ಕುಶಾಲನಗರ, ಮೇ ೨೪ : ಅರಣ್ಯ ಇಲಾಖೆ ವತಿಯಿಂದ ೨೦೧೬ - ೧೭ ನೇ ಸಾಲಿನಲ್ಲಿ ಬರೋಬ್ಬರಿ ರೂ. ೪೮ ಲಕ್ಷ ವ್ಯಯಿಸಿ ನಿರ್ಮಾಣ ಮಾಡಿದ್ದ ಇಲಾಖೆಯ ತಡೆಗೋಡೆಯನ್ನು ಉರುಳಿಸಿ ಖಾಸಗಿ ವ್ಯಕ್ತಿಯೊಬ್ಬರು ಗೇಟು ಅಳವಡಿಸಿ ಖಾಸಗಿ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿರುವ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷö್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದ ಕಾವೇರಿ ನಿಸರ್ಗಧಾಮದ ಕಾವೇರಿ ನದಿ ದಂಡೆಗೆ ಹೊಂದಿಕೊAಡAತೆ ಇರುವ ಖಾಸಗಿ ಭೂಮಿಯಲ್ಲಿ ಪ್ರವಾಸಿ ಉದ್ಯಮ ಆರಂಭಿಸುವ ಉದ್ದೇಶದಿಂದ ಈ ರೀತಿ ಸರ್ಕಾರದ ಆಸ್ತಿಯನ್ನು ಹಾನಿ ಮಾಡಿ ಖಾಸಗಿಯಾಗಿ ಗೇಟು ಅಳವಡಿಸಿಕೊಂಡರೂ ಕೂಡ ಸಂಬAಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ತಮಗೆ ಏನೂ ತೋಚದಂತೆ ಮೌನವಹಿಸಿರುವುದರ ಹಿಂದೆ ಅತ್ಯಂತ ದೊಡ್ಡ ಲಾಬಿ ನಡೆದಿರುವ ಬಗ್ಗೆಯೂ ಸಾರ್ವಜನಿಕರು ದೂರಿದ್ದು ಕೂಡಲೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

೧೭/೧೦/೨೦೦೮ ರಲ್ಲಿ ಕರ್ನಾಟಕದ ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ನಿಸರ್ಗಧಾಮಕ್ಕೆ ಹೊಂದಿಕೊAಡAತಿರುವ ಬಳ್ಳೂರು ಗ್ರಾಮದ ಸರ್ವೆ ನಂಬರ್ ೬೦ ರ ೦.೫೯ ಎಕರೆ ಜಾಗವನ್ನು ೧೭/೧೦/೨೦೦೮ ರಲ್ಲಿ ಇಲಾಖಾ ವಶಕ್ಕೆ ಪಡೆದು ಕಾವೇರಿ ನಿಸರ್ಗಧಾಮಕ್ಕೆ ಸಂಚರಿಸಲು ಪ್ರವಾಸಿಗರು ಹಾಗೂ ಇಲಾಖೆಯವರಿಗೆ ಅನಾನೂಕೂಲವಾಗದಂತೆ ಅಗತ್ಯವಿದ್ದ ಜಾಗವನ್ನು ಸ್ವಾಧೀನಪಡಿಸಿ ಪಶ್ಚಿಮ ಭಾಗದಲ್ಲಿ ರೂ. ೪೮ ಲಕ್ಷ ವೆಚ್ಚದಲ್ಲಿ ಅರಣ್ಯ ಇಲಾಖೆ ವತಿಯಿಂದ ತಡೆಗೋಡೆ ನಿರ್ಮಿಸಿ ಹದ್ದುಬಸ್ತು ಗುರುತಿಸಲಾಗಿತ್ತು.

ಇನ್ನೊಂದೆಡೆ ಇದೇ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು ವಾರ್ಷಿಕ ರೂ. ೬೦ ರಿಂದ ೭೦ ಲಕ್ಷ ಆದಾಯ ಇಲಾಖೆಗೆ ಬರುತ್ತಿರುವ ಕಾರಣ ಪ್ರವಾಸಿಗರ ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ಇಲಾಖೆಯ ಹಿತದೃಷ್ಟಿಯಿಂದ ಈ ಜಾಗವನ್ನು ವಾಹನಗಳ ನಿಲುಗಡೆಗೆ ಮೀಸಲಿರಿಸಬೇಕೆಂದು ೨೯/೦೧/೨೦೧೧ರಲ್ಲಿ ವಲಯ ಅರಣ್ಯಾಧಿಕಾರಿಗಳು ಪತ್ರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಕೂಡ ಸಲ್ಲಿಸಿದ್ದರು.

ಅಲ್ಲದೇ ಮಾದಪಟ್ಟಣ ಗ್ರಾಮದ ಸರ್ವೆ ನಂಬರ್ ೧೦೩/೧, ೧೦೩/೩ ರ ಜಾಗದಲ್ಲಿ ರಸ್ತೆಯಾಗಿ ಜಾಗವನ್ನು ಈಗಾಗಲೇ ಮೀಸಲಿಡಲಾಗಿದೆ. ಅರಣ್ಯ ಇಲಾಖೆಯ ಸುಪರ್ದಿಗೆ ಒಳಪಡುವ ಯಾವುದೇ ಜಾಗವನ್ನು ಅರಣ್ಯ ಪ್ರದೇಶವಾಗಿ ಪರಿಗಣಿಸುವ ಬಗ್ಗೆ ರಿಟ್ ಪಿಟಿಷನ್

ನಂ. ೨೦೨/೧೯೯೫ರ ಪ್ರಕರಣದಲ್ಲಿ ಭಾರತದ ಮಾನ್ಯ ಉಚ್ಚ ನ್ಯಾಯಾಲಯವು

೧೨/೧೨/೧೯೯೬ರ ತೀರ್ಪಿನಲ್ಲಿ ಸ್ಪಷ್ಟವಾಗಿ ಆದೇಶಿಸಿರುವುದರಿಂದ ಅರಣ್ಯ ಇಲಾಖಾಧಿಕಾರಿಗಳು ಅರಣ್ಯ ಇಲಾಖೆಯ ಗಡಿಯ ಸಂರಕ್ಷಣೆ ಮಾಡದೇ ನಿರ್ಲಕ್ಷ್ಯ ತೋರಿರುವುದರಿಂದ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.