ಮಡಿಕೇರಿ, ಜೂ. ೪: ಬಕ್ರೀದ್ ಹಬ್ಬವನ್ನು ಶಾಂತಿಯುತ ಹಾಗೂ ಅರ್ಥಪೂರ್ಣವಾಗಿ ಆಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಕರೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದೆ ಹಬ್ಬವನ್ನು ಸಂಭ್ರಮ, ಸಡಗರದೊಂದಿಗೆ ಶಾಂತಿಯುತವಾಗಿ ನಡೆಸಬೇಕು. ಕಾನೂನು ಪಾಲನೆಯೊಂದಿಗೆ ಹಬ್ಬ ಆಚರಿಸುವಂತೆ ಹೇಳಿದರು. ಸಭೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು, ಧರ್ಮಗುರುಗಳು, ಇನ್ನಿತರರು ಮಾತನಾಡಿ, ಕಾರ್ಯಕ್ರಮದ ವಿವರ ನೀಡಿದರು.
ಈ ಸಂದರ್ಭ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್, ಮಡಿಕೇರಿ ಡಿ.ವೈ.ಎಸ್.ಪಿ. ಸೂರಜ್, ಡಿ.ಸಿ.ಆರ್.ಬಿ. ವೃತ್ತ ನಿರೀಕ್ಷಕ ಐ.ಜಿ. ಮೇದಪ್ಪ ಹಾಜರಿದ್ದರು.