ಮನೆಗೆ ಭಾರೀ ಗಾತ್ರದ ಮರ ಬಿದ್ದು ನಷ್ಟ ಉಂಟಾಗಿದೆ. ಸ್ಥಳಕ್ಕೆ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ವಾರ್ಡ್ ಸದಸ್ಯರಾದ ಚಿತ್ರಾವತಿ ಮತ್ತು ಇಂಜಿನಿಯರ್ ಹೇಮಂತ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಿರುಸುಗೊಂಡಿದ್ದು ನದಿ, ತೋಡುಗಳು ತುಂಬಿ ಹರಿಯುತ್ತಿವೆ. ಮಂಗಳವಾರ ಬಿರುಸಿನ ಮಳೆಯೊಂದಿಗೆ ಬಲವಾದ ಗಾಳಿಯೂ ಬೀಸಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರಭಸದ ಗಾಳಿಯಿಂದ ಹಲವೆಡೆ ಮನೆ, ಶೆಡ್ಗಳಿಗೆ ಹಾನಿಯಾಗಿದೆ. ಮನೆಗೆ ಹಾಸಿದ್ದ ಶೀಟ್ಗಳು ಹಾರಿಹೋಗಿ ನಷ್ಟ ಸಂಭವಿಸಿದೆ.
ಕರಡ ಗ್ರಾಮದ ಟಿ.ಡಿ ಚಿಣ್ಣಪ್ಪ ಎಂಬವರ ವಾಸದ ಮನೆಯ ಪಕ್ಕದಲ್ಲಿದ್ದ ಶೌಚಾಲಯ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಕೊಳಕೇರಿ ಗ್ರಾಮದ ತಟ್ಟಂಡ ವಿಮಲಾ ಅವರ ವಾಸದ ಮನೆಯ ಮೇಲ್ಛಾವಣಿ ಮಳೆಯಿಂದ ಹಾನಿಯಾಗಿದೆ.
ಎರಡು ದಿನಗಳಿಂದ ಬಿರುಸುಗೊಂಡ ಮಳೆಯಿಂದಾಗಿ ಕಾವೇರಿ ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಹೋಬಳಿ ವ್ಯಾಪ್ತಿಯಲ್ಲಿ ನದಿ ದಡದಲ್ಲಿರುವ ಗದ್ದೆ, ತೋಟಗಳು ಮುಳುಗಡೆಯಾಗಿ ಸಮಸ್ಯೆ ಎದುರಾಗಿದೆ. ಇಲ್ಲಿಗೆ ಸಮೀಪದ ಕಾವೇರಿ ನದಿ ಪಾತ್ರದಲ್ಲಿರುವ ಚೆರಿಯ ಪರಂಬುವಿನಲ್ಲಿ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿರುವುದರಿಂದಾಗಿ ಕಂದಾಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.ವೀರಾಜಪೇಟೆ: ಕಳೆದ ಮೂರು ದಿನಗಳಿಂದ ವೀರಾಜಪೇಟೆ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಂಗಳವಾರ ಆಗಾಗ್ಗೆ ಬಿಡುವು ನೀಡುತ್ತಾ ಮಳೆ ಸುರಿಯಿತು. ವಾತಾವರಣ ಸಂಪೂರ್ಣ ಚಳಿಯಿಂದ ಕೂಡಿದೆ. ಧಾರಾಕಾರ ಮಳೆ ಗಾಳಿಯಿಂದಾಗಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಹಳ್ಳಕೊಳ್ಳ ಹಾಗೂ ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಕಂಡುಬAದಿದ್ದು, ಗದ್ದೆಗಳು ಜಲಾವೃತಗೊಂಡಿವೆ.
ಧಾರಾಕಾರ ಮಳೆ ಹಾಗೂ ಗಾಳಿಗೆ ವೀರಾಜಪೇಟೆ ಹೋಬಳಿ ಪೊದಕೋಟೆ ಗ್ರಾಮದ ನಿವಾಸಿ ಹೆಚ್.ಕೆ ಬಾಬು ಅವರ ವಾಸದ ಮನೆಗೆ ಭಾಗಶಃ ಹಾನಿಯಾಗಿದೆ.
