ವೀರಾಜಪೇಟೆ, ಏ. ೨೯: ದಾನಗಳನ್ನು ಮಾಡುವುದರಿಂದ ಮಾನವನ ಜೀವನ ಸಾರ್ಥಕವಾಗುತ್ತದೆ ಎಂದು ವೀರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರುಗಳಾದ ರೆ.ಫಾ. ಜೇಮ್ಸ್ ಡೊಮಿನಿಕ್ ಅಭಿಪ್ರಾಯಪಟ್ಟರು. ವೀರಾಜಪೇಟೆ ಮದರ್ ಥೆರೇಸಾ ಸೇವಾ ಕೇಂದ್ರದ ವತಿಯಿಂದ ಸಂತ ಅನ್ನಮ್ಮ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ಜರುಗಿದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು. ಮನುಷ್ಯನು ದಾನ - ಧರ್ಮಗಳನ್ನು ಹೆಚ್ಚು ಮಾಡುವುದು ಸತ್ಕಾರ್ಯವಾಗಿದ್ದು ದೇವರ ಆಶೀರ್ವಾದವ ಲಭಿಸುತ್ತದೆ. ಸಮಾಜಮುಖಿ ಚಿಂತನೆಗಳಿAದ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆ ನಿಟ್ಟಿನಲ್ಲಿ ಮದರ್ ಥೆರೇಸಾ ಸೇವಾ ಕೇಂದ್ರದ ಸಾಮಾಜಿಕ ಕಳಕಳಿಯು ಶ್ಲ್ಯಾಘನೀಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮದರ್ ಥೆರೇಸಾ ಸೇವಾ ಕೇಂದ್ರದ ಅಧ್ಯಕ್ಷರು ಹಾಗೂ ಶಿಕ್ಷಣ ಇಲಾಖೆಯ ನಿವೃತ್ತ ಡಿ.ಡಿ.ಪಿ.ಐ. ಪೆರಿಗ್ರೀನ್ ಎಸ್. ಮಚ್ಚಾಡೋ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಸೇವಾ ಕೇಂದ್ರದ ವತಿಯಿಂದ ಪುಸ್ತಕಗಳನ್ನು ವಿತರಣೆ ಮಾಡುತ್ತ ಬಂದಿದ್ದು ಮೊದಲನೇ ವರ್ಷ ೮೫ ವಿದ್ಯಾರ್ಥಿಗಳಿಗೆ, ಎರಡನೇ ವರ್ಷ ೧೭೪ ವಿದ್ಯಾರ್ಥಿಗಳಿಗೆ ಹಾಗೂ ಈ ವರ್ಷ ಒಟ್ಟು ೧೫೫ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುತ್ತಿದ್ದೇವೆ ಎಂದರು. ಎಲ್.ಕೆ.ಜಿ.ಯಿಂದ ಪದವಿವರೆಗಿನ ೧೫೫ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಧರ್ಮಗುರುಗಳು ಹಾಗೂ ಸಂತ ಅನ್ನಮ್ಮ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು, ಮದರ್ ಥೆರೇಸಾ ಸೇವಾ ಕೇಂದ್ರದ ಉಪಾಧ್ಯಕ್ಷ ಮಾರ್ಟಿನ್ ಬರ್ನಾಡ್, ಕಾರ್ಯದರ್ಶಿ ಅನಿತಾ ನೋರೋನ, ಖಜಾಂಚಿ ಜೇಮ್ಸ್ ಮೆನೇಜಸ್, ಜಂಟಿ ಕಾರ್ಯದರ್ಶಿ ಅರುಣಾ ಡಿಸೋಜಾ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ವೈಲೆಟ್ ಡಿಸೋಜಾ ಸ್ವಾಗತಿಸಿ, ಪ್ರೆಸಿಲ್ಲ ಅಲ್ಮೆಡ ನಿರೂಪಿಸಿ, ಪ್ರಸನ್ನ ಪ್ರಾರ್ಥಿಸಿ ಲೀಲಾ ಮೆನೇಜಸ್ ವಂದಿಸಿದರು.