ಗೋಣಿಕೊಪ್ಪ, ಮೇ ೨೫: ಮೈಸೂರು ಸಂಸ್ಥಾನ ಆಡಳಿತ ಅವಧಿಯಲ್ಲಿ ಪ್ರಾರಂಭಗೊAಡ ಕಾವೇರಿ ವಿವಾದ ಇಂದಿಗೂ ಮುಂದುವರಿದಿದೆ ಎಂದು ‘ಕಾವೇರಿ ವಿವಾದ’ ಕೃತಿ ಲೇಖಕ ಸಿ. ಚಂದ್ರಶೇಖರ್ ಕಾವೇರಿ ಹೇಳಿದರು.
ಕೊಡಗು ಮಾಡೆಲ್ ಫಾರೆಸ್ಟ್ ವತಿಯಿಂದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಕಾವೇರಿ ವಿವಾದ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾವೇರಿ ವಿವಾದದ ಬಗ್ಗೆ ಮತ್ತಷ್ಟು ಅರಿವು ಮೂಡಿಸಿದರು. ಜಲ ಸಂರಕ್ಷಣೆಗೆ ಸ್ಥಳೀಯ ಹೋರಾಟ, ಸರ್ಕಾರದ ಯೋಜನೆಗಳ ಅವಶ್ಯಕತೆ ಬಗ್ಗೆ ತಿಳಿಸಿದರು.
೧೮೦೭ ರಲ್ಲಿ ಮೈಸೂರು ಸಂಸ್ಥಾನದಲ್ಲಿ ಕೆರೆಗಳ ಜೀರ್ಣೋದ್ಧಾರ ಸಂದರ್ಭ ಮದ್ರಾಸ್ ಪ್ರದೇಶಕ್ಕೆ ಸೇರಿದ ತಂಜಾವೂರಿನಲ್ಲಿ ರೈತರು ಮೊದಲ ಪ್ರತಿಭಟನೆ ಮೂಲಕ ವಿರೋಧ ವ್ಯಕ್ತಪಡಿಸಿದರು. ಹೂಳು ತೆಗೆಯುವ ಮತ್ತು ನಾಲೆಗಳನ್ನು ದುರಸ್ತಿ ಮಾಡುವುದರಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುವ ಬಗ್ಗೆ ಆರೋಪಿಸಿ ಮದ್ರಾಸ್ ಸರ್ಕಾರ ಸೂಚಿಸಿತ್ತು. ಮೈಸೂರಿನ ರೆಸಿಡೆಂಟ್ ಕರ್ನಲ್ ವಿಲಕ್ಸ್, ಈ ಬಗ್ಗೆ ತನಿಖೆ ಮಾಡಿ ಆಪಾದನೆಗಳನ್ನು ಆಧಾರ ರಹಿತವೆಂದು ತಿಳಿಸಿದ್ದರು. ಇದರೊಂದಿಗೆ ೧೮೦೭ ರಲ್ಲಿ ಆರಂಭಗೊAಡ ಕಾವೇರಿ ನದಿಯ ಅನಿಯಂತ್ರಿತ ಹರಿವಿನ ಬೇಡಿಕೆಯು ಎರಡು ರಾಜ್ಯಗಳ ನಡುವೆ ಎರಡು ಶತಮಾನಗಳಿಗೂ ಹೆಚ್ಚು ಕಾಲ ವಿವಾದದ ಪ್ರಾರಂಭ ಎಂದು ಕರೆಸಿಕೊಳ್ಳುವಂತಾಗಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಹೂಳು ತೆಗೆಯಲು ವಿರೋಧಿಸುವ ತಮಿಳುನಾಡು ೨೦೨೧ ರಲ್ಲಿ ನೀರು ಸಂರಕ್ಷಣೆಗಾಗಿ ೬೫.೧೦ ಕೋಟಿ ರೂ. ವೆಚ್ಚದಲ್ಲಿ ೬೪೭ ಕಾಮಗಾರಿಯಲ್ಲಿ ೪೦೬೧ ಕಿ. ಮೀ. ನಷ್ಟು ಹೂಳು ತೆಗೆದಿರುವ ಬಗ್ಗೆ ಹೇಳಿಕೊಂಡಿದೆ. ಸಮರ್ಥ ಕಾಲುವೆಗಳ ಮೂಲಕ ನೀರಾವರಿ ವ್ಯವಸ್ಥೆಯೊಂದಿಗೆ ಕೃಷಿಯನ್ನು ಪೋಷಿಸುವ ಅನಿವಾರ್ಯತೆ ಇದೆ. ಹೂಳು ತೆಗೆದು ನೀರು ಸಂಗ್ರಹಿಸುವುದರಿAದ ಕಾವೇರಿ ಹರಿವು ತಮಿಳುನಾಡಿಗೆ ಸಿಗುವುದಿಲ್ಲ ಎಂಬ ಉದ್ದೇಶದಿಂದ ವಿವಾದ ಇಂದಿಗೂ ಮುಂದುವರಿದಿದೆ ಎಂದು ಅಭಿಪ್ರಾಯಿಸಿದರು.
