*ಗೋಣಿಕೊಪ್ಪ, ಮೇ ೨೧ : ಬುಡಕಟ್ಟು ಜನರು ಬೇಡು ಹಬ್ಬಕ್ಕೆ ಬುಧುವಾರ ಚಾಲನೆ ದೊರೆಯಿತು. ಗೋಣಿಕೊಪ್ಪ, ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವೇಷಧಾರಿ ಭಕ್ತರು ಜನರನ್ನು ಬೈಯುವ ಮೂಲಕ ದೇವರನ್ನು ಆರಾಧಿಸಿದರು. ಮಧ್ಯಾಹ್ನ ೩ ಗಂಟೆಗೆ ಕಾಣಿಸಿಕೊಳ್ಳುವ ವೇಷಧಾರಿಗಳು ಬೆಳಿಗ್ಗೆ ೧೦ ಗಂಟೆಯಿAದಲೇ ಪಟ್ಟಣದಲ್ಲಿ ಕಾಣಿಸಿಕೊಂಡರು. ಜನರಿಗೆ ಹೆಚ್ಚಿನ ಕಿರಿಕಿರಿ ಉಂಟಾಗದAತೆ ಪೊಲೀಸರು ಬಿಗಿ ಕಾನೂನು ಕ್ರಮ ಕೈಗೊಂಡು ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ತುಂತುರು ಮಳೆಯ ನಡುವೆ ವೇಷಧಾರಿ ಭಕ್ತರು ಅಶ್ಲೀಲ ಶಬ್ದಗಳನ್ನು ಉಚ್ಚರಿಸಿ ದೇವರಿಗೆ ಅರ್ಪಿಸುತ್ತಿದ್ದರು. ಗುರುವಾರ ದೇವಸ್ಥಾನದ ಆವರಣದಲ್ಲಿ ಬೃಹತ್ ಸಂಖ್ಯೆಯಲ್ಲಿ ವೇಷಧಾರಿಗಳು ಹಾಗೂ ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ದೇವಸ್ಥಾನದ ಆಡಳಿತ ಮಂಡಳಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದೆ. ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ ನೆರೆದ ಭಕ್ತಾದಿಗಳಿಗೆ ವನವಾಸಿ ಕಲ್ಯಾಣ ವತಿಯಿಂದ ಅನ್ನದಾನವನ್ನು ನೀಡಲಾಗುವುದು.ಕೂಡಿಗೆ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಮೀಪದಲ್ಲಿರುವ ಗಂಧದ ಹಾಡಿಯ ನಿವಾಸಿಗಳು ಬೇಡು ಹಬ್ಬ ಆಚರಿಸಿದರು. ವೇಷಧಾರಿಗಳು ಕೂಡಿಗೆ ಸರ್ಕಲ್, ಕೂಡುಮಂಗಳೂರು ಸರ್ಕಲ್ ವ್ಯಾಪ್ತಿಯಲ್ಲಿ ಕುಣಿದು ಹಬ್ಬ ಆಚರಣೆ ಮಾಡಿದರು. ಐಗೂರು : ದಕ್ಷಿಣ ಕೊಡಗಿನಲ್ಲಿ ಆಚರಿಸುವ ಸಂಪ್ರದಾಯಿಕ ಬೇಡು ಹಬ್ಬದ ಆಚರಣೆಯು ಐಗೂರು ವ್ಯಾಪ್ತಿಯಲ್ಲಿ ಆಚರಿಸಿದರು.

ಐಗೂರು ವ್ಯಾಪ್ತಿಯ ಸಜ್ಜಳ್ಳಿಯಿಂದ ಹೊರಟ ವಿಶೇಷ ವೇಷಧಾರಿ ಭಕ್ತರ ಗುಂಪು ವಾದ್ಯಗೋಷ್ಠಿಗಳೊಂದಿಗೆ ಗ್ರಾಮಗಳ ಮನೆ, ಅಂಗಡಿಗಳಿಗೆ ತೆರಳಿ ನೃತ್ಯ ಮಾಡುತ್ತಾ ಕಾಣಿಕೆಗಳನ್ನು ಸ್ವೀಕರಿಸಿದರು. ನಂತರ ತಿತಿಮತಿ ಗ್ರಾಮದ ಒಂಟಿಅAಗಡಿಗೆ ತೆರಳಿ ಕುಲದೇವರಾದ ಭದ್ರಕಾಳೇಶ್ವರನಿಗೆ ಹರಕೆಯನ್ನು ಸಲ್ಲಿಸುವುದಾಗಿ ತಂಡದ ಮುಖ್ಯಸ್ಥ ಸುರೇಶ ತಿಳಿಸಿದ್ದಾರೆ.