ಮಡಿಕೇರಿ, ಮೇ ೯ : ಮಡಿಕೇರಿಯ ಪ್ರವಾಸಿ ತಾಣವಾದ ರಾಜಾಸೀಟ್ ಬಳಿ ವಾಹನ ನಿಲುಗಡೆ ಶುಲ್ಕ ವಸೂಲಿ ಮಾಡುವ ಯುವಕರ ಮೇಲೆ ಹಲ್ಲೆ ಮಾಡಿದ ಆರೋಪಿದ ಮೇಲೆ ಬಿಜೆಪಿ ಮುಖಂಡರ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ರಾಜಾಸೀಟ್ ಬಳಿ ಶುಲ್ಕ ವಸೂಲಿ ಮಾಡುತ್ತಿದ್ದ ಹನುಮಂತಪ್ಪ, ಜಲಾಲುದ್ದೀನ್, ನಿಶಾದ್ ಎಂಬವರುಗಳ ಮೇಲೆ ಮಡಿಕೇರಿ ನಗರಸಭಾ ಸದಸ್ಯ, ನಗರ ಮಂಡಲ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ನಾಮನಿರ್ದೇಶಿತ ಸದಸ್ಯ ಕವನ್ ಕಾವೇರಿಯಪ್ಪ ಹಾಗೂ ಜಿ.ಆರ್. ಗಿರೀಶ್ ಎಂಬವರುಗಳು ನಿನ್ನೆ ಸಂಜೆ ಹಲ್ಲೆ ಮಾಡಿದ್ದಾರೆ ಎಂದು ಹನುಮಂತಪ್ಪ ನಗರ ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ಹಲ್ಲೆ ಮಾಡಿದ್ದಲ್ಲದೆ ಯುವಕರ ಬಳಿ ಇದ್ದ ರೂ. ೫೦ ಸಾವಿರ ನಗದು, ವಾಕಿಟಾಕ್, ಹಣ ವಸೂಲಿ ಯಂತ್ರಗಳನ್ನು ಕಸಿದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬAಧ ಮೊಕದ್ದಮೆ ದಾಖಲಿಸಿಕೊಂಡಿರುವ ನಗರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.