ಮಡಿಕೇರಿ, ಜೂ. ೨೪: ವಿವಾದಕ್ಕೆಡೆಯಾಗಿ ಜಿಲ್ಲಾಡಳಿತದ ನಿರ್ದೇಶನದಂತೆ ಪೂಜೆ- ಹೋಮ ಕಾರ್ಯಗಳು ಸ್ಥಗಿತಗೊಂಡಿದ್ದ ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ದೇವಾಲಯದಲ್ಲಿ ಇದೀಗ ಮತ್ತೆ ನಿತ್ಯ ಪೂಜೆ ಹಾಗೂ ಮೃತ್ಯುಂಜಯ ಹೋಮ ಕಾರ್ಯಗಳು ಪುನರಾರಂಭಗೊAಡಿವೆ.
ಮರಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಗೊಳಪಡುವ ಕಟ್ಟೆಮಾಡು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಹಾ ಮೃತ್ಯುಂಜಯ ಮಹದೇಶ್ವರ ದೇವಾಲಯದ ಪ್ರಥಮ ವಾರ್ಷಿಕೋತ್ಸವ ಕಳೆದ ಡಿಸೆಂಬರ್೨೩ರಿAದ ೨೭ರವರೆಗೆ ನಡೆದಿದ್ದು, ತಾ. ೨೭ರ ಕೊನೆಯ ದಿವಸ ವಸ್ತç ಸಂಹಿತೆ ವಿಚಾರಕ್ಕೆ ಸಂಬAಧಿಸಿದAತೆ ಗೊಂದಲವೇರ್ಪಟ್ಟು ನಂತರದ ದಿನಗಳಲ್ಲಿ ಅದು ಜನಾಂಗೀಯ ಸಂಘರ್ಷದ
(ಮೊದಲ ಪುಟದಿಂದ) ಬಣ್ಣ ಪಡೆದುಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತದಿಂದ ನಿಷೇಧಾಜ್ಞೆ ಹೇರಲಾಗಿತ್ತು. ಅಲ್ಲದೆ ದೇಗುಲದಲ್ಲಿ ಬೆಳಿಗ್ಗೆ ಪೂಜೆ ಮಾತ್ರ ನೆರವೇರಿಸಿ ನಂತರ ದೇಗುಲಕ್ಕೆ ಬೀಗ ಹಾಕಲಾಗುತ್ತಿತ್ತು. ಹಾಗಾಗಿ ಇತರ ಪೂಜಾ ಕಾರ್ಯಗಳು, ಮೃತ್ಯುಂಜಯ ಹೋಮ, ಅನ್ನ ಸಂತರ್ಪಣೆ ಸ್ಥಗಿತಗೊಂಡಿತ್ತು.
ಇದೀಗ ಪರಿಸ್ಥಿತಿ ತಿಳಿಯಾಗಿ ನಿಷೇಧಾಜ್ಞೆ ಸಡಿಲಿಕೆಯಾಗಿರುವದರಿಂದ ದೇವಾಲಯದಲ್ಲಿ ನಿತ್ಯ ಪೂಜೆಗಳು ಆರಂಭವಾಗಿವೆ. ಪ್ರತಿನಿತ್ಯ ಬೆಳಿಗ್ಗೆಯಿಂದ ಪೂಜೆ ನಡೆಯುತ್ತಿವೆ. ಇದರೊಂದಿಗೆ ಮಹಾ ಮೃತ್ಯುಂಜಯ ಹೋಮ ಕೂಡ ನಡೆಯುತ್ತಿವೆ. ಹೋಮ ಮಾಡಿಸಲು ಇಚ್ಛಿಸುವವರು ಬೆಳಿಗ್ಗೆ ೧೧ ಗಂಟೆ ಒಳಗಡೆ ನೋಂದಣಿ ಮಾಡಿಕೊಳ್ಳಬೇಕಿದೆ. ಮಧ್ಯಾಹ್ನದವರೆಗೆ ಹೋಮ ನಡೆಯಲಿದೆ.
ಈ ಹಿಂದೆ ಸೋಮವಾರ ದಿವಸ ಭಕ್ತಾದಿಗಳಿಗೆ ಮಧ್ಯಾಹ್ನದ ಅನ್ನ ಸಂತರ್ಪಣೆ ಮಾಡಲಾಗುತ್ತಿತ್ತು. ಇದೀಗ ಅನ್ನ ಸಂತರ್ಪಣೆ ಸ್ಥಗಿತಗೊಂಡಿದೆ.