ಸುಂಟಿಕೊಪ್ಪ, ಮಾ. ೨೩: ಬಡತನದಲ್ಲಿರುವ ಕಾರ್ಮಿಕರನ್ನು ಗುರುತಿಸಿ ಅವರ ಕಣ್ಣಿನ ತಪಾಸಣೆಯನ್ನು ನಡೆಸಿ ಚಿಕಿತ್ಸೆ ನೀಡುತ್ತಿರುವ ಯುಪಿಕೃತಿ ಎನ್ಜಿಓ ಸಂಸ್ಥೆಯ ಸೇವಾ ಕಾರ್ಯಕ್ರಮ ಮೆಚ್ಚುವಂತದ್ದು ಎಂದು ಮಾದಾಪುರ ಗ್ರಾ.ಪಂ. ಸದಸ್ಯ ಕೆ.ಎ. ಲತೀಫ್ ಹೇಳಿದರು.
ಮಾದಾಪುರದ ಕುಂಬೂರು ಎಸ್ಟೇಟ್ನಲ್ಲಿ ಬೆಂಗಳೂರಿನ ಯುಪಿಕೃತಿ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಕಾರ್ಮಿಕರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಜೀವನಕ್ಕೆ ಕಣ್ಣು ಅಮೂಲ್ಯವಾದದು ಎಂದೂ ಹೇಳಿದರು.
ಕುಂಬೂರು ಕಾಫಿ ಎಸ್ಟೇಟಿನ ಕಾರ್ಮಿಕರಿಗೆ ಹಾಗೂ ಹೊರ ರಾಜ್ಯದಿಂದ ಅಸ್ಸಾಂ, ಬಿಹಾರ, ಉತ್ತರ ಪ್ರದೇಶದಿಂದ ಬಂದ ವಲಸೆ ಕಾರ್ಮಿಕರ ಹಾಗೂ ಅವರ ಮಕ್ಕಳ ಕಣ್ಣಿನ ತಪಾಸಣೆ ನಡೆಸಿದ ಯುಪಿಕೃತಿ ಎನ್ಓ ಸಂಸ್ಥೆಯವರು ಜೌಷಧಿ ಹಾಗೂ ಕನ್ನಡಕ ಬೇಕಾದವರಿಗೆ ಪರಿಶೀಲಿಸಿ ಉಚಿತ ಕನ್ನಡಕ ವಿತರಿಸಿದರು.
ಯುಪಿಕೃತಿ ಸಂಸ್ಥೆಯ ಡಾ. ಚಂದನ್, ಸಂತೋಷ್, ಸುಮಂತ್ ಹಾಗೂ ಡಾ. ಕಾವ್ಯಶ್ರೀ ಈ ಸಂದರ್ಭ ಕಾರ್ಮಿಕರ ಕಣ್ಣಿನ ತಪಾಸಣೆ ನಡೆಸಿ ಸಲಹೆ ನೀಡಿದರು.