ದಕ್ಷಿಣ ಕೊಡಗು ಒಕ್ಕಲಿಗರ ಕ್ರೀಡಾಕೂಟ
ಪೊನ್ನಂಪೇಟೆ, ಮೇ ೮: ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಶಾಲೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ೩ ದಿನಗಳ ಕಾಲ ನಡೆದ ಒಕ್ಕಲಿಗರ ಪರ್ವ ಒಕ್ಕಲಿಗರ ಕ್ರೀಡಾಕೂಟದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಒಕ್ಕಲಿಗ ಸಮುದಾಯದವರು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸುವ ಮೂಲಕ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು.
ಮೈತಾಡಿ ಮತ್ತು ಕೈಕೇರಿ ತಂಡಗಳ ನಡುವೆ ನಡೆದ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೈಕೇರಿ ತಂಡ ನಿಗದಿತ ೪ ಓವರ್ಗಳಲ್ಲಿ ೩ ವಿಕೆಟ್ ಕಳೆದುಕೊಂಡು ೪೩ ರನ್ ಕಲೆಹಾಕಿತು.
ಮೈತಾಡಿ ತಂಡವು ನಾಯಕ ಸಾಗರ್ ಹಾಗೂ ಅಲೋಕ್ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ೩.೨ ಓವರ್ಗಳಲ್ಲಿ ಗುರಿಮುಟ್ಟುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕೈಕೇರಿ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಕೋಟೆಕೊಪ್ಪ ಎ ತಂಡ ಮೂರನೇ ಸ್ಥಾನ ಪಡೆದುಕೊಂಡಿತು. ಮಕ್ಕಳ ಕ್ರಿಕೆಟ್ ಪಂದ್ಯದಲ್ಲಿ ಕೋಟೆಕೊಪ್ಪ ತಂಡ ಮೈತಾಡಿ ತಂಡದ ವಿರುದ್ಧ ಜಯಗಳಿಸಿ ವಿನ್ನರ್ಸ್ ಟ್ರೋಫಿ ಪಡೆದುಕೊಂಡರೆ, ಮೈತಾಡಿ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮ್ಯಾನ್ ಆಫ್ ದಿ ಸೀರೀಸ್ ಆಗಿ ಮೈತಾಡಿ ತಂಡದ ಪ್ರಮೋದ್ ಬೆಸ್ಟ್ ಬ್ಯಾಟ್ಸ್ಮನ್ ಹಾಗೂ ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಮೈತಾಡಿ ತಂಡದ ಸಾಗರ್, ಬೆಸ್ಟ್ ಬೌಲರ್ ಆಗಿ ಹಾತೂರು ತಂಡದ ಯಶ್ವಂತ್, ಬೆಸ್ಟ್ ಫೀಲ್ಡರ್ ಆಗಿ ಹಾತೂರು ತಂಡದ ಭವಿನ್, ಬೆಸ್ಟ್ ವಿಕೆಟ್ ಕೀಪರ್ ಆಗಿ ಕೈಕೇರಿ ತಂಡದ ಭವಿತ್, ಬೆಸ್ಟ್ ಕ್ಯಾಚ್ ಕಿರಣ್ ಮೈತಾಡಿ, ಎಮರ್ಜಿಂಗ್ ಪ್ಲೇಯರ್ ಆಗಿ ಮೈತಾಡಿ ತಂಡದ ಗ್ಯಾನ್, ಸ್ಟೆöÊಲಿಶ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿ ಕೋಟೆಕೊಪ್ಪದ ಶಭರೀಶ್, ಗೇಮ್ ಚೇಂಜರ್ ಆಗಿ ಕೈಕೇರಿ ತಂಡದ ಚರಣ್, ಬೆಸ್ಟ್ ಟೀಮ್ ಪ್ರಶಸ್ತಿ ಯನ್ನು ರಾಯಲ್ ತಿತಿಮತಿ ತಂಡ ಪಡೆದುಕೊಂಡಿತು.
