ಮಡಿಕೇರಿ, ಜೂ. ೧೪: ಬೂಕರ್ ಪ್ರಶಸ್ತಿ ಪುರಸ್ಕೃತೆ ದೀಪಾ ಭಾಸ್ತಿ ಅವರನ್ನು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದ ಪ್ರತಿನಿಧಿಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ದೀಪ ಭಾಸ್ತಿಯವರೊಂದಿಗೆ ಸಾಹಿತ್ಯದಿಂದ ಸಮಾಜದ ಬದಲಾವಣೆಗೆ ಖಂಡಿತ ಸಾಧ್ಯವಿದೆ. ತಮ್ಮ ಬರವಣಿಗೆಗಳಲ್ಲಿ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಹೆಚ್ಚಿನ ಒತ್ತು ಕೊಡಬೇಕಾಗಿ ಕೋರಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ದೀಪಾ ಭಾಸ್ತಿಯವರು ಸಮಾಜದ ಬದಲಾವಣೆಗಳಲ್ಲಿ ಸಾಹಿತ್ಯ ರಂಗವು ಪ್ರಮುಖ ಪಾತ್ರ ವಹಿಸುತ್ತದೆ.

ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಯಬೇಕಿದೆ ಎಂದು ಅಭಿಮತ ವ್ಯಕ್ತಪಡಿಸಿದರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮುಹೀನ ಅಬೂಬಕ್ಕರ್, ಮಡಿಕೇರಿ ಅಧ್ಯಕ್ಷೆ ವಹೀದಾ ಶೌಕತ್, ಸದಸ್ಯರುಗಳಾದ ಬೀಬಿ ಫಾತಿಮಾ, ಮರ್ಯಮ್ ಮಫೀದ, ತಾಹೀರಾ, ಸಿ.ಹೆಚ್. ಅಪ್ಸರ್ ಮಡಿಕೇರಿ ಸ್ಥಾನೀಯ ಅಧ್ಯಕ್ಷ ಜಿ.ಹೆಚ್. ಮೊಹಮ್ಮದ್ ಹನೀಫ್, ಸದಸ್ಯರುಗಳಾದ ಮೊಹಮ್ಮದ್ ಮುಸ್ತಫಾ ಹಾಗೂ ಪತ್ರಕರ್ತ ಅಬ್ದುಲ್ಲಾ ಹಾಜರಿದ್ದರು.