ಚಂದ್ರಮೋಹನ್ ಎಂ.ಎನ್.

ಕುಶಾಲನಗರ, ಮೇ ೨೨ : ಕಳೆದ ಹಲವು ವರ್ಷಗಳಿಂದ ಸರಕಾರದ ಅನುಮೋದನೆಯೊಂದಿಗೆ ನಡೆಯಬೇಕಾಗಿದ್ದ ಹಾರಂಗಿ ಅಣೆಕಟ್ಟು ಹಿನ್ನೀರಿನ ಭಾಗ ಸೇರಿದಂತೆ ಜಲಾನಯನ ಪ್ರದೇಶ ಗಳಲ್ಲಿ ಹಲವೆಡೆ ನಡೆಯಬೇಕಾಗಿದ್ದ ಬಹುಕೋಟಿಯ ಯೋಜನೆ ಯೊಂದು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಳೆದ ಮೂರು ಕಾಮಗಾರಿ ಆಮೆ ಗತಿಯಲ್ಲಿ ಕುಂಟುತ್ತಾ ಸಾಗುತ್ತಿರುವುದು ಬೆಳಕಿಗೆ ಬಂದಿದೆ.

ಹಾರಂಗಿ ಜಲಾನಯನ ಪ್ರದೇಶದ ಜಲ ಮೂಲಗಳ ಸಂರಕ್ಷಣೆ ಅಭಿವೃದ್ಧಿ ಕಾಮಗಾರಿ ಕಳೆದ ೨೦೨೨ ರಲ್ಲಿ ಆರಂಭಗೊAಡಿದ್ದರೂ ಇನ್ನೂ ಶೇ. ೧೦ ರಷ್ಟು ಕೆಲಸ ಕಾರ್ಯಗಳು ಪ್ರಗತಿ ಸಾಧಿಸಿಲ್ಲ.

೨೦೧೮ರ ನಂತರ ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪದ ನಡುವೆ ಸಿಲುಕಿಕೊಂಡ ಹಾರಂಗಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ನದಿಯಲ್ಲಿ ಹೂಳು ಸೇರುವುದ ರೊಂದಿಗೆ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕೂಡ ಬಹುತೇಕ ಕುಸಿತ ಕಂಡು ಬಂದಿದೆ.

ಈ ಹಿನ್ನಲೆಯಲ್ಲಿ ಸರಕಾರ ಸುಮಾರು ೧೩೧ ಕೋಟಿ ವೆಚ್ಚದಲ್ಲಿ ಜಲಾನಯನ ಪ್ರದೇಶಗಳ ಅಭಿವೃದ್ಧಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದಲ್ಲಿ ತಡೆಗೋಡೆ ನಿರ್ಮಾಣ ಸೇರಿದಂತೆ ಜಲ ಮೂಲಗಳ ಸಂರಕ್ಷಣೆಗಾಗಿ ಪರಿಸರ ಪೂರಕವಾದ ಯೋಜನೆ ಗಳನ್ನು ಈ ಕಾಮಗಾರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಗೇಬಿಯನ್ ತಂತ್ರಜ್ಞಾನ ಅಳವಡಿಸಿಕೊಂಡು ಹಲವಾರು ಕಡೆ ಅರಣ್ಯದ ಅಂಚಿನಲ್ಲಿ ನದಿ ತಟಗಳಿಗೆ ಸೇರಿದಂತೆ ಕಾಮಗಾರಿ ಹಾಗೂ ಗ್ರಾಮಗಳ ಸಂಪರ್ಕಕ್ಕೆ ಸೇತುವೆಗಳ ನಿರ್ಮಾಣ ಮತ್ತು ಜಲಾಶಯದಲ್ಲಿ ತುಂಬಿರುವ ಈ ಯೋಜನೆಯ ಪ್ರಮುಖ ಕೆಲಸವಾಗಿದೆ.

ಕಾವೇರಿ ನೀರಾವರಿ ನಿಗಮದ ಮೂಲಕ ಶಿವ ಸ್ಟçಕ್ಚರ್ಸ್ಪ್ ಪ್ರೆöÊವೇಟ್ ಲಿಮಿಟೆಡ್ ಎನ್ನುವ ಸಂಸ್ಥೆ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಆದರೆ ಯಾವುದೇ ಪೂರ್ವ ತಯಾರಿ ನಡೆಸದೆ ಈ ಕಾಮಗಾರಿ ನಡೆಯುತ್ತಿದ್ದು ಇದಕ್ಕೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಕೂಡ ಸಂಬAಧಿಸಿದ ಇಲಾಖೆಗಳು ವಿಫಲಗೊಂಡಿರುವುದು ಸ್ಥಳಕ್ಕೆ ತೆರಳಿದ ‘ಶಕ್ತಿ’ಗೆ ಗೋಚರಿಸಿದೆ.

ಕಂದಾಯ ಇಲಾಖೆ ಅರಣ್ಯ ಇಲಾಖೆ ಸ್ಥಳೀಯ ಆಡಳಿತಗಳು ಕಾಮಗಾರಿಯ ಅಗತ್ಯ ಕಾರ್ಯ ಯೋಜನೆಗಳಿಗೆ ಅನುಮತಿ ಪತ್ರ ನೀಡಬೇಕಾಗಿದ್ದು ಇನ್ನೂ ಕೂಡ ಈ ಪತ್ರ ವ್ಯವಹಾರ ಸರಿಯಾಗಿ ನಡೆದಿಲ್ಲ ಎನ್ನುವುದು ಇತ್ತೀಚೆಗೆ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಮಗಾರಿಗೆ ಸಂಬAಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಖಚಿತಗೊಂಡಿದೆ.

ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರು ಈ ಸಂಬAಧ ಪ್ರಗತಿಯ ಬಗ್ಗೆ ಚರ್ಚೆ ನಡೆಸಲು ಸಂಬAಧಿಸಿದ ಇಲಾಖೆಗಳ ಸಭೆಯನ್ನು ಹಾರಂಗಿಯಲ್ಲಿ ಕರೆದಿದ್ದು ಅಧಿಕಾರಿಗಳು ಸಮರ್ಪಕ ಉತ್ತರ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದು ಈ ಹಿನ್ನಲೆಯಲ್ಲಿ ಶಾಸಕರು ಗುತ್ತಿಗೆ ಪಡೆದ ಸಂಸ್ಥೆಯ ಅಧಿಕಾರಿಗಳು ಮತ್ತು ಹಾರಂಗಿ ನೀರಾವರಿ ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಮಗಾರಿ ಆರಂಭಗೊAಡು ಈಗಾಗಲೇ ಮೂರು ವರ್ಷಗಳು ಸಂದಿದ್ದು ೨೦೨೫ರ ಸೆಪ್ಟೆಂಬರ್ ಅಂತ್ಯದೊಳಗೆ ಒಪ್ಪಂದ ಕರಾರು ಮುಗಿದು ಕಾಮಗಾರಿ ಸಂಪೂರ್ಣ ಗೊಳ್ಳಬೇಕಾಗಿದೆ.

ಯೋಜನೆಯ ಪ್ರಕಾರ ಗೇಬಿಯನ್ ವಾಲ್ ನಿರ್ಮಾಣ, ರಿಟೇನಿಂಗ್ ವಾಲ್ ಮತ್ತು ಸಂಬAಧಿಸಿದ ಹಾಗೂ ಸಣ್ಣಪುಟ್ಟ ಸೇತುವೆಗಳ ನಿರ್ಮಾಣ ಅಲ್ಲಲ್ಲಿ ಆಗಬೇಕಾಗಿದೆ.

ಇದರೊಂದಿಗೆ ನದಿಯಲ್ಲಿ ತುಂಬಿರುವ ಹೂಳನ್ನು ತೆರೆವು ಗೊಳಿಸುವ ಕೆಲಸ ಕೂಡ ಸಾಗಬೇಕಾಗಿದೆ.

ಮಕ್ಕಂದೂರು ಮಾದಾಪುರ ಗರಗಂದೂರು ಪಂಚಾಯಿತಿ ವ್ಯಾಪ್ತಿಗಳ ಹಟ್ಟಿಹೊಳೆ, ಹಮ್ಮಿಯಾಲ, ನಂದಿಮೊಟ್ಟೆ ಮುಂತಾದ ಕಡೆಗಳ ಜಲಾನಯನ ಪ್ರದೇಶಗಳಲ್ಲಿ ಕಾಮಗಾರಿಗಳು ತಕ್ಷಣ ಪೂರ್ಣ ಗೊಳ್ಳಬೇಕಾಗಿದೆ. ಮಳೆಗಾಲ ಆರಂಭಗೊAಡು ನದಿಯಲ್ಲಿ ನೀರಿನ ಹರಿವು ಪ್ರಾರಂಭಗೊAಡರೆ ಕಾಮಗಾರಿಗೆ ತೊಡಕು ಉಂಟಾಗುವುದು ನಿಶ್ಚಿತ. ಜೊತೆಗೆ ಹಿಂದಿನ ವ್ಯಾಪ್ತಿಯಲ್ಲಿ ಅರ್ಧಂಬರ್ಧ ಕಾಮಗಾರಿಯಿಂದ ಭಾರಿ ಪ್ರಮಾಣದ ಸಮಸ್ಯೆಗಳು ಸೃಷ್ಟಿಯಾಗುವ ಸಾಧ್ಯತೆಯೂ ಕಂಡು ಬಂದಿದೆ

