ಸೋಮವಾರಪೇಟೆ, ಏ. ೨೬: ಸಮೀಪದ ತಾಕೇರಿ ಗ್ರಾಮದಲ್ಲಿ ಸಾಂಪ್ರದಾಯಿಕವಾಗಿ ಸುಗ್ಗಿ ಆಚರಿಸಲಾಯಿತು. ಬುಧವಾರದಿಂದಲೇ ಗ್ರಾಮದಲ್ಲಿ ಕಟ್ಟುಪಾಡು ವಿಧಿಸಲಾಗಿತ್ತು.

ಶಿರುಗೌಡನ ಕುಟುಂಬದ ಸೂರ್ಯಪ್ರಕಾಶ್ ಅವರ ಮನೆಯಲ್ಲಿರುವ ಭಂಡಾರದಿAದ ಸುಗ್ಗಿ ದೇವರನ್ನು ನಿನ್ನೆ ದಿನ ಮಂಗಳವಾದ್ಯದ ಮೂಲಕ ಸುಗ್ಗಿಕಟ್ಟೆಗೆ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಸುಗ್ಗಿಯ ಹಿನ್ನೆಲೆ ಸುಗ್ಗಿ ಕಟ್ಟೆಯ ಆವರಣವನ್ನು ಸ್ವಚ್ಛಗೊಳಿಸಿ ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು.

ನAತರ ವೀಳ್ಯ ಚೆಲ್ಲುವುದು, ಹರಕೆ ಅರ್ಪಿಸುವುದು ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಸಬ್ಬಮ್ಮ ದೇವರನ್ನು ತೊಟ್ಟಿಲಲ್ಲಿ ಕೂರಿಸಿ ಉಯ್ಯಾಲೆಯಲ್ಲಿ ತೂಗಿಸಲಾಯಿತು. ದೇವರ ಮೂರ್ತಿಯನ್ನು ಮೆರವಣಿಗೆ ಮೂಲಕ ಮಂಗಳವಾದ್ಯದೊAದಿಗೆ ಉಮಾಮಹೇಶ್ವರಿ ದೇವಾಲಯಕ್ಕೆ ಕರೆತಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಮೂಲ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.

ಪೂಜಾ ಕಾರ್ಯದಲ್ಲಿ ನೂರಾರು ಭಕ್ತರು ಭಾಗವಹಿಸಿ ಈಡುಗಾಡಿ ಸೇವೆ ಸಲ್ಲಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು. ಅರ್ಚಕ ಶ್ರೀರಾಮ್ ಪೂಜಾ ಕೈಂಕರ್ಯ ನೆರವೇರಿಸಿದರು. ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್, ಪದಾಧಿಕಾರಿಗಳು ಇದ್ದರು.