ಈ ಸಂಬAಧ ಕಂದಾಯ ಪರಿವೀಕ್ಷಕರು, ಸಹಾಯಕ ಅಭಿಯಂತರರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಸದಸ್ಯರುಗಳು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರದ ಭರವಸೆ ನೀಡಿದ್ದಾರೆ.
ಸೋಮವಾರಪೇಟೆ: ಭಾರೀ ಮಳೆಯೊಂದಿಗೆ ರಭಸವಾಗಿ ಗಾಳಿಯೂ ಬೀಸುತ್ತಿರುವ ಹಿನ್ನೆಲೆ ಸೋಮವಾರಪೇಟೆ ತಾಲೂಕಿನ ಪಶ್ಚಿಮ ಭಾಗದಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ದಿನದ ೨೪ ಗಂಟೆಯೂ ಮಳೆಯಾಗುತ್ತಿದೆ. ಪುಷ್ಪಗಿರಿ ಬೆಟ್ಟಶ್ರೇಣಿಯ ಕೆಲ ಗ್ರಾಮಗಳಲ್ಲಿ ಈಗಾಗಲೇ ೧೦೦ ಇಂಚಿನಷ್ಟು ಮಳೆ ಸುರಿದಿದೆ. ಮಲ್ಲಳ್ಳಿ ಸಮೀಪದ ದೇವರಮನೆ ಎಂಬಲ್ಲಿ ೧೦೦ ಇಂಚು ದಾಟಿ ಮಳೆ ಸುರಿಯುತ್ತಿದೆ. ಇನ್ನು ಹೆಗ್ಗಡಮನೆ, ಪುಷ್ಪಗಿರಿ, ನಾಡ್ನಳ್ಳಿ, ಕೊತ್ನಳ್ಳಿ, ತಡ್ಡಿಕೊಪ್ಪ, ಬೀಕಳ್ಳಿ. ಬೆಂಕಳ್ಳಿ, ಕುಡಿಗಾಣ ಗ್ರಾಮಗಳು ಅಕ್ಷರಶಃ ಮಳೆಯ ಗ್ರಾಮಗಳಾಗಿವೆ ಮಾರ್ಪಟ್ಟಿವೆ.
ಈ ಗ್ರಾಮಗಳಲ್ಲಿ ದಿನದ ೨೪ ಗಂಟೆಯೂ ಭಾರೀ ಮಳೆಯಾಗುತ್ತಿದೆ. ಶಾಂತಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ವರುಣನ ಆರ್ಭಟ ಹೆಚ್ಚಿದೆ. ಶಾಂತಳ್ಳಿ ಮುಖ್ಯ ಪ್ರದೇಶ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಹೆಚ್ಚಿನ ಮಳೆ ಸುರಿಯುತ್ತಿದೆ.
