ವೀರಾಜಪೇಟೆ, ಮೇ ೨೫: ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಒಂದೇ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದು ಸಮಸ್ಯೆ ಉಂಟಾಯಿತು. ಏಕಾಏಕಿ ಮಳೆ ಸುರಿದ ಪರಿಣಾಮವಾಗಿ ಮಟನ್ ಮಾರ್ಕೆಟ್ ಜಂಕ್ಷನ್ ಬಳಿ ಸಂಪೂರ್ಣ ಜಲಾವೃತಗೊಂಡಿತು.
ಬೆಳಿಗ್ಗೆಯಿಂದಲೇ ಎಡೆಬಿಡದೆ ಸುರಿದ ಧಾರಾಕಾರ ಮಳೆಗೆ ನೀರು ರಸ್ತೆಯಲ್ಲಿ ಹರಿದು ವಾಹನ ಚಾಲಕರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸಿದರು.
ವೀರಾಜಪೇಟೆ-ಗೋಣಿಕೊಪ್ಪಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ ನೀರು ಹೊಳೆಯಂತೆ ಹರಿಯತೊಡಗಿತು. ಮಧ್ಯಾಹ್ನ ಸುರಿದ ಮಳೆ ನೀರು ರಸ್ತೆಯ ಮೇಲೆಯೇ ಹರಿದ ಕಾರಣ ಹೊಳೆಯಂತೆ ಕಾಣುತ್ತಿತ್ತು. ಇದರಿಂದ ವಾಹನ ಸವಾರರಿಗೆ ತೊಂದರೆ ಎದುರಾಯಿತು.
(ಮೊದಲ ಪುಟದಿಂದ)ಭ ಪಕ್ಕದಲ್ಲಿರುವ ಅಂಗಡಿಯವರು ತೊಂದರೆ ಅನುಭವಿಸಿದರು. ರಸ್ತೆಯಲ್ಲಿ ನೀರು ತುಂಬಿ ಹರಿದ ಪರಿಣಾಮ ಅಕ್ಕಪಕ್ಕದ ಅಂಗಡಿಗಳಿಗೆ ನೀರು ನುಗ್ಗಿತ್ತು. ಮಟನ್ ಮಾರ್ಕೆಟ್ ಬಳಿ ಇರುವ ರಾಜಕಾಲುವೆ, ಚರಂಡಿಗಳಲ್ಲಿ ತ್ಯಾಜ್ಯಗಳು, ತುಂಬಿಕೊAಡ ಪರಿಣಾಮ ನೀರು ಸರಿಯಾಗಿ ಚರಂಡಿ ಮೂಲಕ ಹರಿಯಲು ಸಾಧ್ಯವಾಗದೇ ರಸ್ತೆ ಮೇಲೆ ಹರಿಯಿತು. ಪರಿಣಾಮ ಕಾರೊಂದು ನೀರಿನಲ್ಲಿ ಸಿಲುಕಿಕೊಂಡು ಚಲಿಸಲು ಸಾದ್ಯವಾಗದೆ ನಿಂತು ಹೋಯಿತು. ನೀರಿನೊಳಗೆ ಚಲಿಸಿಕೊಂಡು ಬಂದಿದ್ದ ಒಮಿನಿ ಕಾರೊಂದು ನೀರಿನ ನಡುವೆ ರಸ್ತೆ ಮಧ್ಯೆ ನಿಂತು ಹೋದ ಘಟನೆಯೂ ನಡೆಯಿತು. ಸಾರ್ವಜನಿಕರು ಹಿಂಬದಿಯಿAದ ತಳ್ಳಿ ವಾಹನ ಚಾಲನೆ ಮಾಡಲು ಸಹಕರಿಸುತ್ತಿದ್ದ ದೃಶ್ಯವೂ ಕಂಡುಬAತು.
ಸುಮಾರು ಅರ್ಧ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೆಲವು ದ್ವಿಚಕ್ರ ವಾಹನ ಸವಾರರೂ ತಳ್ಳಿಕೊಂಡು ಹೋಗುವ ಸನ್ನಿವೇಶವೂ ಎದುರಾಗಿತ್ತು. ಪುರಸಭೆ ಸಮರ್ಪಕ ಚರಂಡಿ ವ್ಯವಸ್ಥೆ ಮಾಡದ ಪರಿಣಾಮ ಮಳೆ ನೀರು ಹರಿಯಲು ಸಾಧ್ಯವಾಗದೇ ಈ ಘಟನೆಗೆ ಕಾರಣವಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಗ್ರಾಮೀಣ ಭಾಗದಲ್ಲೂ ಸಮಸ್ಯೆ
ಗ್ರಾಮೀಣ ಪ್ರದೇಶಗಳಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ. ಪರಿಣಾಮ ಗಾಳಿಗೆ ಮರದ ಕೊಂಬೆ ರೆಂಬೆಗಳು ಮುರಿದು ಬೀಳುತ್ತಿವೆ. ವಿವಿಧೆಡೆ ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಕೆಲವು ಕಡೆಗಳಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಕಳೆದೆರಡು ದಿನಗಳಿಂದ ಮಳೆ ಬಿರುಸು ಪಡೆದುಕೊಂಡು ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿಯಾಗಿದೆ. ನಿರಂತರ ಮಳೆ ಸುರಿಯುತ್ತಿದ್ದು ಬೆಟ್ಟ ಗುಡ್ಡದ ಮೇಲೆ, ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವವರ ಮನೆಗಳಲ್ಲಿ ಆತಂಕ ಮನೆ ಮಾಡಿದೆ. ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಬಿದ್ದಿರುವುದರಿಂದ ಚೆಸ್ಕಾಂ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ನೀರಿನ ಮಟ್ಟ ಏರಿಕೆ
ಬೇತ್ರಿ, ಕೊಂಡAಗೇರಿ, ಚಾಮಿಯಾಲ, ಕದನೂರು, ಬೋಯಿಕೇರಿ ಮುಂತಾದ ಕಡೆ ಸೇತುವೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ನದಿಪಾತ್ರದಲ್ಲಿರುವ ಬೆಟ್ಟ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ಆತಂಕಗೊAಡಿದ್ದಾರೆ. ಅವರಿಗೆ ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ತಾಲೂಕು ಆಡಳಿತ ಸೂಚನೆ ನೀಡಿದೆ. ನಿರಂತರ ಗಾಳಿ ಮಳೆಯಾಗುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮಳೆ ನಿಂತರೆ ಸಾಕು ಎಂಬ ಸ್ಥಿತಿಗೆ ಜನ ಬಂದಿದ್ದಾರೆ.
