ನವದೆಹಲಿ, ಮೇ ೮: ಪಾಕಿಸ್ತಾನ ನೆಲದಲ್ಲಿ ಭಯೋತ್ಪಾದನಾ ಕೇಂದ್ರ ಗಳನ್ನು ಗುರಿಯಾಗಿಸಿ ಭಾರತ ರಕ್ಷಣಾ ಪಡೆ ನಡೆಸಿದ ಆಪರೇಷನ್ ಸಿಂಧೂರ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನ ಸೇನಾಪಡೆಯು ತಾ.೭ರ ರಾತ್ರಿ ಉತ್ತರ ಹಾಗೂ ಪಶ್ಮಿಮ ಭಾರತ ಗಡಿಗಳಲ್ಲಿ ವಿವಿಧೆಡೆ ಭಾರತೀಯ ರಕ್ಷಣಾ ಪಡೆಯ ಕೇಂದ್ರಗಳನ್ನು ಗುರಿಯಾಗಿಸಿ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿ ಯತ್ನ ವನ್ನು ಭಾರತ ರಕ್ಷಣಾ ಪಡೆಯ ಅತ್ಯಾ ಧುನಿಕ ಏರ್ ಡಿಫೆನ್ಸ್ ಸಿಸ್ಟಮ್ ವಿಫಲಗೊಳಿಸಿದೆ.
ಈ ಬಗ್ಗೆ ದೆಹಲಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಸಮ್ಮುಖ ದಲ್ಲಿ ಕರ್ನಲ್ ಸೋಫಿಯಾ ಖುರೇಶಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಪತ್ರಿಕಾಗೋಷ್ಠಿ ಯಲ್ಲಿ ವಿವರಣೆ ನೀಡಿದರು.
ಭಾರತದ ಅವಾಂತಿಪುರ, ಶ್ರೀನಗರ, ಜಮ್ಮು, ಪಠಾಣ್ಕೋಟ್, ಅಮೃತ್ಸರ, ಕಪುರ್ತಲ, ಜಲಂದರ್, ಲುದಿಯಾನ, ಅದಾಮ್ಪುರ, ಬಟಿಂಡ, ಚಂಡೀಗರ, ನಲ್, ಫಲೋಡಿ, ಉತ್ತರ್ಲೈ ಹಾಗೂ ಬುಜ್ನಲ್ಲಿ ಪಾಕಿಸ್ತಾನ ಸೇನಾ ಪಡೆಯು ತಾ.೭ರ ರಾತ್ರಿ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದೆ. ಈ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಭಾರತೀಯ ರಕ್ಷಣಾ ಪಡೆಯ ಇಂಟಿಗ್ರೇಟೆಡ್ ಕೌಂಟರ್ ಅನ್ಮ್ಯಾನ್ಡ್ ಏರಿಯಲ್ ಸಿಸ್ಟಮ್ ಹಾಗೂ ಏರ್ ಡಿಫೆನ್ಸ್ ಸಿಸ್ಟಮ್ಗಳ ಮೂಲಕ ನಾಶಪಡಿಸಲಾಗಿದೆ ಎಂದರು.
ಪಾಕಿಸ್ತಾನಿ ಡ್ರೋನ್ಗಳನ್ನು ಭಾರತದ ಇಂಟಿಗ್ರೇಟೆಡ್ ಕೌಂಟರ್ ಅನ್ಮ್ಯಾನ್ಡ್ ಏರಿಯಲ್ ಸಿಸ್ಟಮ್, ಅಂದರೆ ಮಾನವ ರಹಿತ ವಿಮಾನಗಳು ಅಪ್ಪಳಿಸಿ ಧ್ವಂಸಗೊಳಿಸಿವೆ. ಎಸ್-೪೦೦ ಸುದರ್ಶನ ಚಕ್ರ ಕ್ಷಿಪಣಿ ಎಂದು ಖ್ಯಾತಿ ಪಡೆದಿರುವ ಭಾರತೀಯ ಏರ್ ಡಿಫೆನ್ಸ್ ಸಿಸ್ಟಮ್ನ ಗ್ರೌಂಡ್-ಟು-ಏರ್ ಕ್ಷಿಪಣಿ ಗಳು ಪಾಕಿಸ್ತಾನಿ ಕ್ಷಿಪಣಿಗಳನ್ನು ಧ್ವಂಸ ಗೊಳಿಸಿರುವುದಾಗಿ ವಿವರಿಸಿದರು.
