ಕೂಡಿಗೆ, ಮೇ ೨೨: ಸಾಕು ಹಂದಿಗಳ ಅಸಹಜ ಸಾವಿನ ಹಿನ್ನೆಲೆ ಹಾರಂಗಿ ಸಮೀಪದ ಕಾಳಿದೇವನ ಹೊಸೂರು ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

೬೦ಕ್ಕೂ ಹೆಚ್ಚು ಹಂದಿಗಳು ನಿಗೂಢ ಕಾಯಿಲೆಯಿಂದ ಬಲಿ ಆಗಿವೆ ಎಂಬ ಮಾಹಿತಿಯ ಮೇರೆಗೆ ಕೀಟಶಾಸ್ತçಜ್ಞ ಮಂಜುನಾಥ, ಎಪಿಡೆಮಿ ಯಾಲಜಿಸ್ಟ್ ಕಿಶೋರ್, ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿ ಕಾರಿಗಳಾದ ವಿಜೇಂದ್ರ, ಶ್ರೀನಿವಾಸ ಅವರುಗಳು ಕಾಳಿದೇವನ ಹೊಸೂರು ಗ್ರಾಮಕ್ಕೆ ಭೇಟಿ ನೀಡಿ ಹಂದಿಗಳ ಸಾಕಾಣಿಕೆ ಕೇಂದ್ರವನ್ನು ಪರೀಶೀಲನೆ ನಡೆಸಿದರು.

ಹಂದಿಗಳಿಗೆ ಕಾಡುವ ಮೆದುಳು ಜ್ವರದ ಬಗ್ಗೆ ಸಾಕಾಣಿಕೆದಾರರಿಗೆ ತಜ್ಞರು ಮಾಹಿತಿಯನ್ನು ನೀಡಿ, ಹಂದಿ ಆರೈಕೆ ಮಾಡುವ ಸಮಯದಲ್ಲಿ ಕೈಗೆ ಗ್ಲೌಸ್ ಹಾಗೂ ಮಾಸ್ಕ್ ಧರಿಸುವಂತೆ ಸಲಹೆ ನೀಡಿದರು.

ಹಂದಿ ಸಾಕಾಣಿಕೆ ಕೇಂದ್ರದ ಸಿಬ್ಬಂದಿಗೆ ಯಾವುದೇ ಜ್ವರದ ಲಕ್ಷಣಗಳು ಕಂಡು ಬಂದಿಲ್ಲ. ಈ ಸಂದರ್ಭ ಬಸವನಹಳ್ಳಿಯ ಹಿರಿಯ ಆರೋಗ್ಯ ನಿರೀಕ್ಷಕ ಜನಾರ್ಧನ, ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರೀಕ್ಷಕ ಸಂಜಯ್ ಹಾಜರಿದ್ದರು.