ಮಡಿಕೇರಿ, ಮೇ ೨೩: ಮದೆ ಗ್ರಾಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ರೂ. ೧೦ ಲಕ್ಷ ಅನುದಾನದಲ್ಲಿ ಮದೆ ಮಾದೂರಪ್ಪ ದೇವಸ್ಥಾನಕ್ಕೆ ೧೫೦ ಮೀಟರ್ ಕಾಂಕ್ರೀಟ್ ರಸ್ತೆಗೆ ಭೂಮಿಪೂಜೆಯನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಪ್ರಗತಿಪರ ರೈತ ಕೆಮ್ಮಾರನ ನವೀನ್ ಬಿದ್ದಪ್ಪ, ದೇವಸ್ಥಾನದ ತಕ್ಕಮುಖ್ಯಸ್ಥರಾದ ಮುಕ್ಕಾಟಿ ಸುನಿಲ್, ತೊಟತಮ್ಮಂಡ ಕಾಶಿ ನೆರವೇರಿಸಿದರು. ಗ್ರಾಮದ ಹಿರಿಯರಾದ ಮುಕ್ಕಾಟಿ ಲೋಭಯ್ಯ, ಕೊಟೆ ಜಗನ್ನಾಥ ಮತ್ತು ಗ್ರಾಮಸ್ಥರುಗಳಾದ ಕಿಮ್ಮುಡಿ ಸೋಮಣ್ಣ, ಪಟ್ಟಡ ಕುಮಾರ, ಕೋಲ್ಪೆ ಪುಟ್ಟ, ಕೊಲ್ಯದ ಶಿವಪ್ರಸಾದ್, ಮುದ್ಯನ ಕಿಶನ್, ಕೀರ್ತಿಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.