ಕೂಡಿಗೆ, ಏ ೨೫: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಲಿಂಗಪುರ ಸಮೀಪದ ಬಸರಿಗುಪ್ಪೆ ಗ್ರಾಮದಲ್ಲಿ ರಾತ್ರಿ ಜಮೀನಿನ ಉಳುಮೆ ಮಾಡುವ ಸಂದರ್ಭದಲ್ಲಿ ಟ್ರಾö್ಯಕ್ಟರ್ ಬೃಹತ್ ಕಲ್ಲಿನ ಮೇಲೆ ಹತ್ತಿದ ಪರಿಣಾಮ ಮಗುಚಿದ್ದು, ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾ. ೨೫ ರ ರಾತ್ರಿ ನಡೆದಿದೆ.

ಅಳುವಾರ ಗ್ರಾಮದಲ್ಲಿ ಜಮೀನಿನ ಉಳುಮೆ ಮಾಡುತ್ತಿದ್ದ ಆದಿಶೇಷಾ (೩೭) ಎಂಬವರು ಮೃತ ದುರ್ದೈವಿ. ಮೃತರು ಪತ್ನಿ ಸೇರಿದಂತೆ ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತರ ದೇಹವನ್ನು ಕುಶಾಲನಗರ ಸಮುದಾಯ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಹಸ್ತಾಂತರಿಸ ಲಾಯಿತು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.