ಕಣಿವೆ, ಮೇ ೮: ಕುಶಾಲನಗರ ಪಟ್ಟಣದ ಬೈಚನಹಳ್ಳಿಯಲ್ಲಿರುವ ಕನ್ನಂಬಾಡಮ್ಮ ದೇವಾಲಯದ ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸಲಾಯಿತು.

ಕಳೆದ ಹತ್ತಾರು ವರ್ಷಗಳ ಹಿಂದೆ ನಿರ್ಮಿಸಿದ್ದ ದೇವಾಲಯದ ಕಟ್ಟಡ ಕಾಮಗಾರಿ ಅಪೂರ್ಣಗೊಂಡಿತ್ತು. ಹಾಗಾಗಿ ದೇಗುಲದ ಗೋಡೆಗಳ ಸುತ್ತಾ ಅರಳಿ ಮರಗಳು ಬೆಳೆದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದ್ದವು. ‘ಶಕ್ತಿ’ ಈ ಬಗ್ಗೆ ವರದಿ ಪ್ರಕಟಿಸಿತ್ತು.

ಇದರಿಂದಾಗಿ ಸಂಘಟಿತರಾದ ಗ್ರಾಮಸ್ಥರು ಸಭೆ ಸೇರಿ ಅಷ್ಟಮಂಗಲ ಪ್ರಶ್ನೆ ಹಾಕಿಸಿ ಈಗ ಇರುವ ಕಟ್ಟಡ ತೆರವುಗೊಳಿಸಿ ಹೊಸ ಗರ್ಭಗುಡಿ ನಿರ್ಮಿಸುವ ನಿರ್ಧಾರಕ್ಕೆ ಬಂದಿದ್ದರು.

ದೇವಾಲಯದ ಸಮಿತಿ ಅಧ್ಯಕ್ಷ ಬಿ.ಎಸ್. ಶಿವಕುಮಾರ್, ಪುರಸಭೆ ಸದಸ್ಯ ಜಗದೀಶ್, ಗೆಳೆಯರ ಬಳಗದ ಅಧ್ಯಕ್ಷ ಡಿ. ಶ್ರೀಕಾಂತ್, ಗ್ರಾಮಸ್ಥರು ಹಾಗೂ ಭಕ್ತಾದಿಗಳ ವಿಶ್ವಾಸ ಪಡೆದು ಹೊಸ ಗರ್ಭಗುಡಿ ನಿರ್ಮಿಸಲು ಮುಂದಾಗಿದ್ದಾರೆ.