ಸಿದ್ದಾಪುರ, ಜೂ. ೨೪: ಕಾಡಂಚಿನಲ್ಲಿ ಇರುವ ಜೇನುಕುರುಬ ಜನಾಂಗದ ಮಕ್ಕಳಲ್ಲಿ ಅದ್ಭುತ ಕ್ರೀಡಾ ಪ್ರತಿಭೆಗಳು ಇದ್ದರೂ ಕೂಡ ಅವರಿಗೆ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲ್ದಾರೆ ಗೇಟ್ಹಾಡಿಯ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಜೇನುಕುರುಬ ಜನಾಂಗದ ವಾಲಿಬಾಲ್ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕಾಡಂಚಿನ ಕುಗ್ರಾಮದಲ್ಲಿ ತಲತಲಾಂತರಗಳಿAದ ವಾಸ ಮಾಡಿಕೊಂಡು, ಪ್ರಕೃತಿಯನ್ನು ಕಾಪಾಡಿಕೊಂಡಿರುವ ಜೇನುಕುರುಬ ಸಮುದಾಯದಲ್ಲಿ ಅಪಾರ ಮಂದಿ ಕ್ರೀಡಾ ಪ್ರತಿಭೆಗಳು ಇದ್ದರೂ ಕೂಡ ಸ್ವಾತಂತ್ರö್ಯ ಬಂದು ವರ್ಷಗಳೇ ಕಳೆದರೂ ಕೂಡ ಈ ಜನಾಂಗದ ಕ್ರೀಡಾ ಪ್ರತಿಭೆಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ವಿಷಾದಿಸಿದರು. ಇವರುಗಳಿಗೆ ರಾಷ್ಟಿçÃಯ ಹಾಗೂ ರಾಜ್ಯಮಟ್ಟದ ಕ್ರೀಡೆಗಳಿಗೆ ಆಯ್ಕೆ ಪ್ರಕ್ರಿಯೆಗಳನ್ನು ನಡೆಸುವ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವಕಾಶ ನೀಡಬೇಕೆಂದರು. ಈ ಕ್ರೀಡಾಪಟುಗಳಿಗೆ ಅವಕಾಶ, ಉತ್ತಮ ತರಬೇತಿ ನೀಡಿದರೆ ಮುಂದಿನ ದಿನಗಳಲ್ಲಿ ಈ ಜನಾಂಗದ ಕ್ರೀಡಾಪಟುಗಳು ಒಲಂಪಿಕ್ ಕ್ರೀಡೆಯಲ್ಲಿ ಭಾಗವಹಿಸಿ ಪದಕಗಳನ್ನು ಪಡೆಯುತ್ತಾರೆ ಎಂದು ಅಭಿಮತ ವ್ಯಕ್ತಪಡಿಸಿದರು. ಈಗಾಗಲೇ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣನವರು ಜಿಲ್ಲೆಯ ಮೂಲೆಮೂಲೆಗಳಲ್ಲಿ ಸಂಚರಿಸಿ ಎಲ್ಲಾ ರೀತಿಯ ಕ್ರೀಡೆಗಳಿಗೆ ವೈಯಕ್ತಿಕವಾಗಿ ಹಾಗೂ ಸರ್ಕಾರದಿಂದ ಕೂಡ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು. ಜೇನುಕುರುಬ ಜನಾಂಗದವರು ಆರ್ಥಿಕವಾಗಿ ಹಿಂದುಳಿದಿದ್ದರೂ ಕೂಡ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಇಂತಹ ಉತ್ತಮ ಕ್ರೀಡೆಯನ್ನು ಆಯೋಜಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜೇನುಕುರುಬ ಜನಾಂಗದ ಪ್ರಮುಖ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜೆ.ಕೆ. ರಾಮು ಮಾತನಾಡಿ, ಜೇನುಕುರುಬ ಜನಾಂಗದ ಮಕ್ಕಳಲ್ಲಿ ಇರುವಂತಹ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಹಾಗೂ ಸಮುದಾಯದ ಬಾಂಧವ್ಯವನ್ನು ಹೆಚ್ಚಿಸಲು ಈ ಕ್ರೀಡೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಜೇನುಕುರುಬ ಜನಾಂಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಿಲ್ಲೆ ಹಾಗೂ ಹೊರಜಿಲ್ಲೆಯ ಹಾಡಿಗಳಿಂದ ೧೫ ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು ಎಂದರು.
ಪಾಲಿಬೆಟ್ಟ ಪ್ರಥಮ
ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ಪಾಲಿಬೆಟ್ಟದ ಭದ್ರಕಾಳಿ ಫ್ರೆಂಡ್ಸ್ ಚೌಡಿ ಕಾಡು ತಂಡ, ದ್ವಿತೀಯ ಬಹುಮಾನವನ್ನು ಮಾಲ್ದಾರೆಯ ಗೇಟ್ ಹಾಡಿ ಫ್ರೆಂಡ್ಸ್ ತಂಡ ಪಡೆದುಕೊಂಡರೆ, ತೃತೀಯ ಬಹುಮಾನವನ್ನು ನಾಗಪುರ ಹುಣಸೂರು ತಂಡ ಪಡೆದು ಕೊಂಡಿತು. ಚತುರ್ಥ ಬಹುಮಾನ ವನ್ನು ತಟ್ಟಳ್ಳಿ ತಂಡ ಪಡೆದುಕೊಂಡಿತು. ಪಂದ್ಯಾವಳಿಯ ಉದ್ದಕ್ಕೂ ಕಾಡಿನ ಮಕ್ಕಳು ಮಳೆಯ ನಡುವೆ ಕುಣಿದು ಕುಪ್ಪಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟಿçÃಯ ಕ್ರೀಡಾಪಟುಗಳಾದ ಸಂದೇಶ್ ಜೆ.ಆರ್, ಸುಬ್ರಮಣಿ ಜೆ.ಆರ್. ಮತ್ತು ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯ ಅಪ್ಪಣ್ಣ ಜೆ.ಎಸ್, ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಎಂ. ನಾಗರಾಜ್ ಹಾಗೂ ಜೇನು ಕುರುಬರ ಇಂದಿರಾ, ಜೆ.ಬಿ. ರಾಜ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಗಳಾದ ನಾಗೇಶ್, ಹರೀಶ್ ಎಸ್.ಎಸ್, ಇತರರು ಹಾಜರಿದ್ದರು.