ಈ ಪ್ರದೇಶಗಳಲ್ಲಿ ನದಿಯಿಂದ ಹೂಳು

(ಮೊದಲ ಪುಟದಿಂದ) ತೆರವುಗೊಳಿಸುವುದು ಗೇಬಿಯನ್ ಗೋಡೆ ನಿರ್ಮಾಣ ಕಾಲು ಸೇತುವೆ ನಿರ್ಮಾಣ ತಡೆಗೋಡೆ ನಿರ್ಮಾಣ ತೂಗುಸೇತುವೆ ನಿರ್ಮಾಣ ಮತ್ತಿತರ ಕಾಮಗಾರಿಗಳು ಚಾಲನೆಯ ಹಂತದಲ್ಲಿ ಇವೆ. ಸಂಬAಧಿಸಿದ ಇಲಾಖೆಗಳಿಂದ ಈ ಕಾಮಗಾರಿಗಳಿಗೆ ಅನುಮತಿ ಇನ್ನಷ್ಟೇ ಹೊರ ಬೀಳಬೇಕಾಗಿದೆ. ಸಮರ್ಪಕವಾಗಿ ಪತ್ರ ವ್ಯವಹಾರ ನಡೆಸಿದಲ್ಲಿ ಪರಿಶೀಲಿಸಿ, ಮರ ತೆರವುಗೊಳಿಸಲು ನಿಯಮಾನುಸಾರ ಅನುಮತಿ ಕಲ್ಪಿಸಲಾಗುವುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದ್ದಾರೆ. ಕಂದಾಯ ಇಲಾಖೆಗೆ ಸಂಬAಧಿಸಿದAತೆ ಈ ವ್ಯಾಪ್ತಿಯಲ್ಲಿ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಕಂದಾಯ ಇಲಾಖೆಗಳಿಂದ ಅಗತ್ಯವಿರುವ ಅನುಮತಿ ಪಡೆಯಬೇಕಾಗಿದೆ.

ಆದರೆ ಇದುವರೆಗೆ ಯಾವುದೇ ರೀತಿಯ ಪೂರ್ಣ ಪ್ರಮಾಣದ ಕೆಲಸ ಆಗದೆ ಬಹುತೇಕ ಕಾಮಗಾರಿ ನೆನಗುದಿಗೆ ಬಿದ್ದಿದೆ.

ಈ ವ್ಯಾಪ್ತಿಯಲ್ಲಿ ಸುಮಾರು ೬೦೦ಕ್ಕೂ ಅಧಿಕ ಮರಗಳನ್ನು ತೆರವುಗೊಳಿಸುವ ಕೆಲಸವು ಸಾಗಬೇಕಾಗಿದೆ ಇದಕ್ಕೆ ಕೂಡ ಅರಣ್ಯ ಇಲಾಖೆಯಿಂದ ಅನುಮತಿ ದೊರೆತಿಲ್ಲ. ಜಲಾನಯನ ಪ್ರದೇಶಗಳಲ್ಲಿ ನದಿ ಮತ್ತು ಖಾಸಗಿ ಜಮೀನುಗಳ ಗಡಿ ಗುರುತು ಮಾಡುವುದು ಸೇರಿದಂತೆ ನಿಯಮಾನುಸಾರ ಆಗಬೇಕಾದ ಬಹುತೇಕ ಕೆಲಸಗಳು ಇನ್ನೂ ನಡೆದಿಲ್ಲ ಎಂಬುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಾಮಗಾರಿಗೆ ಅಗತ್ಯವಿರುವ ಸಾಮಗ್ರಿಗಳ ಕೊರತೆ ಕೂಡ ಕಂಡುಬAದಿದ್ದು ಇದಕ್ಕೆ ಸಂಬAಧಿಸಿದAತೆ ಕಲ್ಲು ಕೋರಿಗಳಿಗೆ ಅಗತ್ಯವಿರುವ ಅನುಮತಿಯನ್ನು ಪಡೆಯುವಲ್ಲಿ ಕೂಡ ಸಂಬAಧಿಸಿದೆ ಗುತ್ತಿಗೆದಾರರು ಹಾಗೂ ನೀರಾವರಿ ನಿಗಮ ವಿಫಲವಾಗಿದೆ.

ಸಾಮಗ್ರಿಗಳನ್ನು ಕಲೆಹಾಕಲು ಬೇಕಾದ ಪ್ರದೇಶವನ್ನು ಕೂಡ ಇನ್ನೂ ಗುರುತಿಸಿಲ್ಲ ಎನ್ನುವುದು ಈ ಕಾಮಗಾರಿಯ ವೇಗಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು.

