ಕುಶಾಲನಗರ, ನ. ೨೪: ಕುಶಾಲನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಸ್ಥಳೀಯ ಸರ್ಕಾರಿ ಬಸ್ ನಿಲ್ದಾಣ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಕುಶಾಲನಗರ ಪುರಸಭೆ ಅಧ್ಯಕ್ಷ ರಾದ ಜಯಲಕ್ಷಿö್ಮ ಚಂದ್ರು ಉದ್ಘಾಟಿಸಿ ಎರಡು ದಿನಗಳ ಕಾರ್ಯ ಕ್ರಮಗಳಿಗೆ ಶುಭ ಕೋರಿದರು. ಸಂಘದ ಕಟ್ಟಡ ನಿವೇಶನದ ದಾನಿಗಳಾದ ಜಯಶ್ರೀ ನಾಗೇಶ್ ಅವರು ಕನ್ನಡ ಧ್ವಜಾ ರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ರಾದ ಕೃಷ್ಣ ದರ್ಶನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ತಾಲೂಕು ಅಧ್ಯಕ್ಷರಾದ ಕೆ ಎಸ್ ನಾಗೇಶ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ ಎಂ ರುಕ್ಮಿಣಿ, ಸಂಘದ ಉಪಾಧ್ಯಕ್ಷರಾದ ದೇವರಾಜ್, ಗಣೇಶ್, ಮಹದೇವ್ ಗೌಡ, ಪ್ರಧಾನ ಕಾರ್ಯದರ್ಶಿ ಎಂ.ಎಸ್. ಸಂತೋಷ್ ಕುಮಾರ್ ಗೌಡ, ಕಾರ್ಯದರ್ಶಿ ಎಲ್ ಎ ಪ್ರಸನ್ನ, ಖಜಾಂಚಿ ಎಂ.ಬಿ. ಮುನೀರ್, ಮಾಜಿ ಖಜಾಂಚಿ ಜಿ ರಮೇಶ್, ಮಾಜಿ ಕಾರ್ಯದರ್ಶಿ ಪಿ ಮಂಜು, ಖಾಯಂ ಆಹ್ವಾನಿತರಾದ ವಿ.ಎನ್. ತೇಜಸ್, ಪತ್ರಕರ್ತರಾದ ಎಂ.ಎನ್. ಚಂದ್ರಮೋಹನ್ ,ರಘುಕೋಟಿ, ಟಿಆರ್ ಪ್ರಭುದೇವ್, ಶಿವರಾಜ್ ಮತ್ತು ಸಂಘದ ನಿರ್ದೇಶಕರು ಪದಾಧಿಕಾರಿಗಳು ಇದ್ದರು.
ಸಂಘದ ಮಾಜಿ ಕಾರ್ಯದರ್ಶಿ ಕೆ.ಸಿ.ದಿನೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಇದೇ ಸಂದರ್ಭ ಸಂಘದ ಆಶ್ರಯದಲ್ಲಿ ಹಿಲ್ ಬ್ಲೂಮ್ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಡಾ. ನವೀದ್ ಮತ್ತು ಡಾ ಮನೋಜ್ ಅವರ ನೇತೃತ್ವದಲ್ಲಿ ವೈದ್ಯಕೀಯ ಸಿಬ್ಬಂದಿಗಳು ಸಾರ್ವಜನಿ ಕರಿಗೆ ರಕ್ತ ಪರೀಕ್ಷೆ ರಕ್ತದೊತ್ತಡ ಇಸಿಜಿ ಮತ್ತಿತರ ಪರೀಕ್ಷೆ ಗಳನ್ನ ನಡೆಸಿಕೊಟ್ಟರು. ಮಧ್ಯಾಹ್ನ ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಮೂಹ ನೃತ್ಯ ಸ್ಪರ್ಧೆ ಏರ್ಪಡಿಸ ಲಾಗಿತ್ತು. ನಂತರ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ನಡೆಯಿತು. ಕುಶಾಲನಗರ, ನ. ೨೪: ಕುಶಾಲನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಭಾನುವಾರ ಅದ್ದೂರಿ ಮೆರವಣಿಗೆ ನಡೆಯಿತು.
ಕನ್ನಡ ರಥದೊಂದಿಗೆ ಪ್ರಮುಖ ರಸ್ತೆಗಳಲ್ಲಿ ಅಲಂಕಾರಗೊAಡ ಆಟೋರಿಕ್ಷಗಳು ಹಾಗೂ ಮಂಗಳೂರಿನ ಕಲ್ಲಡ್ಕದ ಗೊಂಬೆ ಕುಣಿತದೊಂದಿಗೆ ಮೆರವಣಿಗೆ ನಡೆಯಿತು.
ಕುಶಾಲನಗರ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಹೊರಟ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆ ಮೂಲಕ ಸಾಗಿ ಕೊಪ್ಪ ತನಕ ತೆರಳಿ ನಂತರ ಹಿಂತಿರುಗಿತು.
ಸಂಘದ ಅಧ್ಯಕ್ಷರಾದ ಕೃಷ್ಣ ದರ್ಶನ್, ಕಾರ್ಯಾಧ್ಯಕ್ಷ ಕೆ ಟಿ ಯೋಗೇಶ್, ಉಪಾಧ್ಯಕ್ಷರಾದ ದೇವರಾಜ್, ಗಣೇಶ್, ಮಹದೇವ್ ಗೌಡ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಗೌಡ, ಪ್ರಸನ್ನ, ಎಂ.ಬಿ. ಮುನೀರ್ ಮತ್ತು ನಿರ್ದೇಶಕರು ಸಲಹೆಗಾರರಾದ ಜಿ. ರಮೇಶ್, ಕೆ.ಸಿ. ದಿನೇಶ್, ಮಂಜು ಮತ್ತಿತರರು ಇದ್ದರು.
ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ರಸಮಂಜರಿ ಕಾರ್ಯಕ್ರಮದ ಬಳಿಕ ಸಮಾರೋಪ ಸಮಾರಂಭ ನಡೆಯಿತು.