ಚೆಯ್ಯಂಡಾಣೆ, ಮೇ. ೮: ವೀರಾಜಪೇಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ೨೦೨೫-೨೬ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಗೋಣಿಕೊಪ್ಪಲುವಿನ ನೂರುಲ್ ಹುದಾ ಮದರಸ ಸಭಾಂಗಣದಲ್ಲಿ ವೀರಾಜಪೇಟೆ ಜಂಇಯ್ಯತುಲ್ ಮುಅಲ್ಲಿಮಿನ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಎಂ.ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್ ಹಾಗೂ ಎಂ.ಸಿ.ಅಶ್ರಫ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹನೀಫ್ ಫೈಝಿ,ಜೊತೆ ಕಾರ್ಯದರ್ಶಿಗಳಾಗಿ ಶುಹೈಬ್ ಫೈಝಿ, ಅಬ್ದುಲ್ ಮಜೀದ್ ಬಾಖವಿ, ಕೋಶಾಧಿಕಾರಿಯಾಗಿ ಅಬ್ದುಲ್ ಗನಿ ಮದನಿ, ಪರೀಕ್ಷಾ ಬೋರ್ಡ್ ಚೇರ್ಮೆನ್ ಆಗಿ ಪಿ.ಅಬ್ದುಲ್ಲ ಮುಸ್ಲಿಯಾರ್, ಡೆಪ್ಯೂಟಿ ಚೇರ್ಮನ್ರಾಗಿ ಅಬ್ದುಲ್ ರಶೀದ್ ದಾರಿಮಿ,ಎಸ್ ಕೆಎಸ್ವಿ ಬಿ ಚೇರ್ಮನ್ ರಾಗಿ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್, ಕನ್ವೀನರ್ರಾಗಿ ಮುಸ್ತಫ ಫೈಝಿ, ಮುಸಾಬಖ ಚೇರ್ಮನ್ ಆಗಿ ಅಬ್ದುಲ್ ಹಮೀದ್ ಫೈಝಿ, ಕನ್ವೀನರ್ ಆಗಿ ಅಬ್ದುಲ್ ಮಜೀದ್ ಬಾಖವಿಯವರನ್ನು ಆಯ್ಕೆ ಮಾಡಲಾಯಿತು.