ಭಾರೀ ಮಳೆ ಹಿನ್ನೆಲೆ ಸಣ್ಣಪುಟ್ಟ ನದಿ ತೊರೆಗಳು, ಹೊಳೆಗಳು ತುಂಬಿ ಹರಿಯಲಾರಂಭಿಸಿವೆ. ಪುಷ್ಪಗಿರಿ ಶ್ರೇಣಿಯಲ್ಲಿರುವ ಕುಮಾರಧಾರ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಮಲ್ಲಳ್ಳಿ ಜಲಪಾತ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದೆ. ವಾರಾಂತ್ಯದ ದಿನಗಳಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಇನ್ನು ಮಳೆ-ಗಾಳಿಗೆ ಗ್ರಾಮೀಣ ಭಾಗದ ರೈತಾಪಿ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳ ಜೀವನ ಅಸ್ತವ್ಯಸ್ಥಗೊಂಡಿದೆ. ತೋಟದಲ್ಲಿ ಕೆಲಸ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ. ಮಳೆಯೊಂದಿಗೆ ಗಾಳಿಯೂ ಸೋಮವಾರಪೇಟೆ: ಭಾರೀ ಮಳೆಯೊಂದಿಗೆ ರಭಸವಾಗಿ ಗಾಳಿಯೂ ಬೀಸುತ್ತಿರುವ ಹಿನ್ನೆಲೆ ಸೋಮವಾರಪೇಟೆ ತಾಲೂಕಿನ ಪಶ್ಚಿಮ ಭಾಗದಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ದಿನದ ೨೪ ಗಂಟೆಯೂ ಮಳೆಯಾಗುತ್ತಿದೆ. ಪುಷ್ಪಗಿರಿ ಬೆಟ್ಟಶ್ರೇಣಿಯ ಕೆಲ ಗ್ರಾಮಗಳಲ್ಲಿ ಈಗಾಗಲೇ ೧೦೦ ಇಂಚಿನಷ್ಟು ಮಳೆ ಸುರಿದಿದೆ. ಮಲ್ಲಳ್ಳಿ ಸಮೀಪದ ದೇವರಮನೆ ಎಂಬಲ್ಲಿ ೧೦೦ ಇಂಚು ದಾಟಿ ಮಳೆ ಸುರಿಯುತ್ತಿದೆ. ಇನ್ನು ಹೆಗ್ಗಡಮನೆ, ಪುಷ್ಪಗಿರಿ, ನಾಡ್ನಳ್ಳಿ, ಕೊತ್ನಳ್ಳಿ, ತಡ್ಡಿಕೊಪ್ಪ, ಬೀಕಳ್ಳಿ. ಬೆಂಕಳ್ಳಿ, ಕುಡಿಗಾಣ ಗ್ರಾಮಗಳು ಅಕ್ಷರಶಃ ಮಳೆಯ ಗ್ರಾಮಗಳಾಗಿವೆ ಮಾರ್ಪಟ್ಟಿವೆ.
ಈ ಗ್ರಾಮಗಳಲ್ಲಿ ದಿನದ ೨೪ ಗಂಟೆಯೂ ಭಾರೀ ಮಳೆಯಾಗುತ್ತಿದೆ. ಶಾಂತಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ವರುಣನ ಆರ್ಭಟ ಹೆಚ್ಚಿದೆ. ಶಾಂತಳ್ಳಿ ಮುಖ್ಯ ಪ್ರದೇಶ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಹೆಚ್ಚಿನ ಮಳೆ ಸುರಿಯುತ್ತಿದೆ.
ಭಾರೀ ಮಳೆ ಹಿನ್ನೆಲೆ ಸಣ್ಣಪುಟ್ಟ ನದಿ ತೊರೆಗಳು, ಹೊಳೆಗಳು ತುಂಬಿ ಹರಿಯಲಾರಂಭಿಸಿವೆ. ಪುಷ್ಪಗಿರಿ ಶ್ರೇಣಿಯಲ್ಲಿರುವ ಕುಮಾರಧಾರ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಮಲ್ಲಳ್ಳಿ ಜಲಪಾತ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದೆ. ವಾರಾಂತ್ಯದ ದಿನಗಳಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಇನ್ನು ಮಳೆ-ಗಾಳಿಗೆ ಗ್ರಾಮೀಣ ಭಾಗದ ರೈತಾಪಿ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳ ಜೀವನ ಅಸ್ತವ್ಯಸ್ಥಗೊಂಡಿದೆ. ತೋಟದಲ್ಲಿ ಕೆಲಸ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ. ಮಳೆಯೊಂದಿಗೆ ಗಾಳಿಯೂ ಬೀಸುತ್ತಿರುವುದರಿಂದ ಕೃಷಿಕರು ತೋಟ ಕೆಲಸ ಸ್ಥಗಿತಗೊಳಿಸುವಂತೆ ಆಗಿದೆ. ಹರಗ, ಶಾಂತಳ್ಳಿ, ಬೆಟ್ಟದಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ.
