ಮಡಿಕೇರಿ, ಮಾ. ೧೧: ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ೪೦ನೇ ವಾರ್ಷಿಕೋತ್ಸವದ ಅಂಗವಾಗಿ ಮೈಸೂರಿನಲ್ಲಿ ನಡೆದ ರಾಷ್ಟçಕವಿ ಕುವೆಂಪು ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಕೊಡಗಿನ ಬರಹಗಾರ್ತಿ, ಚಿತ್ರ ನಿರ್ಮಾಪಕಿ, ನಟಿ ಹಾಗೂ ಸಹನಿರ್ದೇಶಕಿ ಈರಮಂಡ ಹರಿಣಿ ವಿಜಯ್ ಅವರಿಗೆ ವಿಶ್ವಮಾನ್ಯ ಕನ್ನಡಿಗ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡಿ ಕೆರೆ ಗೋಪಾಲ್, ಹಿರಿಯ ಸಾಹಿತಿಗಳಾದ ಡಾ. ಸಿ.ಪಿ.ಕೆ, ಕನ್ನಡಪರ ಚಿಂತಕ ಡಾ. ರಾಜಶೇಖರ್, ಪತ್ರಕರ್ತ ಡಾ.ಭೇರ್ಯ ರಾಮಕುಮಾರ್, ಮಹಾಕವಿ ಡಾ.ಲತಾ ರಾಜಶೇಖರ್, ಸಾಹಿತಿಗಳಾದ ಡಾ.ರೇವಣ್ಣ ಬಳ್ಳಾರಿ, ಡಾ.ಸೌಜನ್ಯ ಶರತ್, ನೂತನ ಕುಮಾರ್ ಬಿ.ಕೆ. ಹಾಗೂ ರೈತಪರ ಚಿಂತಕ ಸರಗೂರು ನಟರಾಜು ಅವರುಗಳ ಸಮ್ಮುಖದಲ್ಲಿ ಈರಮಂಡ ಹರಿಣಿ ವಿಜಯ್ ಪ್ರಶಸ್ತಿ ಸ್ವೀಕರಿಸಿದರು.