ಅಗತ್ಯವಿರುವ ಸ್ಥಳೀಯ ಸಂಸ್ಥೆಗಳು ಸರ್ವೇ ಇಲಾಖೆ ವಿದ್ಯುತ್ ಇಲಾಖೆ ಸೇರಿದಂತೆ ಕಂದಾಯ, ಪರಿಸರ ಇಲಾಖೆಗಳಿಂದ ಅಗತ್ಯವಿರುವ ಪತ್ರ ವ್ಯವಹಾರ ಕೂಡ ಇನ್ನೂ ಈ ಸಂಸ್ಥೆಗಳು ಮಾಡದಿರುವುದು ಕಾಮಗಾರಿಯ ವೇಗ ಕುಂಠಿತವಾಗಲು ಪ್ರಮುಖ ಕಾರಣವಾಗಿದೆ. ಕಾಮಗಾರಿ ನಡೆಸುವ ಸಂಸ್ಥೆ ಕೂಡ ಅಗತ್ಯವಿರುವ ಯಂತ್ರೋಪಕರಣಗಳು ಮತ್ತು ಮಾನವ ಸಂಪನ್ಮೂಲವನ್ನು ಬಳಸಲು ವಿಫಲವಾಗಿರುವುದು ಇಲ್ಲಿ ಎದ್ದು ಕಾಣುತ್ತಿದೆ. ಕಾಮಗಾರಿಯ ಮೇಲುಸ್ತುವಾರಿ ವಹಿಸಿರುವ ಸಂಸ್ಥೆಯ ಪ್ರಮುಖರು ಕೂಡ ಈ ಕಾಮಗಾರಿಯ ನಿಧಾನ ಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆ ಪಡೆದ ಸಂಸ್ಥೆಯ ಆಸಕ್ತಿಯ ಕೊರತೆ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ ಎನ್ನುವುದು ಕಾವೇರಿ ನೀರಾವರಿ ನಿಗಮದ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ರಘುಪತಿ ಅವರ ಪ್ರತಿಕ್ರಿಯೆಯಾಗಿದೆ. ಇನ್ನು ೧೫ ದಿನಗಳ ಒಳಗೆ ಎಲ್ಲಾ ತೊಡಕುಗಳನ್ನು ನಿವಾರಿಸುವುದರೊಂದಿಗೆ ಇಲಾಖೆಗಳ ಅನುಮತಿ ಪಡೆದು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಒಪ್ಪಂದದ ಕರಾರಿನಂತೆ ೨೦೨೫ ಸೆಪ್ಟೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ ಎಂದು ಸಂಬAಧಿಸಿದ ಗುತ್ತಿಗೆದಾರರು ಹಾಗೂ ನೀರಾವರಿ ನಿಗಮದ ಅಧಿಕಾರಿಗಳಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಗತ್ಯವಿರುವ ಮರಗಳನ್ನು ಮಾತ್ರ ನಿಯಮಾನುಸಾರ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಟ್ಟಿಹೊಳೆ, ತಂತಿಪಾಲ ಮುಂತಾದಡೆ ಜೆಸಿಬಿ ಯಂತ್ರ ಬಳಸಿ ನದಿ ತಡೆಗಳನ್ನು ಕೊರೆಯಲಾಗಿದ್ದು ಇದನ್ನು ಮಳೆಗಾಲದ ಅಂತ್ಯದೊಳಗೆ ತಡೆಗೋಡೆ ನಿರ್ಮಾಣ ಮಾಡದಿದ್ದಲ್ಲಿ ಕೆಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆಯೂ ಅಧಿಕವಾಗಿದೆ ಎನ್ನುವುದು ಅಲ್ಲಿನ ಗ್ರಾಮಸ್ಥರ ದೂರಾಗಿದೆ.

ಒಟ್ಟಾರೆ ಇಂತಹ ಬೃಹತ್ ಯೋಜನೆ ಒಂದು ಪ್ರಸಕ್ತ ಮೂಲಗಳ ಪ್ರಕಾರ ಬಹುತೇಕ ನೆನೆಗುದಿಗೆ ಬಿದ್ದಿದ್ದು ಕಾಮಗಾರಿಯ ವೇಗ ಕುಂಠಿತಗೊAಡಲ್ಲಿ ಒಪ್ಪಂದದ ಕರಾರಿನ ಪ್ರಕಾರ ಪೂರ್ಣಗೊಳ್ಳುವುದು ಬಹುತೇಕ ಅಸಾಧ್ಯ ಎನ್ನುವುದು ಈ ಭಾಗದ ಜನರ ಅಭಿಪ್ರಾಯವಾಗಿದೆ.