ಪಾಕಿಸ್ತಾನಿ ದಾಳಿಗೆ ಭಾರತ ಪ್ರತಿದಾಳಿ - ಲಾಹೋರ್ ಏರ್ ಡಿಫೆನ್ಸ್ ಸಿಸ್ಟಮ್ ಧ್ವಂಸ
ಭಾರತವು ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಿ ನೆಲದಲ್ಲಿ ಕೇವಲ ಭಯೋತ್ಪಾದನಾ ಕೇಂದ್ರಗಳನ್ನಷ್ಟೆ ಗುರಿಯಾಗಿಸಿ ಧ್ವಂಸಗೊಳಿಸಿತ್ತು. ಯಾವುದೇ ಕಾರಣಕ್ಕೂ ಪಾಕಿಸ್ತಾನಿ ಸೇನೆ, ಅಲ್ಲಿನ ನಾಗರಿಕರ ಮೇಲೆ ದಾಳಿ ಮಾಡಿ ಯುದ್ಧ ಮಾಡುವ ಉದ್ದೇಶ ಹೊಂದಿಲ್ಲ ಎಂಬುದಾಗಿ ಭಾರತೀಯ ರಕ್ಷಣಾ ಪಡೆ ಸ್ಪಷ್ಟಪಡಿಸಿತ್ತು. ಆದರೂ ಪಾಕಿಸ್ತಾನಿ ಸೇನಾ ಭಾರತದ ೧೫ ಕಡೆಗಳಲ್ಲಿ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದ ಕಾರಣ, ಇವುಗಳನ್ನು ಧ್ವಂಸಗೊಳಿಸಿದ್ದಲ್ಲದೇ ಇದಕ್ಕೆ ಪ್ರತಿಕಾರವಾಗಿ ಪಾಕಿಸ್ತಾನಿ ರಕ್ಷಣಾ ಪಡೆಯ ಏರ್ ಡಿಫೆನ್ಸ್ ಸಿಸ್ಟಮ್ಗಳನ್ನು ತಾ.೮ರ ಬೆಳಿಗ್ಗೆ ಭಾರತೀಯ ರಕ್ಷಣಾ ಪಡೆಯು ಗುರಿಯಾಗಿಸಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಲಾಹೋರ್ನಲ್ಲಿದ್ದ ಏರ್ ಡಿಫೆನ್ಸ್ ಸಿಸ್ಟಮ್ ಸಂಪೂರ್ಣ ಧ್ವಂಸವಾಗಿರುವುದಾಗಿ ಇಬ್ಬರು ಅಧಿಕಾರಿಗಳು ಮಾಹಿತಿ ನೀಡಿದರು.
ಪಾಕಿಸ್ತಾನದ ದಾಳಿಗೆ ೧೬ ಭಾರತೀಯ ನಾಗರಿಕರು ಬಲಿ
ತಾ.೭ರ ರಾತ್ರಿಯಿಂದ ನಿರಂತರವಾಗಿ ಲೈನ್ ಆಫ್ ಕಂಟ್ರೋಲ್ ಸಮೀಪ ಭಾರತದ ಕುಪ್ವಾರ, ಬಾರಮುಲ್ಲ, ಉರಿ, ಪೂಂಚ್, ಮೆಂದಾರ್ ಹಾಗೂ ರಜೌರಿಯಲ್ಲಿ ಪಾಕಿಸ್ತಾನವು ಅಮಾಯಕರ ಮೇಲೆ ಆರ್ಟಿಲರಿ ಹಾಗೂ ಮಾರ್ಟಾರ್ ದಾಳಿ ನಡೆಸಿದ ಪರಿಣಾಮ ೩ ಮಹಿಳೆಯರು, ಹಾಗೂ ೫ ಮಕ್ಕಳು ಸೇರಿದಂತೆ ೧೬ ಅಮಾಯಕ ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ೫೯ ಮಂದಿ ಗಾಯಗೊಂಡಿದ್ದಾರೆ. ಪೂಂಚ್ ಜಿಲ್ಲೆಯ ಗುರದ್ವಾರದ ಮೇಲೂ ಪಾಕಿಸ್ತಾನಿ ಸೇನೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಕಾರವಾಗಿ ಭಾರತೀಯ ಭೂ-ಸೇನೆ ದಾಳಿ ನಡೆಸಿದ್ದು ಸದ್ಯದ ಮಟ್ಟಿಗೆ ಲೈನ್ ಆಫ್ ಕಂಟ್ರೋಲ್ನಲ್ಲಿ ಪಾಕಿಸ್ತಾನಿ ಸೇನೆಯ ದಾಳಿಯನ್ನು ಭಾರತವು ನಿಯಂತ್ರಿಸಿದೆ ಎಂಬುದಾಗಿಯೂ ರಕ್ಷಣಾ ಪಡೆಯ ಇಬ್ಬರು ಮಹಿಳಾ ಅಧಿಕಾರಿಗಳು ಕಾರ್ಯಾಚರಣೆ ಬಗ್ಗೆ ವಿವರಿಸಿದರು.