೧೮೨೩-೨೪ ರಲ್ಲಿ ಬರ, ಕಾಲರಾ ರೋಗ, ಜಲಕ್ಷಾಮದಿಂದಾಗಿ ಕೃಷಿಕರು ಬೆಳೆ ತೆಗೆಯಲಾಗದೆ ಭೂ ಕಂದಾಯ ಕಟ್ಟದೆ ಪರಿತಪಿಸಿದ ದಿನಗಳು ಕೂಡ ಕಳೆದುಹೋಗಿವೆ. ಈಸ್ಟ್ ಇಂಡಿಯಾ ಕಂಪೆನಿಯು ಇಂತಹ ಕಾಲಘಟ್ಟದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಆಡಳಿತ ಸಂದರ್ಭ ಬಲವಂತ ವಸೂಲಿಗೂ ಮುಂದಾಗಿತ್ತು. ಇಂತಹ ಘಟನೆಗೂ ಕಾವೇರಿ ಜಲವಿವಾದ ಜೀವಂತವಾಗಿರಲು ಕಾರಣ ಎಂದು ತಿಳಿಸಿದರು. ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಅಧ್ಯಕ್ಷ ಕರ್ನಲ್ ಚೆಪ್ಪುಡಿರ ಪಿ. ಮುತ್ತಣ್ಣ ಮಾತನಾಡಿ, ಕೊಡಗಿನ ಪ್ರವಾಸೋದ್ಯಮದಿಂದ ಬೌಗೋಳಿಕವಾಗಿ ಅಪಾಯ ಹೆಚ್ಚಾಗುತ್ತಿದೆ. ಜಲ ಸಂರಕ್ಷಣೆ, ಕಾವೇರಿ ನದಿ ಮೂಲಕ ನೀರು ಒದಗಿಸುತ್ತಿರುವ ಕೊಡಗು ಪ್ರಾಕೃತಿಕವಾಗಿ ಪೋಷಣೆಯಾಗಬೇಕಿದೆ. ಕಾವೇರಿ ನದಿ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ಕಾವೇರಿ ಕೊಳ್ಳ ಪ್ರದೇಶ ರಕ್ಷಣೆಗೆ ಮುಂದಾಗಬೇಕಿದೆ. ಕೊಡಗಿನ ಭೌಗೋಳಿಕ ವಿಸ್ತೀರ್ಣ ಮರ, ಕಾಡು, ಜೀವ ಸಂಕುಲಗಳ ಪೋಷಣೆಗೆ ಮಾತ್ರ ಸೀಮಿತವಾಗಬೇಕು ಎಂದು ಒತ್ತಾಯಿಸಿದರು.
ಅರಣ್ಯ ಮಹಾವಿದ್ಯಾಲಯ ಡೀನ್ ಡಾ. ಜಿ. ಎಂ. ದೇವಗಿರಿ ಮಾತನಾಡಿ, ಕಾವೇರಿ ವಿವಾದ ಪುಸ್ತಕ ಕಾವೇರಿ ನದಿಯ ಜಲಮೂಲ ರಕ್ಷಣೆ, ಜಲಮೂಲ, ಉಪನದಿಗಳ ಮಾರ್ಗವನ್ನು ಸೂಚಿಸಿದ್ದು, ಪರಿಸರ ಸಂರಕ್ಷಣೆ ಅವಶ್ಯ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಬಿ. ಎ. ಪೂಣಚ್ಚ ಪುಸ್ತಕದ ಮೂಲಕ ದಾಖಲಾಗಿರುವ ಸತ್ಯಾಂಶದಿAದ ಕಾವೇರಿ ರಕ್ಷಣೆ, ನೀರಿನ ಬಳಕೆಗೆ ಕೃಷಿ ಕ್ಷೇತ್ರ ವಿಸ್ತರಣೆ ಅವಶ್ಯ ಎಂದರು.
ಆರ್. ರನೀಶ್ ಹಾಗೂ ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಕಾರ್ಯದರ್ಶಿ ಚೆಪ್ಪುಡಿರ ಶರಿ ಸುಬ್ಬಯ್ಯ ನಿರೂಪಿಸಿದರು. ಪುತ್ತಾಮನೆ ವಿದ್ಯಾ ಜಗದೀಶ್ ಕಾವೇರಿ ಹಾಡಿನ ಮೂಲಕ ಪ್ರಾರ್ಥಿಸಿದರು. ವಿದ್ಯಾರ್ಥಿಗಳು ಹಾಗೂ ರೈತ ಸಂಘದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.