ಮಡಿಕೇರಿ, ಮೇ ೩: ಶುಕ್ರವಾರ ಸಂಜೆ ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬೆಟ್ಟಗೇರಿಯಲ್ಲಿ ನಡೆದಿದೆ.

ಬೆಟ್ಟಗೇರಿಯ ಕುಟ್ಟಪ್ಪ ಎಂಬವರ ಲೈನ್‌ಮನೆಯಲ್ಲಿ ವಾಸವಿದ್ದ ಕಾರ್ಮಿಕ ಪ್ರಮಾತ್ ಗರ್ಮಾನಿ (೩೭) ಮೃತ ದುರ್ದೈವಿ. ತೋಟದ ಕೆಲಸ ಮುಗಿಸಿ ಬಂದು ಲೈನ್‌ಮನೆಯ ಒಳಭಾಗದಲ್ಲಿ ಪ್ರಮಾತ್ ಊಟ ಸೇವಿಸುತ್ತಿರುವ ಸಂದರ್ಭ ಸಿಡಿಲು ಬಡಿದಿದೆ. ಪರಿಣಾಮ ಗಂಭೀರಗೊAಡು ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದು, ತಕ್ಷಣ ಆತನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತಾದರೂ ಮಾರ್ಗಮಧ್ಯೆ ಅಸುನೀಗಿದ್ದಾನೆ.

ಮೃತ ವ್ಯಕ್ತಿ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದ ಎಂದು ತಿಳಿದು ಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಕೈಗೊಳ್ಳಲಾಗಿದೆ.