ಕೊಡ್ಲಿಪೇಟೆ, ಮೇ ೮: ಇಲ್ಲಿನ ಕಲ್ಲುಮಠದ ಪೀಠಾಧಿಪತಿ ಶ್ರೀ ಮಹಾಂತಸ್ವಾಮೀಜಿಗಳ ಪೀಠಾರೋಹಣ ಸುವರ್ಣ ಮಹೋತ್ಸವ, ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ, ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರಸ್ವಾಮೀಜಿ ಜಯಂತಿ, ಶ್ರೀ ನಂಜುAಡಸ್ವಾಮೀಜಿ ಸಂಸ್ಮರಣೋತ್ಸವ, ಶ್ರೀ ನಂಜುAಡೇಶ್ವರ ವಿದ್ಯಾ ಸಂಸ್ಥೆಯ ೨೫ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರು ಮತ್ತು ಸಮಾಜ ಸೇವಕರನ್ನು ಸನ್ಮಾನಿಸಲಾಯಿತು.

ಕಲ್ಲುಮಠ ವಿದ್ಯಾಪೀಠ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೈಕೋರ್ಟ್ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ, ಕಿರಿಕೊಡ್ಲಿಯ ಕೆ.ಬಿ. ಬಸವಣ್ಣಯ್ಯ, ಶನಿವಾರಸಂತೆಯ ನಿವೃತ್ತ ಶಿಕ್ಷಕ ಡಿ.ಬಿ. ಸೋಮಪ್ಪ, ಬಣ್ಣಳ್ಳಿ ಪುನೀತ್, ಬಾಳುಪೇಟೆ ಎಸ್.ಡಿ. ಬಸವಣ್ಣ, ಪನ್ಯದ ಎಸ್.ಬಿ. ಶಂಕರ್, ಹಂಡ್ಲಿ ಗ್ರಾಮದ ಲಕ್ಷö್ಮಮ್ಮ ವೀರಪ್ಪ, ಶಿರಧನಹಳ್ಳಿ ಚಂದ್ರಶೇಖರ್, ರುದ್ರಪ್ಪ, ಡಾ. ಲತಾ, ಕೊಡ್ಲಿಪೇಟೆಯ ಶಿಲ್ಪಿ ಎಸ್.ಎಸ್. ವರಪ್ರಸಾದ್, ಐಗೂರಿನ ಲಲಿತಮ್ಮ ಪಾಲಾಕ್ಷ, ಮಲ್ಲಿಕಾರ್ಜುನ, ಶಿಕ್ಷಕ ಲೋಕೇಶ್, ಬಿಳಿಗವಳ್ಳಿಯ ಚಂದ್ರಕಲಾ ಕಾಂತರಾಜ್, ಕುಂಬ್ರಳ್ಳಿಯ ವಿಜಯಲಕ್ಷಿö್ಮÃ ಪರಮೇಶ್ ಅವರುಗಳನ್ನು ಸನ್ಮಾನಿಸಲಾಯಿತು.

ಶ್ರೀ ಸುತ್ತೂರು ವೀರಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ, ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಾಧಕರನ್ನು ಸನ್ಮಾನಿಸಿದರು.

ಇದೇ ಸಂದರ್ಭ ಕಲ್ಲುಮಠದ ಶಾಲೆಯಲ್ಲಿ ೧೦ ನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಉತ್ತೀರ್ಣರಾದ ಎಸ್. ಶ್ರೇಯಾ, ಶ್ರೀನಿಧಿ ಪ್ರಭು, ಬಿ.ಎನ್. ರೇಷ್ಮಾ ಅವರುಗಳನ್ನು ಸನ್ಮಾನಿಸಲಾಯಿತು.