ತಾಲೂಕಿನ ಹೊನ್ನಮ್ಮನಕೆರೆ, ಆನೆಕೆರೆ, ಯಡೂರು ದೇವರ ಕೆರೆ, ಶಾಂತಳ್ಳಿ ಗೌರಿ ಕೆರೆಗಳಲ್ಲಿ ನೀರಿನ ಸಂಗ್ರಹ ಹೆಚ್ಚುತ್ತಿದೆ. ಭಾರೀ ಮಳೆಗೆ ಗ್ರಾಮೀಣ ಭಾಗದ ರಸ್ತೆಗಳು ದುಸ್ಥಿತಿಗೆ ಒಳಗಾಗುತ್ತಿವೆ. ಕಚ್ಚಾ ರಸ್ತೆಗಳಲ್ಲಿ ಸಂಚಾರ ದುಸ್ತರವಾಗುತ್ತಿದೆ. ಕಳೆದ ವರ್ಷ ಈ ಹಂತದಲ್ಲಿ ಸುರಿದ ಮಳೆಗೆ ಹೋಲಿಸಿದರೆ ಮೂರು ಪಟ್ಟು ಅಧಿಕ ಮಳೆ ಈ ಸಮಯಕ್ಕೆ ಈಗಾಗಲೇ ಸುರಿದಿದೆ ಎಂದು ಶಾಂತಳ್ಳಿಯ ಕೃಷಿಕ ತಮ್ಮಣ್ಣಿ ತಿಳಿಸಿದ್ದಾರೆ.
ಮಳೆಯಿಂದಾಗಿ ವಾತಾವರಣದಲ್ಲಿ ಶೀತ ಅಧಿಕಗೊಂಡಿದೆ. ಕೆಲವೆಡೆ ರಸ್ತೆ ಬದಿ ಕುಸಿತಗಳು ಸಂಭವಿಸುತ್ತಿವೆ. ಐಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಜೂರು ದುರ್ಗಾ ಎಸ್ಟೇಟ್ ಕಡೆಗೆ ತೆರಳುವ ಕಾಂಕ್ರೀಟ್ ರಸ್ತೆಯ ಒಂದು ಬದಿಯಲ್ಲಿ ಭೂ ಕುಸಿತ ಉಂಟಾಗಿದೆ.
ಪರಿಣಾಮ ಕಾಂಕ್ರಿಟ್ ರಸ್ತೆಯ ತಳಭಾಗದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೀರು ಹರಿಯುತ್ತಿದೆ. ಭಾರೀ ವಾಹನಗಳು ತೆರಳಿದರೆ ಕಾಂಕ್ರೀಟ್ ರಸ್ತೆ ಮಧ್ಯಭಾಗದಲ್ಲಿ ಕುಸಿತಗೊಳ್ಳುವ ಆತಂಕ ಸೃಷ್ಟಿಸಿದೆ. ತಿರುವು ಸ್ಥಳವೂ ಆಗಿರುವುದರಿಂದ ವಾಹನ ಚಾಲನೆಗೆ ಸಮಸ್ಯೆಯಾಗಿದೆ. ರಸ್ತೆಯ ಅಂಚಿನಿAದಲೇ ಮಣ್ಣು ಕುಸಿತವಾಗಿದ್ದು, ತುರ್ತು ಪರಿಹಾರ ಕ್ರಮದ ಅಗತ್ಯವಿದೆ.
ಸ್ಥಳಕ್ಕೆ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಕೆ. ವಿನೋದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಕುಮಾರ್, ಗ್ರಾಮ ಆಡಳಿತ ಅಧಿಕಾರಿ ನೇಹಾ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೋಮವಾರಪೇಟೆ: ಭಾರೀ ಮಳೆಯಿಂದಾಗಿ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಭಾಷ್ ನಗರದ ಸುರೇಶ್ ಟಿ.ಎಂ. ಎಂಬವರ ಮನೆಗೆ ಹಾನಿಯಾಗಿದೆ.
ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಬೆಳಿಗ್ಗೆ ೪.೩೦ ರ ಸುಮಾರಿಗೆ ಮನೆಯ ಮುಂಭಾಗದ ಗೋಡೆ ಕುಸಿತಗೊಂಡಿದೆ. ಈ ಹಿಂದೆಯೂ ಮನೆಯ ಗೋಡೆ ಕುಸಿತದಿಂದ ನಷ್ಟ ಉಂಟಾಗಿತ್ತು. ಈ ಕಾರಣಕ್ಕೆ ಮನೆಯ ಮುಂಭಾಗದಲ್ಲಿ ವಾಸಕ್ಕೆಂದು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿತ್ತು. ಕುಸಿತದಿಂದಾಗಿ ಮನೆಯ ಗೋಡೆ ಮುಂಭಾಗದ ಶೆಡ್ಗೆ ಅಪ್ಪಳಿಸಿ ಶೆಡ್ನ ಒಂದು ಪಾರ್ಶ್ವ ಹಾನಿ ಆಗಿದೆ.
ಮನೆಯ ಮಂದಿ ಶೆಡ್ನ ಬೇರೆ ಬದಿಯಲ್ಲಿ ಮಲಗಿದ್ದ ಕಾರಣ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಹಿಂದೆ ಮನೆ ಕುಸಿತಕ್ಕೆ ಒಳಗಾದಾಗ ಶಾಸಕರ ಸಮ್ಮುಖದಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಪರಿಹಾರ ಕೈಸೇರಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.
ಚೆಯ್ಯಂಡಾಣೆ: ಭಾರೀ ಮಳೆಯಿಂದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದ ಟಿ.ಡಿ. ಚಿಣ್ಣಪ್ಪ ಎಂಬವರ ವಾಸದ ಮನೆಯ ಪಕ್ಕದಲ್ಲಿದ್ದ ಮರ ಬಿದ್ದು, ಶೌಚಾಲಯಕ್ಕೆ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗೆ ಅಮೃತ, ಗ್ರಾಮ ಸಹಾಯಕ ಸಂಜಯ್, ಗ್ರಾಮ ಪಂಚಾಯಿತಿ ಸದಸ್ಯ ಬೇಪಡಿಯಂಡ ವಿಲಿನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.ವೀರಾಜಪೇಟೆ: ವೀರಾಜಪೇಟೆ ಹೋಬಳಿ ಪೊದಕೋಟೆ ಗ್ರಾಮ ನಿವಾಸಿ ಹೆಚ್.ಕೆ. ಬಾಬು ಅವರ ವಾಸದ ಮನೆ ಮಳೆಯಿಂದಾಗಿ ಭಾಗಶಃ ಹಾನಿಯಾಗಿದ್ದು, ಈ ಸಂಬAಧ ಕಂದಾಯ ಪರಿವೀಕ್ಷಕರು, ಸಹಾಯಕ ಅಭಿಯಂತರರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಸದಸ್ಯರು ಸ್ಥಳ ಪರಿಶೀಲನೆ ನಡೆಸಿದರು.
ಚೆಯ್ಯಂಡಾಣೆ: ಕೋಣಂಜಗೇರಿ ಪಾರಾಣೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಬಾವಲಿ ಗ್ರಾಮದ ಪಾಂಡAಡ ಕುಟುಂಬದ ಐನ್ಮನೆ ಸೋಮವಾರ ಸುರಿದ ಭಾರೀ ಗಾಳಿ - ಮಳೆಗೆ ಕುಸಿದು ಬಿದ್ದು ಹಾನಿಯಾಗಿದೆ. ಐನ್ಮನೆಯಲ್ಲಿ ಯಾರು ವಾಸ ಇಲ್ಲದಿರುವುದರಿಂದ ಅನಾಹುತ ತಪ್ಪಿದೆ. ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗರು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.
ಚೆಯ್ಯಂಡಾಣೆ: ನಾಪೋಕ್ಲು ಹೋಬಳಿಯ ಕೊಳಕೇರಿ ಗ್ರಾಮದ ತಟ್ಟಂಡ ವಿಮಲ ಎಂಬವರ ವಾಸದ ಮನೆಯ ಮೇಲ್ಛಾವಣಿ ಸೋಮವಾರ ಸುರಿದ ಗಾಳಿ - ಮಳೆಗೆ ಹಾನಿಯಾಗಿದೆ. ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗೆ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.