ಕುಶಾಲನಗರ, ಮೇ ೨೪: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮಸ್ತ ಮದರಸಗಳಲ್ಲಿ ಕೇಂದ್ರದ ನಿರ್ದೇಶನದ ಮೇರೆಗೆ ನಡೆಯುತ್ತಿರುವ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಕುಶಾಲನಗರದ ದಾರುಲ್ ಉಲೂಮ್ ಮದರಸದಲ್ಲಿ ನಡೆಯಿತು. ಮಾದಕತೆ ಮಾರಣಾಂತಿಕವಾಗಿದ್ದು, ಅದರ ವಿರುದ್ಧ ಸೆಟೆದು ನಿಲ್ಲಲು ಪ್ರತಿಜ್ಞೆ ಸ್ವೀಕರಿಸಲಾಯಿತು. ಮದರಸ ಪ್ರಾಂಶುಪಾಲ ಎಂ. ತಮ್ಲೀಖ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಬಿವಿ ಅಧ್ಯಕ್ಷ ಶಕೀರ್ ಫೈಝಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾದಕತೆಯನ್ನು ತಡೆಯಲು ನಾವು ಪ್ರತಿಜ್ಞಾ ಬದ್ಧರಾಗಿದ್ದೇವೆ ಎಂದು ಖತೀಬರಾದ ಶಾಫಿ ಫೈಝಿ ಇರ್ಫಾನಿ ಹಾಗೂ ಸಂಚಾಲಕ ಯಾಸೀನ್ ಫೈಝಿ ಸಿದ್ದಾಪುರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಾದಕ ಮುಕ್ತ ಸಮಾಜವನ್ನು ನಿರ್ಮಿಸಲು ವಿದ್ಯಾರ್ಥಿಗಳಿಂದ ಸಹಿ ಶೇಖರಣೆ ನಡೆಸಿ ಮುಖ್ಯಮಂತ್ರಿಗೆ ತಲುಪಿಸಲು ತೀರ್ಮಾನಿಸಲಾಯಿತು. ಈ ಸಂದರ್ಭ ಮಹಲ್ ಕಾರ್ಯದರ್ಶಿ ಅಬ್ದುಲ್ ಮಜೀದ್, ಸಹಕಾರ್ಯದರ್ಶಿ ಮಹಮ್ಮದಾಲಿ, ಯೂತ್ ಕಾರ್ಯದರ್ಶಿ ನೂರುಲ್ಲಾ ಮತ್ತು ಅಬ್ದುಲ್ ಜಲೀಲ್, ಅಧ್ಯಾಪಕರಾದ ಉನೈಸ್ ಫೈಝಿ, ನಫೀರ್ ಮುಸ್ಲಿಯಾರ್, ರಾಝಿಕ್ ರೆಹ್ಮಾನಿ, ಜಾಬಿರ್ ಅಝ್ಹರಿ ಮತ್ತು ಅಶ್ರಫ್ ಅಝ್ಹರಿ, ಹಂಸ ಮುಸ್ಲಿಯಾರ್ ಹಾಗೂ ಮುಶ್ತಾಖ್ ದಾರಿಮಿ, ಎಸ್ಕೆಎಸ್ ಬಿವಿ ಅಧ್ಯಕ್ಷ ಅರ್ಶಾದ್, ಕೋಶಾಧಿಕಾರಿ ಅಮೀನ್, ಕಾರ್ಯದರ್ಶಿ ನಿಯಾಸ್ ಇದ್ದರು.