ಮಡಿಕೇರಿ, ಜೂ. ೨೪: ಹಾಕಿ ಕ್ರೀಡೆಗೂ ಕೊಡವ ಜನಾಂಗದವರಿಗೂ ಒಂದು ರೀತಿಯ ಅವಿನಾಭಾವ ಸಂಬAಧವಿದ್ದು, ಹಾಕಿ ಕ್ರೀಡೆಯತ್ತ ಜನರೂ ಆಕರ್ಷಿತರಾಗುವುದು ಸಹಜ. ಕೊಡಗು ಸೇರಿದಂತೆ ವಿವಿಧೆಡೆಗಳಲ್ಲಿ ಕೊಡವ ಕೌಟುಂಬಿಕ ಹಾಕಿ ಹಬ್ಬ, ಗ್ರಾಮಮಟ್ಟ ನಾಡುಗಳ ವ್ಯಾಪ್ತಿ ಮತ್ತಿತರ ಹಲವು ಪಂದ್ಯಾವಳಿಗಳು ಜರುಗಿವೆ. ಇದೀಅಗ ಮೈಸೂರು ಕೊಡವ ಸಮಾಜ ಯೂತ್ ವಿಂಗ್‌ನಿAದ ಇದೇ ಪ್ರಥಮ ಬಾರಿಗೆ ಫ್ರಾಂಚೈಸಿಗಳ ಪಾಲ್ಗೊಳ್ಳುವಿಕೆಯ ಮೂಲಕ ಐಪಿಎಲ್ ಕ್ರಿಕೆಟ್ ಮಾದರಿ ಕೊಡವ ಹಾಕಿ ಪ್ರೀಮಿಯರ್ ಲೀಗ್ (ಕೆಎಚ್‌ಪಿಎಲ್ - ೨೦೨೫) ಪಂದ್ಯಾವಳಿ ನಡೆಸಲಾಗುತ್ತಿದೆ. ಜೂನ್ ೨೭ರ ಶುಕ್ರವಾರದಿಂದ ಮೈಸೂರಿನ ಚಾಮುಂಡಿ ವಿಹಾರ್ ಟರ್ಫ್ ಮೈದಾನದಲ್ಲಿ ಈ ಪಂದ್ಯಾವಳಿ ಆರಂಭಗೊಳ್ಳಲಿದೆ.

೧೦ ಫ್ರಾಂಚೈಸಿಗಳು

ಪ್ರಥಮ ಬಾರಿಯ ಈ ಪಂದ್ಯಾವಳಿಯಲ್ಲಿ ೧೦ ಫ್ರಾಂಚೈಸಿಗಳು ಪಾಲ್ಗೊಂಡಿವೆ. ಈಗಾಗಲೇ ಆಟಗಾರರ ಬಿಡ್ಡಿಂಗ್‌ನAತಹ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಆಯಾ ಫ್ರಾಂಚೈಸಿಗಳು ತಾವು ಖರೀದಿಸಿರುವ ಆಟಗಾರರರೊಂದಿಗೆ ಪೂರ್ವ ತಯಾರಿ ನಡೆಸಿವೆ.

ರಾಜ್ಯ, ರಾಷ್ಟçಮಟ್ಟದ ಆಟಗಾರರ, ವಿವಿಧ ಕಂಪೆನಿಗಳ ಆಟಗಾರರು ವಿವಿಧ ತಂಡಗಳಲ್ಲಿ ಇದ್ದಾರೆ. ಪ್ರತಿ ತಂಡದಲ್ಲಿ ೧೮ ವರ್ಷ ಅಥವಾ ಈ ವಯೋಮಿತಿಯೊಳಗಿನ ಇಬ್ಬರು ಆಟಗಾರರು ಹಾಗೂ ಓರ್ವ ಮಹಿಳಾ ಆಟಗಾರ್ತಿ ಕಡ್ಡಾಯವಾಗಿರಬೇಕೆಂಬ ನಿಯಮ ಮಾಡಲಾಗಿದ್ದು, ಇದರಂತೆ ತಂಡಗಳು ಸಜ್ಜಾಗಿವೆ.

