ಸೋಮವಾರಪೇಟೆ, ಜೂ. ೨೪: ಸೋಮವಾರದ ಸಂತೆಯಲ್ಲಿ ವ್ಯಾಪಾರ ಮಾಡುವ ವರ್ತಕರೋರ್ವರು ಅಸ್ಸಾಂ ಕಾರ್ಮಿಕರ ಮೂವರು ಅಪ್ರಾಪ್ತ ಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ಮೇರೆ, ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ಅಸ್ಸಾA ಕಾರ್ಮಿಕರು ಹಾಗೂ ಸ್ಥಳೀಯರ ನಡುವೆ ಆಗಾಗ್ಗೆ ಅಹಿತಕರ ಘಟನೆಗಳು ನಡೆಯುತ್ತಿರುವುದು ಇತ್ತೀಚಿನ ದಿನಮಾನದಲ್ಲಿ ಮಾಮೂಲಿ ಎಂಬಾAತಾಗಿದ್ದು, ಇದೀಗ ಸಂತೆಯಲ್ಲಿ ಅಸ್ಸಾಂ ಮೂಲದ ಅಪ್ರಾಪ್ತ ಮಕ್ಕಳನ್ನು ತರಕಾರಿ ವ್ಯಾಪಾರಕ್ಕೆ ಬಳಸಿಕೊಂಡಿರುವುದು ಹೊಸ ವಿದ್ಯಮಾನವಾಗಿದೆ.

ಶನಿವಾರಸಂತೆ ಮೂಲದ ವರ್ತಕರೋರ್ವರು ಸೋಮವಾರಪೇಟೆಯ ಸಂತೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಆಲೂಗೆಡ್ಡೆ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಪ್ರತಿ ವಾರ ಮಾರಾಟ ಮಾಡುತ್ತಿದ್ದು, ಇಂದು ಮೂವರು ಅಸ್ಸಾಂ ಕಾರ್ಮಿಕರ ಅಪ್ರಾಪ್ತ ಮಕ್ಕಳನ್ನು ವ್ಯಾಪಾರಕ್ಕೆ ಬಿಟ್ಟಿದ್ದರು.

ಅಪ್ರಾಪ್ತ ಮಕ್ಕಳು ಜೋರಾದ ಧ್ವನಿಯಲ್ಲಿ ವ್ಯಾಪಾರ ಮಾಡುತ್ತಿದ್ದುದನ್ನು ಹಲವರು ಗಮನಿಸಿದ್ದು, ಇದರಲ್ಲಿ ಕೆಲವರು ಪೊಲೀಸ್ ಇಲಾಖೆಯ ೧೧೨ಗೆ ಕರೆ ಮಾಡಿ, ಸಂತೆಯಲ್ಲಿ ಅಪ್ರಾಪ್ತ ಮಕ್ಕಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು.

ತಕ್ಷಣ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳನ್ನು ಕಂಡು ಅಪ್ರಾಪ್ತ ಮಕ್ಕಳನ್ನು ಕರೆತಂದಿದ್ದ ವರ್ತಕ ಸ್ಥಳದಿಂದ ಓಡಿಹೋಗಿದ್ದು, ಪೊಲೀಸರು ಮಕ್ಕಳನ್ನು ಠಾಣೆಗೆ ಕರೆತಂದರು. ಕೆಲ ಸಮಯದ ನಂತರ ಠಾಣೆಗೆ ವರ್ತಕ ಆಗಮಿಸಿರುವ ಬಗ್ಗೆ ತಿಳಿದು ಬಂದಿದೆ. ಪೊಲೀಸರು ಪ್ರಾಥಮಿಕ ಹಂತದ ವಿಚಾರಣೆ ನಡೆಸಿದ ಸಂದರ್ಭ ಅಪ್ರಾಪ್ತ ಮಕ್ಕಳ ಪೋಷಕರು ಈ ವರ್ತಕರ ಮನೆಯ ಪಕ್ಕದಲ್ಲಿ ನೆಲೆಸಿದ್ದು, ಅವರುಗಳೇ ಮಕ್ಕಳನ್ನು ತಿರುಗಾಡಿಕೊಂಡು ಬರಲು ವರ್ತಕರೊಂದಿಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ.

ಆದರೆ ತಿರುಗಾಡಿಕೊಂಡು ಬರಲು ಕರೆತಂದ ಅಪ್ರಾಪ್ತ ಮಕ್ಕಳನ್ನು ವರ್ತಕ, ಸಂತೆಯಲ್ಲಿ ಸಾಮಗ್ರಿಗಳ ಮಾರಾಟಕ್ಕೆ ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬAದಿದ್ದು, ಈ ಸಂಬAಧಿತ ವೀಡಿಯೋ ಹಾಗೂ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗಿದೆ. ಸಂಬAಧಿಸಿದ ಇಲಾಖೆಗಳು ಹಾಗೂ ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.

ಈ ಬಗ್ಗೆ ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕ ಶಶಿಧರ್ ಅವರಲ್ಲಿ ಮಾಹಿತಿ ಬಯಸಿದ ಸಂದರ್ಭ ಘಟನೆಯ ಬಗ್ಗೆ ತಮಗೆ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಪೊಲೀಸರಿಗೆ ಮಾಹಿತಿ ನೀಡಿದ ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ. - ವಿಜಯ್ ಹಾನಗಲ್