ಮಡಿಕೇರಿ, ಮೇ ೨೩: ೨ ಹಾಗೂ ೪ನೇ ಶನಿವಾರ ಸೇರಿದಂತೆ ಭಾನುವಾರದಂದು ಜಿಲ್ಲೆಯ ಒಂದು ಉಪನೋಂದಣಿ ಕಚೇರಿಯಲ್ಲಿ ಸೇವೆ ನೀಡುವಂತೆ ಕರ್ನಾಟಕ ಸರಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶಿಸಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅನ್ವಯಿಸುವಂತೆ ಈ ಆದೇಶ ಮಾಡಿದ್ದು, ಜೂನ್ ೧ ರಿಂದ ಡಿ. ೨೮ರ ತನಕ ಬರುವ ೨-೪ನೇ ಶನಿವಾರ ಮತ್ತು ಭಾನುವಾರ ರಜಾದಿನಗಳಂದು ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ನಿಗದಿಪಡಿಸಿದ ದಿನಾಂಕಗಳAದು ಕರ್ತವ್ಯ ನಿರ್ವಹಿಸಿದ ಕಚೇರಿಗೆ ಮುಂದಿನ ಮಂಗಳವಾರವನ್ನು ರಜಾ ದಿನವನ್ನಾಗಿ ಘೋಷಿಸಲಾಗಿದೆ. ಜಿಲ್ಲೆಯ ಒಂದು ಸಬ್ರಿಜಿಸ್ಟಾçರ್ ಕಚೇರಿ ರಜೆ ದಿನದಲ್ಲಿಯೂ ಸೇವೆ ನೀಡಲಿದೆ.