ವಿಜೇತರಿಗೆ ರೂ. ೧.೫೦ ಲಕ್ಷ

ವಿಜೇತ ತಂಡ ರೂ. ೧.೫೦ ಲಕ್ಷ ನಗದು ಹಾಗೂ ಟ್ರೋಫಿ ಪಡೆಯಲಿದೆ. ರನ್ನರ್ಸ್ ತಂಡಕ್ಕೆ ರೂ. ೧ಲಕ್ಷ ನಗದು ಹಾಗೂ ಟ್ರೋಫಿ ಮತ್ತು ೩ನೇ ಸ್ಥಾನಕ್ಕೆ ರೂ. ೫೦ ಸಾವಿರ ನಗದು ಹಾಗೂ ಟ್ರೋಫಿ ಬಹುಮಾನವಿದೆ. ಹಾಕಿ ಮೈಸೂರು, ಕೊಡವ ಸಮಾಜ ಮೈಸೂರಿನ ಸಹಕಾರದಲ್ಲಿ ಕೊಡವ ಸಮಾಜ ಯೂತ್‌ವಿಂಗ್ ಪಂದ್ಯಾವಳಿ ನಡೆಸುತ್ತಿದೆ.

ಅತಿಥಿಗಳು

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗಿನ ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್‌ಗೌಡ, ಮೈಸೂರು ಶಾಸಕ ಶ್ರೀವತ್ಸ, ಸಿನಿಮಾತಾರೆ ಬೊಳ್ಳಚಂಡ ನಿಧಿ ಸುಬ್ಬಯ್ಯ, ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ, ಹಾಕಿ ಮೈಸೂರಿನ ಕೊಂಗAಡ ದಿಲೀಪ್, ಕೋಟೆರ ಮುದ್ದಯ್ಯ, ಮೈಸೂರು ಕೊಡವ ಸಮಾಜದ ಅಧ್ಯಕ್ಷ ಪೊಂಜಾAಡ ಗಣಪತಿ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ. ಬೋಪಣ್ಣ ಪಾಲ್ಗೊಳ್ಳಲಿದ್ದಾರೆ. ಎರಡನೇ ದಿನದಂದು ಕೊಡವ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಶಾಸಕ ಹರೀಶ್ ಗೌಡ, ಯೂತ್ ಸರ್ವೀಸ್ ಡಿಪಾರ್ಟ್ಮೆಂಟ್ ಅಧ್ಯಕ್ಷ ಚೇತನ್ ಆರ್. ಭಾಗವಹಿಸಲಿದ್ದಾರೆ.

ತಾ. ೨೯ ರಂದು ಫೈನಲ್ ಹಾಗೂ ಸಮಾರೋಪ ಸಮಾರಂಭ ಜರುಗಲಿದ್ದು, ಸಿನಿಮಾನಟಿ ಶ್ವೇತಾ ಚಂಗಪ್ಪ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖಾ ಉಪ ನಿರ್ದೇಶಕ ಭಾಸ್ಕರ್ ನಾಯಕ್ ಪಾಲ್ಗೊಳ್ಳಲಿರುವರು. ಪಂದ್ಯಾವಳಿಯ ಮೆಂಟರ್‌ಗಳಾಗಿ ಭಾರತ ಹಾಕಿ ತಂಡದ ಕೋಚ್ ಬಿ.ಜೆ. ಕಾರ್ಯಪ್ಪ, ಅಂತರರಾಷ್ಟಿçÃಯ

(ಮೊದಲ ಪುಟದಿಂದ) ಆಟಗಾರ ಕರಿನೆರವಂಡ ಸೋಮಣ್ಣ, ವೀಕ್ಷಕ ವಿವರಣೆಗಾರರಾಗಿ ಚೆಪ್ಪುಡೀರ ಕಾರ್ಯಪ್ಪ, ಅಜ್ಜೇಟಿರ ವಿಕ್ರಂ ಉತ್ತಪ್ಪ, ಚೋಕಿರ ಅನಿತಾ ಕಾರ್ಯ ನಿರ್ವಹಿಸಲಿದ್ದಾರೆ. ಮೈಸೂರು ಕೊಡವ ಸಮಾಜ ಯೂತ್‌ವಿಂಗ್‌ನ ಅಧ್ಯಕ್ಷ ಕೋಟೆರ ವಿಧಿತ್ ಉತ್ತಯ್ಯ ಹಾಗೂ ತಂಡದವರು ಪಂದ್ಯಾವಳಿಯ ಉಸ್ತುವಾರಿ ಹೊಂದಿದ್ದಾರೆ.

ಕೊಡಗು, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ವೃತ್ತಿಪರ ಆಟಗಾರರಾಗಿರುವವರು ವಿವಿಧ ಫ್ರಾಂಚೈಸಿಗಳಲ್ಲಿದ್ದು, ಸ್ಪರ್ಧಾತ್ಮಕವಾದ ಈ ಪಂದ್ಯಾವಳಿ ಕುತೂಹಲ ಮೂಡಿಸಿದೆ. - ಶಶಿ ಸೋಮಯ್ಯ