ಹಗ್ಗಜಗ್ಗಾಟ ಪುರುಷರ ವಿಭಾಗದಲ್ಲಿ ಕೋತೂರು ಮಾರಮ್ಮ ತಂಡ ಪ್ರಥಮ, ಕೋಟೆಕೊಪ್ಪ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಹಾತೂರು ತಂಡ ಪ್ರಥಮ, ಕೋಟೆಕೊಪ್ಪ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಥ್ರೋಬಾಲ್ನಲ್ಲಿ ಕಣ್ಣಂಗಾಲ ಪ್ರಥಮ, ಕೋಟೆಕೊಪ್ಪ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಭಾರದ ಗುಂಡು ಎಸೆತ ಸ್ಪರ್ಧೆ ಪುರುಷರ ವಿಭಾಗದಲ್ಲಿ ವಿಠಲ ಪ್ರಥಮ, ರಂಜನ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ರೇಷ್ಮ ಪ್ರಥಮ, ರಮ್ಯ ದ್ವಿತೀಯ, ಓಟದ ಸ್ಪರ್ಧೆ ಬಾಲಕರ ವಿಭಾಗದಲ್ಲಿ ಹಿತೇಶ್ ಪ್ರಥಮ, ಜಯೇಶ್ ದ್ವಿತೀಯ, ಬಾಲಕಿಯರಲ್ಲಿ ಭಕ್ತಿ ಪ್ರಥಮ, ಪುಣ್ಯಶ್ರೀ ದ್ವಿತೀಯ, ೧೪ ರಿಂದ ೧೮ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ತಷ್ವಿ ಪ್ರಥಮ, ಸ್ಮಿತಾ ದ್ವಿತೀಯ, ಬಾಲಕರ ವಿಭಾಗದಲ್ಲಿ ವಿವಿನ್ ಪ್ರಥಮ, ದೃಶ್ಯ ದ್ವಿತೀಯ, ಸ್ಲೋ ಸೈಕಲ್ ರೇಸ್ ಬಾಲಕಿಯರ ವಿಭಾಗದಲ್ಲಿ ಪರಿಣಿತ ಪ್ರಥಮ, ಹೃತ್ವಿಕ ದ್ವಿತೀಯ, ಬಾಲಕರ ವಿಭಾಗದಲ್ಲಿ ಯಶ್ವಂತ್ ಪ್ರಥಮ, ಮಿತ್ತಲ್ ದ್ವಿತೀಯ, ಗೋಣಿಚೀಲ ಓಟ ಬಾಲಕರ ವಿಭಾಗದಲ್ಲಿ ಗೌರವ್ ಪ್ರಥಮ, ಶ್ರೀನಿಧಿ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಚಂದನ ಗೌಡ ಪ್ರಥಮ, ಗ್ರೀಷ್ಮ ದ್ವಿತೀಯ, ಗೋಲಿ ಹೆಕ್ಕುವ ಸ್ಪರ್ಧೆಯಲ್ಲಿ ಜಶ್ವಂತ್ ಗೌಡ ಪ್ರಥಮ, ದಯಾನಿತ ದ್ವಿತೀಯ, ಫ್ಯಾನ್ಸಿ ಡ್ರೆಸ್ ನಲ್ಲಿ ಪುಣ್ಯ ಪ್ರಥಮ, ತನುಶ್ರೀ ದ್ವಿತೀಯ, ಪರ್ಲ್ ಪ್ರತಿಷ್ಠಾ, ಜಶ್ವಂತ್ ಗೌಡ ಮತ್ತು ಲಿವಾನ ತೃತೀಯ, ೬೦ ವರ್ಷ ಮೇಲ್ಪಟ್ಟ ಪುರುಷರ ನಡಿಗೆ ಸ್ಪರ್ಧೆಯಲ್ಲಿ ಗಾಂಧಿ ಪ್ರಥಮ, ಸುರೇಶ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಶಾಂತಿ ಪ್ರಥಮ, ಜಯಮ್ಮ ದ್ವಿತೀಯ, ರಂಗೋಲಿ ಸ್ಪರ್ಧೆಯಲ್ಲಿ ಚಂದ್ರಿಕ ಪ್ರಥಮ, ರೇಷ್ಮ ದ್ವಿತೀಯ, ಬೆಂಕಿ ರಹಿತ ಅಡುಗೆಯಲ್ಲಿ ಸೌಮ್ಯ ಜೀವನ್ ಪ್ರಥಮ, ಪೂರ್ಣಿಮ ಜನಕರಾಜು ದ್ವಿತೀಯ ಸ್ಥಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಕ್ಕಲಿಗ ಜನಾಂಗದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿ.ಜೆ. ದಿನೇಶ್ ಹಾಗೂ ದೀಪು ದಿನೇಶ್ ಅವರ ವತಿಯಿಂದ ಪ್ರಾರಂಭದಿAದ ಇದುವರೆಗೂ ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ವಿ.ಪಿ. ಡಾಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಹಾರಂಗಿ ನೀರಾವರಿ ಸಲಹಾ ಸಮಿತಿ ಸದಸ್ಯರಾದ ಕೆ.ಎಸ್. ಗೋಪಾಲ ಕೃಷ್ಣ, ಒಕ್ಕಲಿಗ ಯುವ ವೇದಿಕೆ ಮಾಜಿ ಅಧ್ಯಕ್ಷ ವಿ.ಎನ್. ಮಹೇಶ್, ದಾನಿಗಳಾದ ವಿ.ಡಿ. ಗಣೇಶ್, ಬೋಜಮ್ಮ, ವಿ.ಡಿ. ದೀಪು ದಿನೇಶ್, ಜ್ಯೋತಿ ಪ್ರಸನ್ನ, ವಿ. ವಸಂತ, ವಿ. ರಘು, ವಿ.ಬಿ. ವಿಠಲ, ವಿ.ಜೆ. ರಾಮಯ್ಯ, ವಿ.ಸಿ. ಕಿರಣ್, ವಿ.ಎನ್. ದಿನೇಶ್, ರಮೇಶ್ ವಿ.ಇ., ಕೀರ್ತಿ ಡಿ.ಎಸ್., ಹೆಚ್.ಜಿ. ಭವಿನ್, ರಂಜನ್. ವಿ.ಎಂ., ತಿತಿಮತಿ ಒಕ್ಕಲಿಗ ಸಂಘದ ಅಧ್ಯಕ್ಷ ಕಿರಣ್, ಕಾಫಿ ಬೆಳೆಗಾರರಾದ ವಿ.ಜಿ. ಮಧುಸೂದನ್, ಮಂಜುನಾಥ್. ವಿ.ಎನ್, ಒಕ್ಕಲಿಗ ಯುವ ವೇದಿಕೆ ಗೌರವ ಅಧ್ಯಕ್ಷ ಲೋಹಿತ್ ಗೌಡ, ಉಪಾಧ್ಯಕ್ಷ ಕೆ.ಪಿ. ಅಜಿತ್, ಕಾರ್ಯದರ್ಶಿ ವಿ.ಟಿ. ಶ್ರೇಯಸ್, ಖಜಾಂಚಿ ವಿ.ಎಸ್. ಕಿರಣ್, ಕ್ರೀಡಾ ಸಂಚಾಲಕ ವಿ.ಎಸ್. ಜಗದೀಶ್, ಸಹ ಕ್ರೀಡಾ ಸಂಚಾಲಕ ಡಿ.ಜಿ. ನಿಖಿಲ್ ಇನ್ನಿತರರು ಇದ್ದರು. ಪವನ್ ಕುಮಾರ್ ಹಾಗೂ ಚಂದನ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.
- ಚನ್ನನಾಯಕ್