ನಿರAತರ ಮಳೆಯಿಂದಾಗಿ ಕಾಫಿತೋಟ, ಗದ್ದೆಗಳು ಜಲಾವೃತಗೊಂಡಿವೆ. ಮಳೆಯೊಂದಿಗೆ ಭಾರಿ ಗಾಳಿ ಬೀಸುತ್ತಿದ್ದು ಯಾವಾಗ ಮರಗಳು ಬಂದು ಮನೆಗೆ ಅಪ್ಪಳಿಸಿ ಬಿಡುತ್ತದೆಯೋ ಎಂಬ ಭಯದಲ್ಲಿ ಗ್ರಾಮೀಣ ಪ್ರದೇಶದ ಜನ ಬದುಕುತ್ತಿದ್ದಾರೆ. ಇದರೊಂದಿಗೆ ಮೈ ಕೊರೆಯುವ ಚಳಿ ಥರಗುಟ್ಟುವಂತೆ ಮಾಡಿದೆ.
ದಾಖಲೆ ಮಳೆ
ವೀರಾಜಪೇಟೆ ವಿಭಾಗದ ಆರ್ಜಿ, ಬೇಟೋಳಿ, ಹೆಗ್ಗಳ, ಕೆದಮುಳ್ಳೂರು, ಬಿಟ್ಟಂಗಾಲ, ನಾಲ್ಕೇರಿ, ಕದನೂರು, ಕಾಕೋಟುಪರಂಬು, ಕಂಡAಗಾಲ, ಚೆಂಬೆಬೆಳ್ಳೂರು, ಪಾಲಂಗಾಲ, ದೇವಣಗೇರಿ, ಹಾಲುಗುಂದ, ಒಂಟಿಯAಗಡಿ, ಕಣ್ಣಂಗಾಲ, ಐಮಂಗಲ, ಬಿಳುಗುಂದ, ಅಮ್ಮತ್ತಿ, ಹೊಸೂರು, ಹೊಸಕೋಟೆ, ಕೊಮ್ಮೆತೋಡು, ಮಗ್ಗುಲ, ಐಮಂಗಲ, ಬಾಡಗ, ರುದ್ರಗುಪ್ಪೆ, ಕರಡ, ಕಡಂಗ, ಬೇತ್ರಿ, ಕಿಗ್ಗಾಲು, ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಐಮಂಗಲ, ಕೊಮ್ಮೆತೋಡು, ಬಿಳುಗುಂದ ಅಮ್ಮತ್ತಿ, ಕದನೂರು, ಬಿಟ್ಟಂಗಾಲ, ಆರ್ಜಿ ಭಾಗದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದೆ.
ವಿದ್ಯುತ್ ಸಮಸ್ಯೆ
ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿ ಗ್ರಾಮಗಳಲ್ಲಿ ಕತ್ತಲಾವರಿಸಿದೆ. ಕೆದಮುಳ್ಳೂರು, ಕದನೂರು, ದೇವಣಗೇರಿ, ಆರ್ಜಿ ಬೇಟೋಳಿ, ಹೆಗ್ಗಳ, ಚೆಂಬೆಬೆಳ್ಳೂರು, ಬಿಟ್ಟಂಗಾಲ, ಕಾಕೋಟುಪರಂಬು, ಕುಟ್ಟಂದಿ, ಶೆಟ್ಟಿಗೇರಿ, ಕಂಡAಗಾಲ ಸೇರಿದಂತೆ ಪೆರುಂಬಾಡಿ, ಕಿರುಮಕ್ಕಿ, ಇತರೆಡೆಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಚೆಸ್ಕಾಂ ಇಲಾಖೆ ಸಿಬ್ಬಂದಿಗಳು ಹಗಲು ರಾತ್ರಿಯೆನ್ನದೆ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದನ್ನು ಸರಿಪಡಿಸಲು ಹರಸಾಹಸ ಪಡುತ್ತಿದ್ದಾರೆ.
ನೆಟ್ವರ್ಕ್ ಸಮಸ್ಯೆ
ನಿರಂತರ ಸುರಿಯುತ್ತಿರುವ ಮಳೆಯಿಂದ ಹಾಗೂ ವಿದ್ಯುತ್ ಸಮಸ್ಯೆಯಿಂದ ಗ್ರಾಮೀಣ ಭಾಗಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಂಟಾಗಿದೆ. ಕೆದಮುಳ್ಳೂರು, ಪಾಲಂಗಾಲ, ತೋರ, ಹೆಗ್ಗಳ, ಬೋಯಿಕೇರಿ ಈ ಭಾಗಗಳಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದೆ ಜನರು ಕಂಗಾಲಾಗಿದ್ದಾರೆ. ಗಾಳಿ ಮಳೆಯ ಕಾರಣ ಮನೆಯಿಂದ ಹೊರಬರಲಾರದ ಸ್ಥಿತಿಯಲ್ಲಿದ್ದಾರೆ.